ಇಂದು ಚಿರು-ಮೇಘನಾ ಪುತ್ರನಿಗೆ ಶುಭದಿನ. ಹಿರಿಯರು ಮತ್ತು ಕುಟುಂಬಸ್ತರ ಸಮ್ಮುಖದಲ್ಲಿ ಜೂನಿಯರ್ ಚಿರುಗೆ ತೊಟ್ಟಿಲ ಶಾಸ್ತ್ರ ನೆರವೇರಿದೆ.
ಇಂದು ಮಧ್ಯಾಹ್ನ 12ಗಂಟೆಯ ಶುಭಗಳಿಗೆಯಲ್ಲಿ ಚಿರು ರೂಪದಲ್ಲಿ ಬಂದ ಮೇಘನಾ ಪುತ್ರನ ತೊಟ್ಟಿಲು ಶಾಸ್ತ್ರ ನಡೆದಿದೆ. ಹಿರಿಯರು, ಕುಟುಂಬಸ್ಥರ ಸಮ್ಮುಖದಲ್ಲಿ ಆನಂದ ಹೊತ್ತು ತಂದ ಮಗುವನ್ನು ತೊಟ್ಟಿಲಿಗೆ ಹಾಕಿ ಶಾಸ್ತ್ರ ಮಾಡಲಾಗುದೆ.
ತೊಟ್ಟಿಲ ಶಾಸ್ತ್ರ ಪ್ರಯುಕ್ತ ಮನೆಯಂಗಳವನ್ನು ಹೂವು, ರಂಗೋಲಿಯಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 6
ಗಂಟೆಗೆ ತೊಟ್ಟಿಲಿಗೆ ಸುಂದರ್ ರಾಜ್ ಹಾಗೂ ಪ್ರಮೀಳಾ ಪೂಜೆ ಮಾಡಿದರು. ಪೂಜೆ ನಂತರ ತೊಟ್ಟಿಲಿಗೆ
ರುಬ್ಬುವ ಕಲ್ಲು ಇಟ್ಟು ಶಾಸ್ತ್ರ ಆರಂಭಿಸಲಾಯಿತು. ಬಳಿಕ ತೊಟ್ಟಿಲಿಗೆ ಮಗುವನ್ನು ಹಾಕಿದ ಮೇಘನಾ ರಾಜ್ ಸಂಭ್ರಮಿಸಿದರು.
ಚಿರು ಮಗನಿಗಾಗಿ ಗದಗದಿಂದ ಬಂತು ವಿಶೇಷ ತೊಟ್ಟಿಲು:
ಇನ್ನು ತೊಟ್ಟಿಲು ಶಾಸ್ತ್ರಕ್ಕಾಗಿ ಗದಗದ ಮಹಿಳಾ ಸಂಘದಿಂದ ಬಣ್ಣಗಳಿಂದ ಕೂಡಿರೋ ಹ್ಯಾಂಡ್ ಮೇಡ್ ತೊಟ್ಟಿಲು ಬಂದಿದೆ. ಚಿರು, ಮೇಘನಾ ಪುತ್ರನಿಗಾಗಿ ಅಭಿಮಾನಿಗಳು ವಿಷೇಶ ತೊಟ್ಟಿಲನ್ನು ಉಡುಗೊರೆಯಾಗಿ ಕಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
