ತಮ್ಮ ಅಮೋಘ ಅಭಿನಯದ ಹಿಟ್ ಸಿನಿಮಾ ನೀಡುತ್ತಾ ಏರುಮುಖದಲ್ಲಿ ಸಾಗುತ್ತಿರುವ ಸ್ಯಾಂಡಲ್ವುಡ್ ನಟ ಉಪೇಂದ್ರ ಈಗ ರಸ್ತೆ ಬದಿ ದೋಸೆ ಮಾಡಿ, ಮಾರಲು ಶುರು ಮಾಡಿದ್ದಾರೆ, ನಿಮ್ಮ ತಲೆಯಲ್ಲೇ ಏಕೆ? ಎಂಥಾ? ಎಂಬ ವಿಚಾರಗಳು ಸಾಮಾನ್ಯವಾಗಿ ಬಂದಿರುತ್ತವೆ. ಉಪೇಂದ್ರ ಸಿನಿಮಾ ಬಿಟ್ಟು ರಾಜಕೀಯ ಬರ್ತಾರೆ ಅಂತ ಸುದ್ದಿ ಇತ್ತು. ಆದ್ರೆ ಇದೇನಿದು ಸಿನೆಮಾನೂ ಇಲ್ಲ, ರಾಜಕೀಯನು ಇಲ್ಲ ದೋಸೆ ಮಾಡೋ ಕೆಲಸ ಮಾಡುತ್ತಿದ್ದಾರೆ ಅಂತಿದ್ದೀರಾ. ಮುಂದೆ ಓದಿ.
ಕನ್ನಡದ ಖ್ಯಾತ ಚಾನೆಲ್ ಉದಯ ವಾಹಿನಿಯಲ್ಲಿ ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮ ಇದೇ ಜುಲೈ 15 ರಿಂದ ರವಿವಾರದಿಂದ ಶುರು ಆಗಿದೆ. ಜನಪ್ರಿಯ ಸೆಲಬ್ರಿಟಿಗಳು ಜನ ಸಾಮಾನ್ಯರಂತೆ ಕೆಲಸ ಮಾಡಿ, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದೇ ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮದ ವಿಶೇಷ. ಈ ವಾರದ ಸಂಚಿಕೆಯಲ್ಲಿ ಆಗಮಿಸಿ ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಬೀದಿ ಬದಿಯ ಹೋಟೆಲ್ ನಲ್ಲಿ ಒಂದು ದಿನದ ಮಟ್ಟಿಗೆ ಕೆಲಸ ಮಾಡಿದ್ದಾರೆ. ಹೋಟೆಲ್ ನಲ್ಲಿ ದೋಸೆ ಮಾಡಿ, ಚಿತ್ರಾನ್ನ, ಕಾಫಿ-ಟೀ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ದೋಸೆ ಮಾರಿ ಬಂದ ಹಣದಿಂದ ಕಷ್ಟದಲ್ಲಿದ್ದ ಜನರಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವಾರದ ಸಂಚಿಕೆಯಲ್ಲಿ ಆಗಮಿಸಿದ್ದ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರು ಗಾಂಧಿ ಬಜಾರ್ ನಲ್ಲಿ ಹೂವಿನ ವ್ಯಾಪಾರ ಮಾಡಿದ್ದಾರೆ ಪುಷ್ಪಲತಾ ಎಂಬ ಮಹಿಳೆಗೆ ಸಹಾಯ ಮಾಡಿದ್ದರು. ಪುಷ್ಪಲತಾ ಅವರಿಗೆ 4 ಜನ ಹೆಣ್ಣು ಮಕ್ಕಳಿದ್ದು, ಕಡು ಬಡತದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ. ಇವರ ಕೊನೆಯ ಮಗಳು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬಡತನದ ಮಧ್ಯೆ ಚಿಕಿತ್ಸೆ ಕೊಡಿಸಲು ಇವರು ಹೆಣಗುತ್ತಿದ್ದಾರೆ. ಇವರ ಕಷ್ಟಕ್ಕೆ ಪ್ರಿಯಾಂಕ ಉಪೇಂದ್ರ ಅವರು ಕೈ ಜೋಡಿಸಿದ್ದಾರೆ ಎಂದು ತಿಳಿದು ಬಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
