fbpx
ಸಮಾಚಾರ

ಸಂಸದೆ ಸುಮಲತಾ ಕೊರೋನಾದಿಂದ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಯಿಂದ ಹೋಮ

ಸಂಸದೆ ಸುಮಲತಾ ಅಂಬರೀಶ್​ಗೆ ಕೊರೊನಾ ಸೋಂಕು ದೃಢವಾದ ಬಂದ ಹಿನ್ನೆಲೆ ಹೋಂ ಕ್ವಾರಂಟೈನ್​ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಲತಾ ಶೀಘ್ರವಾಗಿ ಬೇಗ ಕೊರೊನಾದಿಂದ ಚೇತರಿಸಿಕೊಂಡು ಗೆದ್ದು ಬರಲಿ ಎಂದು ಅಭಿಮಾನಿಯೊಬ್ಬರು ಹೋಮ-ಹವನ ಮಾಡಿಸಿದ್ದಾರೆ.

ಮಂಡ್ಯದ ಅಂಬರೀಶ್​ ಅಭಿಮಾನಿ ‘ದೇವರಾಜ್’ ಎಂಬುವವರು ಹೋಮ ಮಾಡಿಸಿದ್ದಾರೆ. ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಇರುವ ತಮ್ಮ ಹೋಟೆಲ್​ನಲ್ಲೇ ಹೋಮ ಹವನ ನಡೆಸಿ ಆದಷ್ಟು ಬೇಗ ಸುಮಲತಾ ಅಂಬರೀಶ್ ಕೊರೊನಾದಿಂದ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.. ಅಲ್ಲದೆ ಸುಮಲತಾರ ಭಾವಚಿತ್ರಕ್ಕೆ ಹಾಲು ಮತ್ತು ಹೂವಿನ ಅಭಿಷೇಕ ಮಾಡಿ ದೇವರ ಬಳಿ ಮನವಿ ಮಾಡಿದ್ದಾರೆ.

ಅಂದಹಾಗೆ ಸುಮಲತಾ ಅಂಬರೀಶ್ ಅವರಿಗೆ ಕೊರೋನಾ ವೈರಸ್ ಬೆಂದ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ವತಃ ಅವರೇ ಈ ವಿಷಯವನ್ನು ಖಚಿತಪಡಿಸಿದ್ದರು.. ಶನಿವಾರ, ಜುಲೈ 4ರಂದು, ನನಗೆ ಸ್ವಲ್ಪ ತಲೆನೋವು ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ನಿರಂತರವಾಗಿ ನನ್ನ ಕ್ಷೇತ್ರದ ಕಾರ್ಯಗಳಲ್ಲಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದರಿಂದ, ಕೋವಿಡ್ 19 ಪರೀಕ್ಷೆಗೆ ಒಳಗಾದೆ. ಇವತ್ತು ಪಾಸಿಟಿವ್ ಎಂದು ಫಲಿತಾಂಶ ಬಂದಿದೆ. ಹಾಗಾಗಿ ವೈದ್ಯರ ಸಲಹೆ ಪಡೆದುಕೊಂಡು ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಎಂದು ಹೇಳಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top