‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಅವರು ಅಭಿಮಾನಿಗಳಿಗೆ ವಿಶೇಷವಾದ ದಿನ ಸೆ.18! ಯಾಕೆಂದರೆ, ಅಂದು ವಿಷ್ಣುವರ್ಧನ್ ಅವರು ಜನ್ಮದಿನ. ಅವರು ನಮ್ಮೊಂದಿಗೆ ಇದ್ದಿದ್ದರೆ ಈ ಸೆ.18ಕ್ಕೆ 71 ವರ್ಷ ತುಂಬುತ್ತಿತ್ತು. ವಿಷ್ಣು ನಿಧನರಾಗಿ ವರ್ಷಗಳೇ ಉರುಳಿರಬಹುದು. ಆದರೆ ಅವರ ನೆನಪುಗಳಿಗೆ ಸಾವಿಲ್ಲ. ಅಂದಹಾಗೆ, ವಿಷ್ಣು ಹುಟ್ಟುಹಬ್ಬದ ಸಲುವಾಗಿ ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ನಲ್ಲಿ ಮರಳು ಶಿಲ್ಪ ರಚಿಸಲಾಗಿದೆ.
ಒರಿಸ್ಸಾದ ಪುರಿಯ ಮೆರೀನ್ ಡ್ರೈವ್ ಬೀಚ್ ನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಚಿತ್ತಾರ ಮೂಡಿದೆ. ಹೆಸರಾಂತ ಶಿಲ್ಪಿ ಮನೀಶ್ ಕುಮಾರ್ ಈ ಶಿಲ್ಪವನ್ನು ರಚಿಸಿದ್ದಾರೆ. ಅದಕ್ಕೆ ಅಗತ್ಯವಾದ ಹಣಕಾಸು ವ್ಯವಸ್ಥೆಯನ್ನು ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ಒದಗಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
