fbpx
ಸಮಾಚಾರ

ರಷ್ಯಾದಿಂದ ಭಾರತಕ್ಕೆ ಮರಳುತ್ತಿರುವ ಕನ್ನಡಿಗ ವಿದ್ಯಾರ್ಥಿಗಳಿಗೆ ಸಂಸದ ಜಿಸಿ ಚಂದ್ರಶೇಖರ್ ಅಂದ್ರೆ ಪ್ರೀತಿ: ಯಾಕೆ ಗೊತ್ತಾ?

ಕೇಂದ್ರ ಸಚಿವರು ಮಾಡಲಾಗದ ಕೆಲಸವನ್ನು ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಮಾಡಿ ತೋರಿಸಿದ್ದಾರೆ.
ಹೌದು, ವಂದೇ ಭಾರತ್ ಮಿಷನ್ ಅಡಿಯಲ್ಲಿಯೂ ಕರೆತರಲು ಆಗದ ಹೊರದೇಶದಲ್ಲಿ ಸಿಲುಕಿರುವ ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲು ಸಂಸದ ಜಿಸಿ ಚಂದ್ರಶೇಖರ್ ವ್ಯವಸ್ಥೆ ಮಾಡಿದ್ದು ಭಾರಿಗೆ ಮೆಚ್ಚುಗೆಗೆ ಕಾರಣವಾಗಿದೆ

ಕೊರೋನ ವೈರಸ್ ಸೋಂಕಿನಿಂದಾಗಿ ಹೊರ ದೇಶಗಳಲ್ಲಿ ಅತಂತ್ರರಾಗಿರುವ ಕನ್ನಡಿಗರು ಭಾರತಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಕೊರೋನಾ ವೈರಸ್ ಪರಿಣಾಮದಿಂದಾಗಿ ಹಲವು ದೇಶಗಳು ಲಾಕ್’ಡೌನ್ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಈ ನಿಯಮಗಳಿಂದಾಗಿ ಹೊರ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರು ಭಾರತಕ್ಕೆ ಬರಲು ಸಮಸ್ಯೆಯಾಗುತ್ತಿದೆ. ಅಲ್ಲಿರಲಾಗದೆ, ಇಲ್ಲಿಗೆ ಬರಲು ಅವಕಾಶವಿಲ್ಲದೆ ಅತಂತ್ರರಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಈ ಮದ್ಯೆ ವಿದೇಶದಲ್ಲಿ ಸಿಲುಕಿರುವ ಕನ್ನಡಿಗರ ಸಂಕಷ್ಟಕ್ಕೆ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಮಿಡಿದಿದ್ದಾರೆ.

ಜಿ.ಸಿ ಚಂದ್ರಶೇಖರ್ ರವರು ವಿದೇಶಾಂಗ ವ್ಯವಹಾರ ಸಮಿತಿಯ ಸದಸ್ಯರಾಗಿರುವುದರಿಂದ ಅವರ ಮಾಧ್ಯಮ ಮುಖೇನ ಅಥವಾ ಯಾರೇ ಅವರ ಗಮನಕ್ಕೆ ತಂದರು ಅವರ ಕೈಲಾದ ಮಟ್ಟಿಗೆ ಕನ್ನಡಿಗರನ್ನು ಸ್ವದೇಶಕ್ಕೆ ಕರೆತರಲು ಪ್ರಯತ್ನ ಮಾಡುವುದಾಗಿ ಹೇಳಿದ್ದರು. ಅದರಂತೆ ಈಗಾಗಲೇ ಮಲೇಶಿಯಾದಿಂದ ಮತ್ತು ರಷ್ಯಾದಿಂದ ಕನ್ನಡಿಗರು ಕರ್ನಾಟಕಕ್ಕೆ ವಾಪಸ್ಸು ಬರಲು ಸಹಾಯ ಮಾಡಿದ್ದಾರೆ.

 

 

ನಮ್ಮನ್ನು ಭಾರತಕ್ಕೆ ಬರಲು ವ್ಯವಸ್ಥೆ ಮಾಡಿಸಿ ಎಂದು ರಷ್ಯಾದಲ್ಲಿ ಸಿಲುಕಿರುವ ಕನ್ನಡ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದರು. ಇದನ್ನು ನೋಡಿದ್ದ ಸಂಸದ ಜಿಸಿ ಚಂದ್ರಶೇಖರ್ ಅವರು ಕನ್ನಡ ಮಕ್ಕಳ ಮನವಿಗೆ ಸ್ಪಂದಿಸಿ ಅವರನ್ನು ತಾಯ್ನಾಡಿಗೆ ಕರೆತರಲು ಇಚ್ಛಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈ ಶಂಕರ್ ಅವರಿಗೆ ಪತ್ರ ಬರೆದಿದ್ದರು.

ಸರ್ಕಾರದ ಹಣದಲ್ಲಿ (ವಂದೇ ಭಾರತ್ ಮಿಷನ್) ಕರೆತರಲು ಆಗದಿದ್ದರೂ ಪರವಾಗಿಲ್ಲ ವಿದ್ಯಾರ್ಥಿಗಳೇ ತಮ್ಮ ಸ್ವಂತ ಹಣದಲ್ಲಿ ಚಾರ್ಟೆಡ್ ಫ್ಲೈಟ್ ಬುಕ್ ಮಾಡಿಕೊಂಡು ಭಾರತಕ್ಕೆ ಬರಲು ಅನುಮತಿ ನೀಡಬೇಕೆಂದು ಜಿಸಿ ಚಂದ್ರಶೇಖರ್ ಪತ್ರ ಬರೆದಿದ್ದರು. ಜಿಸಿ ಚಂದ್ರಶೇಖರ್ ಅವರ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ವಿದೇಶಾಂಗ ಇಲಾಖೆ ರಷ್ಯಾದಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಭಾರತಕ್ಕೆ ಬರಲು ಅನುಮತಿ ನೀಡಿದ್ದಾರೆ. ಇದೀಗ ಆ ವಿದ್ಯಾರ್ಥಿಗಳು ಭಾರತಕ್ಕೆ ಬರಲು ಸಿದ್ಧತೆ ನಡೆಸುತ್ತಿದ್ದು ನಾಳೆ ಮುಂಜಾನೆ ತಾಯ್ನಾಡಿಗೆ ಮರಳಲಿದ್ದಾರೆ.

ಈ ವಿಚಾರವನ್ನು ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಂಸದ ಜಿಸಿ ಚಂದ್ರಶೇಖರ್ “ರಷ್ಯಾದಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಕರೆತರಲು ಚಾರ್ಟೆಡ್ ಫ್ಲೈಟ್ ಬೇಕಾದ ಅನುಮತಿ ವಿದೇಶಾಂಗ ಇಲಾಖೆ ಬಳಿ ಕೋರಿದ್ದವು, “Kursk state” ಯೂನಿವರ್ಸಿಟಿಯಲ್ಲಿ ಓದುತ್ತಿರುವ ನಮ್ಮ ಕನ್ನಡದ ಮಕ್ಕಳು ಅತಿ ಶ್ರೀಘ್ರವಾಗಿ ಕರ್ನಾಟಕಕಕ್ಕೆ ಬರುತ್ತಾರೆ.” ಎಂದು ತಿಳಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top