ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ನಿರಂತರವಾಗಿ ಆಕ್ರೋಶ ವ್ಯಕ್ತವಾಗುತ್ತಲೇ ಇರುತ್ತದೆ. ಪ್ರಾದೇಶಿಕ ಭಾಷೆಗಳ ರಾಜ್ಯಗಳ ಮೇಲೆ ಒತ್ತಾಯ ಪೂರ್ವಕವಾಗಿ ಹಿಂದಿಯನ್ನು ಹೇರುವ ಕಾರ್ಯ ಕೇಂದ್ರ ಸರ್ಕಾರದಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಇತ್ತೀಚಿಗೆ ಕೇಂದ್ರದ ‘ತ್ರಿಭಾಷಾ ನೀತಿ’, ‘ಹಿಂದಿ ದಿವಸ್ ಆಚರಣೆ’ ವಿಚಾರಗಳು ಭಾರಿಗೆ ಟೀಕೆಗೆ ಗುರಿಯಾಗಿದ್ದವು. ಈ ನಡುವೆ ಉತ್ತರ ಪ್ರದೇಶ್ ಪೊಲೀಸರು ಅಪ್ಪಟ ಕನ್ನಡಿಗ ಸಂಸದರ ಮೇಲೆ ಹಿಂದಿ ಹೇರಿಕೆ ಮಾಡಿದ್ದಾರೆ.
ರಾಜ್ಯ ಸಭಾ ಸಂಸದ ಜಿಸಿ ಚಂದ್ರಶೇಖರ್ ಉತ್ತರ ಪ್ರದೇಶ್ ಪೊಲೀಸರಿಂದ ಹಿಂದಿ ಹೇರಿಕೆಗೆ ಒಳಪಟ್ಟಿದ್ದಾರೆ.. ಆರಂಭದಿಂದಲೂ ಅಪ್ಪಟ ಕನ್ನಡಾಭಿಮಾನಿ ಎಂದು ಗುರುತಿಸಿಕೊಂಡಿರುವ ಚಂದ್ರಶೇಖರ್ ತಮ್ಮ ಮೇಲಿನ ಹಿಂದಿ ಹೇರಿಕೆಗೆ ಖಡಕ್ ಉತ್ತರ ನೀಡುವ ಮೂಲಕ ಯುಪಿ ಪೊಲೀಸರಿಗೆ ಠಕ್ಕರ್ ಕೊಟ್ಟಿದ್ದಾರೆ.
20 ವರ್ಷದ ಹುಡುಗಿಯನ್ನು ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಗ್ಯಾಂಗ್ ರೇಪ್ ಮಾಡಲಾಗಿದೆ. ಸಾವು-ಬದುಕಿನ ವಿರುದ್ಧ ಹೋರಾಡಿ ಆ ಹುಡುಗಿ ಪ್ರಾಣ ಬಿಟ್ಟಿದ್ದಾಳೆ. ಇದರ ಬಗ್ಗೆ ಅನೇಕರು ಮಾತನಾಡುತ್ತಾರೆ. ಈ ಅಪರಾಧದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆ ಬಗ್ಗೆ ಸಂಸದ ಜಿಸಿ ಚಂದ್ರಶೇಖರ್ ಅವರು ಕೂಡ ಟ್ವೀಟ್ ಮಾಡಿದ್ದರು.
“ಅತ್ಯಾಚಾರ ಮಾಡಿ ನಾಲಗೆಯನ್ನು ಕತ್ತರಿಸಿ ಹೀನಕೃತ್ಯ ವೆಸಗಿದ ಕಾಮ ಪಿಶಾಚಿಗಳ ಅಟ್ಟಹಾಸಕ್ಕೆ ಬಲಿಯಾದ ದಲಿತ ಹೆಣ್ಣುಮಗಳು ,ಮೃತ ದೇಹವನ್ನು ಪೊಲೀಸ್ ರು ಅವರ ಕುಟುಂಬದ ಇಚ್ಛೆಯಿಲ್ಲದೆ ಸುಟ್ಟು ಹಾಕಿರುವುದು ಉತ್ತರ ಪ್ರದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ನಿಜವಾಗಿಯೂ ಇದೆಯೇ?ಪಾಪಿಗಳನ್ನು ಶಿಕ್ಷಿಸಿ ಇಲ್ಲವೇ ರಾಜೀನಾಮೆ ಕೊಡಿ ” ಎಂದು ಟ್ವೀಟ್ ಮಾಡುವ ಮೂಲಕ ಸಂಸದ ಜಿಸಿ ಚಂದ್ರಶೇಖರ್ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅತ್ಯಾಚಾರ ಮಾಡಿ ನಾಲಗೆಯನ್ನು ಕತ್ತರಿಸಿ ಹೀನಕೃತ್ಯ ವೆಸಗಿದ ಕಾಮ ಪಿಶಾಚಿಗಳ ಅಟ್ಟಹಾಸಕ್ಕೆ ಬಲಿಯಾದ ದಲಿತ ಹೆಣ್ಣುಮಗಳು ,ಮೃತ ದೇಹವನ್ನು ಪೊಲೀಸ್ ರು ಅವರ ಕುಟುಂಬದ ಇಚ್ಛೆಯಿಲ್ಲದೆ ಸುಟ್ಟು ಹಾಕಿರುವುದು ಉತ್ತರ ಪ್ರದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ
ನಿಜವಾಗಿಯೂ ಇದೆಯೇ?ಪಾಪಿಗಳನ್ನು ಶಿಕ್ಷಿಸಿ ಇಲ್ಲವೇ ರಾಜೀನಾಮೆ ಕೊಡಿ @myogiadityanath pic.twitter.com/N0SRGqvpqY— GC ChandraShekhar (@GCC_MP) September 30, 2020
ಈ ಟ್ವೀಟ್ ಗೆ ಹತ್ರಾಸ್ ಪೊಲೀಸ್ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯೆ ನೀಡಲಾಗಿತ್ತು. ಆದರೆ ಇದು ಕೇವಲ ಹಿಂದಿಯಲ್ಲಿ ಇತ್ತು. ಇದರಿಂದ ಬೇಸರಗೊಂಡಿರುವ ಸಂಸದರು “ನೀವು ಇಂಗ್ಲಿಷ್ಗೆ ಅನುವಾದಿಸಿ ಅದನ್ನು ಹಂಚಿಕೊಳ್ಳಬಹುದೇ?” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಂಸದರ ಈ ದಿಟ್ಟ ಹೇಳಿಕೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
