ಬಿಗ್ ಬಾಸ್ ಸೀಸನ್ 7 ಮುಕ್ತಾಯಗೊಂಡಿದೆ. ಶೈನ್ ಶೆಟ್ಟಿ ಬಿಗ್ ಬಾಸ್ ಕನ್ನಡದ ಹೊಸ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಪ್ರತಿ ಸಾರಿಯಂತೆ ಈ ಬಾರಿಯೂ ವಿನ್ನರ್ ವಿಚಾರವಾಗಿ ಪರ ವಿರೋಧದ ಮಾತುಗಳು ಕೇಳಿ ಬರುತ್ತಲೇ ಇವೆ. ಬಿಗ್ ಬಾಸ್ ಟ್ರೋಫಿಯನ್ನು ಶೈನ್ ಶೆಟ್ಟಿ ಗೆದ್ದರೆ 60 ಲಕ್ಷ ಜನರ ಮನಸ್ಸನ್ನು ಕುರಿ ಪ್ರತಾಪ್ ಗೆದ್ದಿದ್ದಾರೆ ಎಂದು ನೆಟ್ಟಿಗರು ಕಮೆಂಟಿಸುತ್ತಿದ್ದಾರೆ.
ಬಿಗ್ ಬಾಸ್ ವಿನ್ನರ್ ವಿಚಾರವಾಗಿ ಬೆಳಗಾವಿಯಲ್ಲಿ ನಟ ವಿಜಯ್ ರಾಘವೇಂದ್ರ ಮಾತನಾಡಿದ್ದಾರೆ. ‘ಮಾಲ್ಗುಡಿ ಡೇಸ್’ ಚಿತ್ರದ ಪ್ರಮೋಷನ್ಗೆ ಆಗಮಿಸಿದ್ದ ನಟ ವಿಜಯ್ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ರು. ”ಬಿಗ್ ಬಾಸ್ ಅಂತಹ ಒಂದು ರಿಯಾಲಿಟಿ ಶೋ ಆದಾಗ ಅಲ್ಲಿ ನಾವು ಸ್ಪರ್ಧಾಳುಗಳನ್ನ ಇಷ್ಟಾ ಪಡೋದು ಮುಖ್ಯವಲ್ಲ. ಜನರು ಓಟ್ ಮಾಡೋದು ಮುಖ್ಯ. ಜನರು ಮಾಡಿದ ಓಟ್ ಕೌಂಟ್ ಆಗುತ್ತೆ. ಓಟ್ ಕೌಂಟ್ ಆಗಲ್ಲ ಅಂದ್ರೆ ಇಡೀ ಚಾನಲ್ ಅವರನ್ನ ಕೋರ್ಟ್ ಎಳೆಯುತ್ತದೆ” ಎಂದಿದ್ದಾರೆ.
“ಯಾವ ಸ್ಪರ್ಧಿಗೆ ಓಟ್ ಜಾಸ್ತಿ ಬರುತ್ತೆ ಅವರು ಗೆಲ್ಲುತ್ತಾರೆ. ಜನರು ನನಗೆ ಪ್ರತಾಪ್ ಇಷ್ಟಾ ಅಂತಾರೆ. ಆದ್ರೆ ಓಟ್ ಮಾಡದಿದ್ದರೆ ಅವರು ಗೆಲ್ಲಲ್ಲ. ಬಿಗ್ ಬಾಸ್ ರಿಯಾಲಿಟಿ ಶೋ ನ್ಯಾಯಯುತವಾಗಿದೆ. ಪ್ರತಿದಿನವೂ ಜನ ಇವತ್ತು ಏನಾಗುತ್ತೆ ಅಂತಾ ಶೋ ನೋಡುತ್ತಾರೆ. ಜನ ಮಾಡಿದ ವೋಟ್ ಕೌಂಟ್ ಆಗಲ್ಲ ಅಂದ್ರೆ ಇಡೀ ಚಾನಲ್ ಸಿಬ್ಬಂದಿಯನ್ನ ಕೋರ್ಟ್ ವಿಚಾರಣೆ ನಡೆಸುತ್ತದೆ. ಹಾಗಿರುವಾಗ ಅದು ಹೇಗೆ ಮೊದಲೇ ವಿನ್ನರ್ ಫಿಕ್ಸ್ ಆಗ್ತಾರೆ” ಎಂದು ಪ್ರಶ್ನಿಸಿದರು.
ಇನ್ನು ಸೂಚಿಯಾಲ್ ಮೀಡಿಯಾದಲ್ಲಿ ನಡೆಯುವ ಚರ್ಚೆಯ ಬಗ್ಗೆ ಮಾತನಾಡಿದ ವಿಜಯ್ ರಾಘವೇಂದ್ರ ಈಗ ಹುಡುಗರ ಕೈಗೆ ಫೋನ್ ಸಿಕ್ಕಿಬಿಟ್ಟಿದೆ. ಹಾಗಂತ ಯಾರಪ್ಪನ ಮನೆ ಆಸ್ತಿ ಅನ್ನೋ ತರಹ ಮಾತನಾಡುತ್ತಿದ್ದಾರೆ.” ಎಂದು ಹೇಳಿದರು! ಒಟ್ಟಿನಲ್ಲಿ ಬಿಗ್ ಬಾಸ್ ಗೆ ತೆರೆಬಿದ್ದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿಯೇ ನಡೆದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
