ಸ್ಥಳ- ಬೆಂಗಳೂರು.
ಸೋಮವಾರ, ಸೆಪ್ಟೆಂಬರ್ 23 2019
ಸೂರ್ಯೋದಯ : 6:08 am
ಸೂರ್ಯಾಸ್ತ: 6:15 pm
ಶಕ ಸಂವತ : 1941 ವಿಲಂಬಿ
ಅಮಂತ ತಿಂಗಳು :ಭಾದ್ರಪದ
ಪಕ್ಷ :ಕೃಷ್ಣಪಕ್ಷ
ತಿಥಿ :ನವಮೀ 18:37
ನಕ್ಷತ್ರ: ಆರುಧ್ರ 11:30
ಯೋಗ : ವರಿಘ 18:22
ಕರಣ: ತೈತುಲ 07:19 ಗರಿಜ 18:37
ಅಭಿಜಿತ್ ಮುಹುರ್ತ:11:48 am – 12:36 pm
ಅಮೃತಕಾಲ : Nil
ರಾಹುಕಾಲ- 7:42 am – 9:12 am
ಯಮಗಂಡ ಕಾಲ- 10:42 am – 12:12 pm
ಗುಳಿಕ ಕಾಲ- 1:42 pm – 3:11 pm
ಎಲ್ಲ ಅವಕಾಶಗಳನ್ನು ಸದುಪಯೋಗಿಸಿ ಕೊಳ್ಳುವಲ್ಲಿ ನಿಮ್ಮ ಬುದ್ಧಿವಂತಿಕೆ ಅಡಗಿರುತ್ತದೆ. ಆರ್ಥಿಕವಾಗಿ ಏರುಪೇರಾದರೂ ಧನಾಗಮನ ಉತ್ತಮ. ಆರೋಗ್ಯದ ಬಗ್ಗೆ ಗಮನವಿರಲಿ.
ಕುಟುಂಬದ ಹಿರಿಯ ಸದಸ್ಯರ ನಿರೀಕ್ಷೆಗೆ ವಿರುದ್ಧವಾಗಿ ನಿಮ್ಮ ಜೀವನ ಕ್ರಮವನ್ನು ಅನುಸರಿಸದಿರಿ. ಹೀಗೆ ಮಾಡಿದಲ್ಲಿ ವಿನಾಕಾರಣ ನೀವು ನಿಷ್ಟೂರಕ್ಕೆ ಒಳಗಾಗುವಿರಿ ಮತ್ತು ನಿಮ್ಮ ಬಗ್ಗೆ ಇತರೆಯವರು ತೋರುವ ಗೌರವ ಕಡಿಮೆ ಆಗುವುದು.
ಪ್ರತಿದಿನದ ನಿರೀಕ್ಷೆಗಳು ಸೋಲುತ್ತವೆ ಎಂದು ನೊಂದುಕೊಳ್ಳದಿರಿ. ನೀವು ನಿಮ್ಮ ಆತ್ಮ ಸಂತೋಷದಿಂದ ಮಾಡಿದ ಕಾಯಕಗಳು ಶುಭಫಲವನ್ನುಂಟು ಮಾಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಹಿತಶತ್ರುಗಳು ನಿಮ್ಮನ್ನು ಪೀಡಿಸುವಂತಹ ಸಾಧ್ಯತೆಗಳು ಹೇರಳವಾಗಿದೆ ಆದರೆ ಅವರು ಪೀಡಿಸುತ್ತಾರೆ ಎಂಬ ಕಾರಣದಿಂದ ಇದ್ದ ಜವಾಬ್ದಾರಿ ಸ್ಥಾನದಿಂದ ಕೆಳಗಿಳಿಯುವುದು ತರವಲ್ಲ. ಆದಷ್ಟು ಕುಲದೇವರ ಪ್ರಾರ್ಥನೆ ಮಾಡಿ.
ನೀವು ಹಮ್ಮಿಕೊಂಡಿರುವ ಕಾರ್ಯಗಳು ಜನಮನ್ನಣೆ ಗಳಿಸುವವು ಇದರಿಂದ ಸಾಮಾಜಿಕ ವಾಗಿ ಮತ್ತು ಧಾರ್ಮಿಕವಾಗಿ ಗುರುತಿಸಿ ಕೊಳ್ಳುವಿರಿ
ಮಹಿಳೆಯರಿಗೆ ವಿಶೇಷ ಲಾಭ, ಸಣ್ಣ ವಿಚಾರಗಳಲ್ಲಿ ವೈಮನಸ್ಸು, ಅನಗತ್ಯ ಮಾತುಗಳಿಗೆ ಕಿವಿಗೊಡಬೇಡಿ, ಈ ದಿನ ತಾಳ್ಮೆ ಅತ್ಯಗತ್ಯ.
ಪುಣ್ಯಕ್ಷೇತ್ರ ದರ್ಶನ, ಶುಭ ಕಾರ್ಯಕ್ಕಾಗಿ ಓಡಾಟ, ಇಲ್ಲ ಸಲ್ಲದ ಅಪವಾದ, ದೂರ ಪ್ರಯಾಣ, ವಿವಾಹ ಯೋಗ, ಆರೋಗ್ಯದಲ್ಲಿ ಏರುಪೇರು.
ಆರೋಗ್ಯದ ಎಚ್ಚರ ಇದ್ದರೆ ಸಾಕು. ಉಳಿದ ಕಿರಿಕಿರಿಗಳನ್ನು ನಿಯಂತ್ರಿಸಬಹುದು. ವಿಷ್ಣು ಸಹಸ್ರನಾಮ ಪಾರಾಯಣದಿಂದ ಸಂಕಷ್ಟ ದೂರವಾಗುವುದು. ಕಾರ್ಯಸಿದ್ಧಿಯ ಭಾವನಾತ್ಮಕ ದುಗುಡತೆಯಿಂದ ದೂರ ಉಳಿಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.
ಮಾನಸಿಕ ಖಿನ್ನತೆ ಮೂಡುವುದು. ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿ ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು. ಶಿವ ಮತ್ತು ಆಂಜನೇಯ ಸ್ತುತಿ ಪಠಿಸಿ.
ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.
ನೀವು ಹೋಗುತ್ತಿರುವ ಅಥವಾ ಬೆಳೆಯುತ್ತಿರುವ ಪ್ರಗತಿಯನ್ನು ಕಂಡು ಇತರೆಯವರು ಕರುಬುವರು ಮತ್ತು ನಿಮ್ಮ ಪ್ರಯತ್ನಗಳನ್ನು ವಿಫಲಗೊಳಿಸಲು ಅನೇಕ ರೀತಿಯ ಕಾರ್ಯತಂತ್ರವನ್ನು ಅವರು ರೂಪಿಸುವರು. ಕುಲದೇವತಾ ಸ್ಮರಣೆ ಮಾಡಿ.
ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
