ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಚಿತ್ರನಟ ದರ್ಶನ್ ಬೇಸಿಗೆಯ ಬಿರುಬಿಸಿಲ ನಡುವೆಯೂ ಜಿಲ್ಲೆಯಾದ್ಯಂತ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ರೋಡ್ ಷೋ ಮೂಲಕ ಪ್ರಚಾರದ ಮ್ಯಾರಾಥಾನ್ ನಡೆಸುತ್ತಿರುವ ದರ್ಶನ್ ಇಂದು ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ರೋಡ್ ಶೋ ನಡೆಸುವಾಗ ಸಾವಿರಾರು ಅಭಿಮಾನಿಗಳನ್ನು ಅವರನ್ನು ನೋಡಲೆಂದೇ ಆಗಮಿಸುತ್ತಿದ್ದಾರೆ. ಈ ವೇಳೆ ಹುಚ್ಚು ಅಭಿಮಾನಿಯೊಬ್ಬ ಮಾಡಿದ ಕೆಲಸಕ್ಕೆ ದರ್ಶನ ಅವರ ಕೈಗೆ ಮತ್ತೊಮ್ಮೆ ಪೆಟ್ಟಾಗಿದೆ. ನಿನ್ನೆ ಇದೇ ರೀತಿ ರೋಡ್ ಶೋ ನಡೆಸುವಾಗ ದರ್ಶನ್ ಗೆ ಮುತ್ತಿಕ್ಕಲು ಬಂದ ಅಭಿಮಾನಿಯೊಬ್ಬ ಅವರ ಮೇಲೆ ಆಯತಪ್ಪಿ ಬಿದ್ದಿದ್ದು, ಮೊದಲೇ ಏಟಾಗಿದ್ದ ಕೈಗೆ ಮತ್ತೆ ಏಟಾಗುವಂತೆ ಮಾಡಿದ್ದಾನೆ..
ಈ ಮೊದಲು ಮೈಸೂರಿನಿಂದ ಬರುವಾಗ ದರ್ಶನ್ ಕಾರು ಅಪಘಾತವಾಗಿ ಕೈಗೆ ಏಟಾಗಿತ್ತು. ಆ ಕೈ ಇನ್ನೂ ವಾಸಿಯಾಗಿಲ್ಲ. ಪ್ರಚಾರದ ವೇಳೆಯೂ ಆ ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ದರ್ಶನ್ ಪ್ರಚಾರ ನಡೆಸುತ್ತಿದ್ದರು. ದರ್ಶನ್ ಬಲಗೈ ಇನ್ನೂ ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಹೀಗಾಗಿ ಸ್ವಲ್ಪ ಪ್ರಮಾಣದಲ್ಲಿ ಕೈ ನೋವಾಗಿದ್ದು ಉಂಟು. ಜೊತೆಗೆ ನಿರಂತರವಾಗಿ ನಿಂತು ಪ್ರಚಾರದಲ್ಲಿ ಭಾಗಿಯಾಗಿದ್ದರಿಂದ ಬೆನ್ನು ನೋವು ಕಾಣಿಸಿಕೊಂಡಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
