ಅಯೋಧ್ಯೆ ರಾಮ ಮಂದಿರಕ್ಕೆ ಇತ್ತೇಷೆಗಷ್ಟೇ ಶಿಲನ್ಯಾಸ ನೆರವೇರಿದೆ. ಅದ್ಧೂರಿಯಾಗಿ ಸಂಭ್ರಮದಲ್ಲಿ ನಡೆದ ರಾಮ ಮಂದಿರ ಶಿಲಾನ್ಯಾಸದ ನಂತರ ಕೆಲಸವೂ ಬಿರುಸಿನಿಂದ ಸಾಗಿದೆ.
ಅಯೋಧ್ಯೆಯ ರಾಮ ಮಂದಿರವನ್ನು ಕಲ್ಲುಗಳನ್ನು ಮಾತ್ರ ಉಪಯೋಗಿಸಿ ಕಟ್ಟಲಾಗುತ್ತದೆ. ಇದು ಸುಮಾರು 1 ಸಾವಿರ ವರ್ಷಗಳ ವರೆಗೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಶ್ರೀರಾಮ ಮಂದಿರ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
For Mandir construction, copper plates will be used to fuse stone blocks with each other. The plates should be 18 inches long, 30 mm wide & 3 mm in depth.10,000 such plates may be required in total structure. We call upon Shri Rambhakts to donate such copper plates to the trust.
— Shri Ram Janmbhoomi Teerth Kshetra (@ShriRamTeerth) August 20, 2020
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ರಾಮ ಮಂದಿರ ಜನ್ಮಭೂಮಿ ಟ್ರಸ್ಟ್ ಗುರುವಾರ ನವದೆಹಲಿಯಲ್ಲಿ ಸಭೆ ಮಂದಿರ ನಿರ್ಮಾಣ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿತು. ಸಭೆಯ ನಂತರ ಭಾರತದ ಪ್ರಾಚೀನ ಮತ್ತು ಸಾಂಪ್ರದಾಯಿಕ ನಿರ್ಮಾಣ ತಂತ್ರಗಳನ್ನು ಅನುಸರಿಸಿ ದೇಗುಲ ನಿರ್ಮಿಸಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.
ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಸಿಬಿಆರ್ಐ ರೂರ್ಕಿ, ಐಐಟಿ ಮದ್ರಾಸ್ ಹಾಗೂ ಎಲ್ ಆಂಡ್ ಟಿ ಕಂಪನಿಯ ಇಂಜಿನಿಯರ್ಗಳು ಮಂದಿರ ನಿರ್ಮಾಣ ಸ್ಥಳದ ಮಣ್ಣನ್ನು ಪರೀಕ್ಷಿಸುತ್ತಿದ್ದಾರೆ. ದೇಗುಲದ ನಿರ್ಮಾಣ ಕಾರ್ಯ 36 ರಿಂದ 40 ತಿಂಗಳಲ್ಲಿ ಮುಗಿಯುವ ನಿರೀಕ್ಷೆಯಿದೆ ಎಂದು ಟ್ರಸ್ಟ್ ಟ್ವೀಟ್ ಮಾಡಿದೆ. ಜೊತೆಗೆ ಮಂದಿರ ನಿರ್ಮಾಣದಲ್ಲಿ ಕಬ್ಬಿಣ ಬಳಸುವುದಿಲ್ಲ ಎಂದು ಟ್ರಸ್ಟ್ ತಿಳಿಸಿದೆ.
Donors can engrave family names, place of origin or their community temples' names on these plates. This way, the copper plates will not only symbolize the unity of this country but also be a testament to the entire country's contribution towards Mandir construction.
— Shri Ram Janmbhoomi Teerth Kshetra (@ShriRamTeerth) August 20, 2020
ದೇವಾಲಯದ ನಿರ್ಮಾಣಕ್ಕೆ ಕಲ್ಲುಗಳನ್ನು ಸೇರಿಸಲು ತಾಮ್ರದ ಎಲೆಗಳನ್ನು ಬಳಸಲಾಗುತ್ತದೆ. 18 ಇಂಚು ಉದ್ದ, 3 ಎಂಎಂ ಆಳ, 30 ಎಂಎಂ ಅಗಲದ 10,000 ಎಲೆಗಳು ಬೇಕಾಗುತ್ತವೆ. ತಾಮ್ರದ ಎಲೆಗಳನ್ನು ದಾನ ಮಾಡಲು ಶ್ರೀ ರಾಮ ಭಕ್ತರನ್ನು ಟ್ರಸ್ಟ್ ಆಹ್ವಾನಿಸುತ್ತಿದೆ. ದಾನಿಗಳು ಈ ಫಲಕಗಳಲ್ಲಿ ಕುಟುಂಬದ ಹೆಸರುಗಳು, ಮೂಲ ಸ್ಥಳ ಅಥವಾ ಅವರ ಸಮುದಾಯ ದೇವಾಲಯಗಳ ಹೆಸರುಗಳನ್ನು ಕೆತ್ತಬಹುದು. ಈ ರೀತಿಯಾಗಿ, ತಾಮ್ರದ ಫಲಕಗಳು ಈ ದೇಶದ ಏಕತೆಯನ್ನು ಸಂಕೇತಿಸುವುದು ಮಾತ್ರವಲ್ಲದೆ ಮಂದಿರ ನಿರ್ಮಾಣಕ್ಕೆ ಇಡೀ ದೇಶದ ಕೊಡುಗೆಗೆ ಸಾಕ್ಷಿಯಾಗಿಸುತ್ತದೆ ಎಂದು ಹೇಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
