ಒಂದು ಸಿನಿಮಾವಿನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ ಮುಂದಿನ ಚಿತ್ರಗಳ ಬಗ್ಗೆ ಕುತೂಹಲ ಸೃಷ್ಟಿಸೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಶೇಷತೆ. ಸದ್ಯ ಅವರ 50ನೇ ಚಿತ್ರವಾದ ಕುರುಕ್ಷೇತ್ರ ಇನ್ನೂ ತೆರೆಕಂಡಿಲ್ಲ, 51ನೇ ಸಿನಿಮಾವಾದ ಯಜಮಾನ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಉಳಿದಂತೆ 52ನೇ ಚಿತ್ರವಾಗಿರುವ ‘ಒಡೆಯರ್’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಹೀಗೆ ಕೈತುಂಬಾ ಮಣಗಟ್ಟಲೆ ಚಿತ್ರಗಳನ್ನು ಇಟ್ಟುಕೊಂಡಿರುವ ದರ್ಶನ್ ಅವರ 53ನೇ ಚಿತ್ರ ರಾಬರ್ಟ್ ಬಗ್ಗೆ ಅದಾಗಲೇ ನಾನಾ ಸುದ್ದಿಗಳು ಹರಿದಾಡತೊಡಗಿದೆ…
ರಾಬರ್ಟ್ ಚಿತ್ರವು ಎಲೆಕ್ಷನ್ ಮುಗಿದ ಮಾರನೇ ದಿನ ಅಂದ್ರೆ ಏಪ್ರಿಲ್ 19ರಂದು ಸೆಟ್ಟೇರಲಿದೆ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿದ್ದರು. ಆದರೆ ಇದೀಗ ಚ್ಹಿತ್ರೀಕರಣವು ಸ್ವಲ್ಪ ಮುಂದಕ್ಕೆ ಹೋಗಿದೆ.. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರದ ಮೊದಲ ಹಂತದ ಶೂಟಿಂಗ್ ಮುಂದಿನ ಸೋಮವಾರದಿಂದ ಪ್ರಾರಂಭವಾಗಲಿದೆ ಎಂದು ಚಿತ್ರತಂಡದ ಆಪ್ತವಲಯ ತಿಳಿಸಿದೆ.
ಕಳೆದ ಅಕ್ಟೋಬರ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದರ್ಶನ ಅವರ ಬಲಗೈಗೆ ಪೆಟ್ಟಾಗಿತ್ತು. ನಂತರ ಚಿಕಿತ್ಸೆಗೆ ಒಳಗಾಗಿ ವಾಸಿ ಮಾಡಿಕೊಂಡಿದ್ದರು. ಆದರೆ ಚುನಾವಣಾ ಪ್ರಚಾರದ ವೇಳೆ ದರ್ಶನ್ಗೆ ಮತ್ತೆ ಕೈ ನೋವು ಕಾಣಿಸಿಕೊಂಡಿದೆಯಂತೆ. ಅಷ್ಟೇ ಅಲ್ಲದೆ ಬಿಸಿಲಿನಲ್ಲಿ ಸುತ್ತಾಡಿದ್ದರಿಂದ ಸ್ವಲ್ಪ ಕಪ್ಪಾಗಿದ್ದಾರಂತೆ. ಹಾಗಾಗಿ ರಾಬರ್ಟ್ಗೆ ತಯಾರಾಗಲು ಕೇವಲ 1 ವಾರ ಸಮಯ ಪಡೆದುಕೊಂಡಿರುವ ದರ್ಶನ ಮುಂದಿನ ಸೋಮವಾರದಿಂದ ಎಂದಿನಂತೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಮಾಪತಿ ಫಿಲ್ಮ್ಸ್ ನಿರ್ಮಾಣದ “ರಾಬರ್ಟ್” ಚಿತ್ರಕ್ಕೆ ಚಂದ್ರಮೌಳಿ ಹಾಗೂ ಕೆ.ಎಲ್. ರಾಜಶೇಖರ್ ಸಂಬಾಷಣೆ ಬರೆಯಲಿದ್ದಾರೆ. ಸುಧಾಕರ್ ಜೈನ್ ಛಾಯಾಗ್ರಹಣ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ, ಕೀಂ ಪ್ರಕಾಶ್ ಸಂಕಲನ ಈ ಚಿತ್ರಕ್ಕಿದ್ದು ಚಿತ್ರಕ್ಕೆ ಸಂಗೀತ ನಿರ್ದೇಶಕರನ್ನು ಇನ್ನೂ ಆಯ್ಕೆ ಮಾಡಬೇಕಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
