fbpx
ಸಮಾಚಾರ

ಈ ಕಾರಣಕ್ಕಾಗಿ ತಮ್ಮ ಫೋಟೋವನ್ನು ಹರಾಜಿಗಿಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

ತಮ್ಮ ನಟನೆಯ ಹೊರತಾಗಿಯೂ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗಷ್ಟೇ ಬೆಟ್ಟಿಂಗ್, ಪರಿಸರ, ವನ್ಯಜೀವಿ ಮತ್ತು ಅರಣ್ಯ ಸಂರಕ್ಷೆಣೆಯ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು. ಇಂಥಾ ದರ್ಶನ್ ಇದೀಗ ಮತ್ತೊಂದು ವಿಚಾರವಾಗಿ ನೆರವಾಗಲು ತಮ್ಮ ಫೋಟೋಗಳನ್ನು ಹರಾಜಿಗಿಟ್ಟಿದ್ದಾರೆ..

 

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿಯ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ಅವರ ಫಾರ್ಮ್ ಹೌಸ್, ಅಲ್ಲಿರೋ ಹಸು, ಕುದುರೆಗಳ ಕಥೆಯೆಲ್ಲ ಅಭಿಮಾನಿಗಳ ಪಾಲಿಗೆ ಹೊಸತೇನಲ್ಲ. ದರ್ಶನ್ ಮೈಸೂರು ಮೃಗಾಲಯದಲ್ಲಿನ ಕೆಲ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಲಹುತ್ತಿರೋದೂ ಕೂಡಾ ತಿಳಿದದ್ದೇ. ಇನ್ನು ಬೆಂಗಳೂರಿನ ದರ್ಶನ್ ಅವರ ಮನೆ ಮುಂದೆ ತರಹೇವಾರಿ ಪ್ರಬೇಧದ ನಾಯಿಗಳು ಕಾವಲಿಗಿರುತ್ತವೆ. ಪ್ರಾಣಿಗಳ ಬಗ್ಗೆ ಅಪಾರವಾದ ವ್ಯಾಮೋಹ ಹೊಂದಿರೋ ದರ್ಶನ್ ಅವುಗಳ ವಾಸಸ್ಥಾನವಾದ ಕಾಡುಗಳ ಮೇಲೂ ಪ್ರೀತಿ ಹೆಚ್ಚಿಸಿಕೊಂಡಿದ್ದಾರೆ.

ಈ ವಿಷ್ಯ ಈಗ ಯಾಕಪ್ಪ ಅಂದ್ರೆ ಇತ್ತೀಚಿಗೆ ದರ್ಶನ್ ‘ಕೊಳ್ಳೆಗಾಲದ ಮಲೆಮಹದೇಶ್ವರ ಸಂರಕ್ಷಿತ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕನ ಮಾಡಿದ್ದರು. ಈ ವೇಳೆ ಅಲ್ಲಿನ ವೇಳೆ ಅರಣ್ಯ ವಾಚರ್’​​​​ಗಳ ಪರಿಸ್ಥಿತಿ ಕಂಡು ದರ್ಶನ್ ಬೇಸರಗೊಂಡರಂತೆ. ಅವರ ಕ್ಷೇಮಾಭಿವೃದ್ಧಿಗಾಗಿ ಹಣ ನೀಡುವುದಾಗಿ ದರ್ಶನ್ ಭರವಸೆ ನೀಡಿದ್ದಾರೆ. ಇದಕ್ಕಾಗಿ ಒಂದೊಳ್ಳೆ ಪ್ಲಾನ್ ಮಾಡಿರುವ ದರ್ಶನ್ ಮೈಸೂರಿನಲ್ಲಿ ತಾವು ಮತ್ತು ತಮ್ಮ ಸ್ನೇಹಿತರು ಕ್ಲಿಕ್ಕಿಸಿಕೊಂಡಿರುವ ವನ್ಯಜೀವಿಗಳ ಅಪರೂಪದ ಪೋಟೋಗಳನ್ನು ಹರಾಜಿಗಿಡಲಿದ್ದಾರೆ. ಇದರಿಂದ ಸಂಗ್ರಹವಾದ ಹಣವನ್ನು ಅರಣ್ಯ ರಕ್ಷಣೆ ಹಾಗೂ ಫಾರೆಸ್ಟ್ ವಾಚರ್ಸ್ ಗಳ ಜೀವ ವಿಮೆ, ಆರೋಗ್ಯ ವಿಮೆ, ಅವರ ಮಕ್ಕಳ ಶಿಕ್ಷಣ, ಮನೆ ಮುಂತಾದ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ನೀಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top