ಕಲರ್ಸ್ ಕನ್ನಡ ವಾಹಿನಿಯ ಟಾಪ್ ಧಾರಾವಾಹಿಗಳ ಪೈಕಿ ‘ಮಿಥುನ ರಾಶಿ’ ಕೂಡ ಒಂದು. ‘ಮಿಥುನ ರಾಶಿ’ ಸೀರಿಯಲ್ನಲ್ಲಿ ಆಟೋ ಓಡಿಸುವ ರಾಶಿ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ತಲುಪಿರುವ ನಟಿ ವೈಷ್ಣವಿ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿದ್ದಾರೆ. ‘ಬಿಗ್ ಬಾಸ್ ಮಿನಿ ಸೀಸನ್’ನಲ್ಲಿ ಇತರೆ ಧಾರಾವಾಹಿಗಳ ನಟ, ನಟಿಯರ ಜೊತೆಗೆ ವೈಷ್ಣವಿ ಕೂಡ ಭಾಗವಹಿಸಿದ್ದಾರೆ. ನಟಿ ವೈಷ್ಣವಿ ಅವರು ಇತ್ತೀಚೆಗೆ ದೊಡ್ಮನೆಯಲ್ಲಿ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಮ್ಮ ಮನದಾಳದ ನೋವನ್ನು ಎಲ್ಲರ ಎದುರು ಹೇಳಿಕೊಂಡಿದ್ದಾರೆ.
ನನಗೆ ಅಪ್ಪನ ಹೆಸರು ಗೊತ್ತಾಗಿದ್ದು 10ನೇ ಕ್ಲಾಸ್ನಲ್ಲಿ. ನನಗೆ ಅಪ್ಪ ಇದ್ದಾರೆ ಎನಿಸುತ್ತದೆ. ಅವರು ಸತ್ತಿಲ್ಲ. ಅವರು ನಮ್ಮ ಜೊತೆ ಕೂಡ ಇಲ್ಲ. ನಾನು ಅವರನ್ನು ನೋಡಿಯೇ ಇಲ್ಲ. ಇವಳಿಗೆ ಇವರ ಅಪ್ಪನ ಹೆಸರೇ ಗೊತ್ತಿಲ್ಲ ಎಂದು ನನ್ನ ಎದುರಿಗೇ ಜನರು ಆಡಿಕೊಳ್ಳುತ್ತಿದ್ದರು. ನಮ್ಮ ಅಪ್ಪ ಸಾಯುವುದಕ್ಕಿಂತ ಮುಂಚೆ ನಾನು ಅವರನ್ನ ನೋಡಬೇಕು. ಒಂದೇ ಒಂದು ಬಾರಿ ಅವರನ್ನು ನಾನು ಅಪ್ಪ ಎಂದು ಕರೆಯಬೇಕು ಅಂತ ತುಂಬ ಆಸೆ ಇದೆ ಎನ್ನುತ್ತ ವೈಷ್ಣವಿ ಕಣ್ಣೀರು ಸುರಿಸಿದ್ದಾರೆ.
ನನ್ನ ತಂದೆ ನಮ್ಮ ಜೊತೆಗಿಲ್ಲ. ನಾನು ಹುಟ್ಟಿದಾಗಿನಿಂದ ಅವರ ಮುಖ ನೋಡಿಲ್ಲ. ಅವರ ಹೆಸರು ತಿಳಿದ ಕೂಡಲೇ ನಾನು 10ನೇ ಕ್ಲಾಸ್ನಲ್ಲಿದ್ದಾಗ ಫೇಸ್ಬುಕ್ ಅಕೌಂಟ್ ಓಪನ್ ಮಾಡಿದೆ. ಅವರನ್ನು ಈಗಲೂ ಹುಡುಕುತ್ತಿರುವೆ. ಅವರು ಸಿಕ್ಕಿಲ್ಲ. ನನ್ನ ಬೈಯೋದಕ್ಕಾಗಲಿ ಕೇರ್ ಮಾಡೋಕ್ಕಾಗಲಿ ಕುಟುಂಬ ಇಲ್ಲ. ನನಗೆ ಅಮ್ಮ ಮತ್ತು ಅಜ್ಜಿ ಇದ್ದಾರೆ. ಅಪ್ಪ ಅಂದ್ರೆ ಏನು ಅಂತ ನಾನು ಚಿಕ್ಕವಯಸ್ಸಿನಲ್ಲಿ ಕೇಳುತ್ತಿದ್ದೆ. ಅಮ್ಮನ ಸ್ಥಾನದಲ್ಲಿ ನಾನಿದ್ದರೆ ಕೆರೆನೋ, ಬಾವಿನೋ ನೋಡಿಕೊಳ್ಳಬೇಕಿತ್ತು ಅವರು ಅಷ್ಟು ಸ್ಟ್ರಾಂಗ್ ಇದ್ದಾರೆ.’ ಎಂದು ಫ್ಯಾಮಿಲಿಯಿಂದ ಮಾನಸಿವಾಗಿ ನೊಂದ ವಿಚಾರವನ್ನು ವೈಷ್ಣವಿ ಹಂಚಿಕೊಂಡಿದ್ದಾರೆ.
ಸ್ಕೂಲ್ನಲ್ಲಿ ಕಾಲೇಜಿನಲ್ಲಿ ನನ್ನನ್ನು ತುಂಬಾ ಹೀಯಾಳಿಸುತ್ತಿದ್ದರು. ನನ್ನ ಮೂಲೆಗುಂಪು ಮಾಡುತ್ತಿದ್ದರು. ನಾನು ಡಿಪ್ರೆಸ್ ಆಗಿದ್ದೆ. ಒಬ್ಬರು ಒಂದು ದಿನ ಬಂದು ಏನು ಅಂತ ವಿಚಾರಿಸಿಲ್ಲ. ಇದುವರೆಗೂ ನನ್ನ ಭಾವನೆ ಹಂಚಿಕೊಳ್ಳಲು ಯಾರೂ ಇಲ್ಲ ನನಗೆ. ಅಜ್ಜಿಗೆ ವಯಸ್ಸಾಗಿದೆ, ಅಮ್ಮ ಆಗಲೇ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ನಾನು ಒಂದು ಸಲವಾದರೂ ನನ್ನ ಅಪ್ಪನನ್ನ ನೋಡಬೇಕು. ಸಾಯೋಕೆ ಮುಂಚೆ ನಾನು ನಮ್ಮ ಅಪ್ಪನನ್ನು ನೋಡಬೇಕು. ಒಂದೇ ಒಂದು ಬಾರಿ ನನ್ನ ಲೈಫ್ನಲ್ಲಿ ನಾನು ಅವರನ್ನ ಅಪ್ಪ ಅಂತ ಕರೆಯಬೇಕು ಅಂತ ತುಂಬಾ ಆಸೆ ಇದೆ’ ಎಂದು ವೈಷ್ಣವಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
