ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡಗು ಅಕ್ಷರಶ ಕಂಗಾಲಾಗಿ ಹೋಗಿದೆ. ಕೇರಳ ರಾಜ್ಯ ಹಾಗು ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಕೇವಲ ಸರ್ಕಾರ ಮಾತ್ರವಲ್ಲದೆ ದೇಶದ ಮೂಲೆ ಮೂಲೆಯಿಂದ ನೆರವು ಹರಿದು ಬರುತ್ತಿವುದೇ. ಇಷ್ಟೇ ಅಲ್ಲದೆ ವಿದೇಶಗಳು ಕೋಟಿಗಟ್ಟಲೆ ನೆರವು ನೀಡಲು ಮುಂದಾಗಿವೆ ಆದರೆ ಕೇಂದ್ರ ಸರ್ಕಾರ ವಿದೇಶಿ ನೆರವು ಪಡೆಯಲು ನಿರಾಕರಿದೇ ಎಂದು ಉನ್ನತ ಮೂಲಗಳು ತಿಳಿಸಿವೆ.
ಮೂಲಗಳ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ವಿದೇಶದಿಂದ ಬರುವ ಆರ್ಥಿಕ ಸಹಾಯವನ್ನು ಒಪ್ಪಿಕೊಳ್ಳದೆ ಇರಲು ದೀರ್ಘಕಾಲದ ನೀತಿಗೆ ಬದ್ಧ ಆಗಿರಲು ತೀರ್ಮಾನ ಮಾಡಿದೆ ಎನ್ನಲಾಗಿದೆ. ಬೇರೆ ದೇಶದಿಂದ ಯಾವುದೇ ರೀತಿಯ ಹಣಕಾಸು ನೆರವನ್ನು ವಿನಯತೆಯಿಂದ ನಿರಾಕರಣೆ ಮಾಡುವಂತೆ ವಿಶ್ವದಾದ್ಯಂತ ಇರುವ ತನ್ನ ರಾಯಭಾರಿಗಳಿಗೆ ನಿರ್ದೇಶನವನ್ನು ನೀಡಿರುವ ಕೇಂದ್ರ ಸರ್ಕಾರ, ಈ ಸವಾಲನ್ನು ಎದುರಿಸಲು ಆಂತರಿಕ ಪ್ರಯತ್ನಗಳ ಮೇಲೆಯೇ ಅವಲಂಬಿತವಾಗಲು ನಿರ್ಧರಿಸಿದೆ.
ಹಿಂದಿನ ಸರ್ಕಾರವು ನೆರವು ತಿರಸ್ಕರಿಸಿತ್ತು:
ಹೌದು, 2004 ರಲ್ಲಿ ಭೀಕರ ಸುನಾಮಿ ಅಪ್ಪಳಿಸಿ ತಮಿಳುನಾಡಿನಲ್ಲಿ ಭಾರಿ ನಷ್ಟ ಸಂಭವಿಸಿತ್ತು. ಆಗ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದರು. ಆಗಲು ಕೂಡ ಅನೇಕ ದೇಶಗಳು ನೆರವಿನ ಹಸ್ತ ಚಾಚಿದ್ದವು ಆದರೆ ವಿದೇಶಿ ನೆರವು ಸ್ವೀಕಾರ ಮಾಡಿರಲಿಲ್ಲ. ಇದಾದ ಬಳಿಕ ವಿಪತ್ತು ನೆರವು ನೀತಿಯನ್ನು ರಚಿಸಿದ್ದರು. ಅದರ ಬಳಿಕ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ವಿದೇಶಗಳ ಹಣಕಾಸಿನ ನೆರವನ್ನು ಸ್ವೀಕಾರ ಮಾಡುತ್ತಿಲ್ಲ.
2005 ರ ಕಾಶ್ಮೀರ ಭೂಕಂಪ, 2013 ರ ಉತ್ತರಾಖಂಡ ಪ್ರವಾಹ ಹಾಗು 2014 ರ ಕಾಶ್ಮೀರ ಪ್ರವಾಹದಲ್ಲೂ ಕೂಡ ವಿದೇಶಿ ನೆರವು ಸ್ವೀಕಾರ ಮಾಡಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
