fbpx
ಸಮಾಚಾರ

ಜೀವದ ಹಂಗು ತೊರೆದು ಓಡಾಡುತ್ತಿದ್ದ ಮಕ್ಕಳಿಗೆ ಕೊಟ್ಟ ಮಾತಿನಂತೆ ಕುಗ್ರಾಮಕ್ಕೆ ಕಾಲ್ಸೇತುವೆ ನಿರ್ಮಾಣ ಮಾಡಿ ಉದ್ಘಾಟಿಸಿದ ಸಂಸದ ಜಿಸಿ ಚಂದ್ರಶೇಖರ್

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾವಂಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸರಿಮನೆ ಹೊಳೆಗೆ ಸುಮಾರು ವರ್ಷಗಳಿಂದ ಕಾಲುಸಂಕ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಎಷ್ಟೇ ಮನವಿ ಕೊಟ್ಟಿದ್ದರೂ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಕ್ಯಾರೇ ಎಂದಿರಲಿಲ್ಲ.. ಮಳೆಗಾಲ ಬಂದರಂತೂ ಚಿಕ್ಕ ಮಕ್ಕಳಾದಿಯಾಗಿ ದೊಡ್ಡವರೂ ಕೂಡ ಹೊಳೆ ದಾಟಿ ಊರಿಗೆ ಹೋಗಲು ಸಾಹಸ ಪಡಬೇಕಿತ್ತು.

 

 

ಗ್ರಾಮದಲ್ಲಿ ಹಳ್ಳ ದಾಟಿ ಶಾಲೆಗೆ ತೆರಳುವ ಮಕ್ಕಳು ಹಳ್ಳ ದಾಟಲಾಗದೆ ಮರದ ಸೇತುವೆ ಮೇಲೆ ಹಗ್ಗ ಹಿಡಿದು ಜೈವವನ್ನು ಕೈಯಲ್ಲಿಡಿದು ದಾಟುತ್ತಿದ್ದ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಅಲ್ಲದೆ, ಈ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂದು ಜನ ಸಾಮಾನ್ಯರಿಂದ ಒತ್ತಾಯವೂ ಕೇಳಿ ಬಂದಿತ್ತು. ಆದರೆ, ಕೇವಲ ಟ್ವಿಟರ್​ ಪೋಟೋ ಒಂದರಿಂದ ಇದೀಗ ಆ ಊರಿಗೆ ಸೇತುವೆ ನಿರ್ಮಾಣವಾಗಿದ್ದು, ಇಡೀ ಹಳ್ಳಿಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ, ಮಕ್ಕಳು ಮಳೆಗಾಲದಲ್ಲಿ ಇನ್ನಾದರೂ ನೆಮ್ಮದಿಯಿಂದ ಶಾಲೆಗೆ ತೆರಳಲು ಸಹಕಾರಿಯಾಗಿದೆ..

 

 

ಗ್ರಾಮಸ್ಥರ ಈ ಹರುಷಕ್ಕೆ ಕಾರಣವಾದವರು ರಾಜ್ಯಸಭಾ ಸದ್ಯ ಜಿಸಿ ಚಂದ್ರಶೇಖರ್. ಹೌದು ಸಾಮಾಜಿಕ ಜಾಲತಾಣಗಲ್ಲಿ ಮಕ್ಕಳ ಫೋಟೋವನ್ನು ಗಮನಿಸಿದ್ದ ಜಿಸಿ ಚಂದ್ರಶೇಖರ್ ಅವರು ಸುಸಜ್ಜಿತ ಕಾಲುಸೇತುವೆ ನಿರ್ಮಿಸಲು ನಿರ್ಧರಿಸಿ ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಅಗತ್ಯವಿರುವ ಹಣವನ್ನು ಮಂಜೂರು ಮಾಡಿದ್ದರು. ಅದರಂತೆ ಜಿ.ಸಿ.ಚಂದ್ರಶೇಖರ್ ಅವರ ಮುತುವರ್ಜಿಯಿಂದಾಗಿ ಈಗ ಇಲ್ಲಿ ಸೇತುವೆ ನಿರ್ಮಾಣಗೊಂಡಿದ್ದು ಇತ್ತೀಚಿಗೆ ಸ್ವತಃ ಜಿಸಿ ಚಂದ್ರಶೇಖರ್ ಅವರೇ ಸೇತುವೆಯನ್ನು ಉದ್ಘಾಟನೆ ಮಾಡಿದ್ದಾರೆ.

 

 

 

ಕಾಲುಸಂಕ ಉದ್ಘಾಟನೆಯನ್ನು ಜಿಸಿ ಚಂದ್ರಶೇಖರ್ ಅವರೇ ಮಾಡಬೇಕು ಎಂದು ಊರಿನ ಜನರು ಆಸೆಪಟ್ಟಿದ್ದರು ಹಾಗಾಗಿ ಸಣ್ಣದಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದರು. ಊರಿನ ಜನರ ಆಸೆಯಂತೆ ಸ್ವತಃ ಜಿಸಿ ಚಂದ್ರಶೇಖರ್ ಅವರೇ ಅಲ್ಲಿಗೆ ತೆರಳಿ ಕಾಲು ಸಂಕ ಉದ್ಘಾಟನೆ ಮಾಡಿ ಬಂದಿದ್ದಾರೆ. ಈ ವೇಳೆ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಟ್ಟ ಜಿಸಿ ಚಂದ್ರಶೇಖರ್ ಅವರಿಗೆ ಊರಿನ ಜನತೆ ತುಂಬು ಹೃದಯದಿಂದ ಧನ್ಯವಾದ ಹೇಳಿದರು.

ಕಾಲುಸಂಕ ಉದ್ಘಾಟನೆ ಮಾಡಿರುವ ಬಗ್ಗೆ ಸಂಸದರು ತಮ್ಮ ಫೇಸ್ಬುಕ್ ಪುಟದಲ್ಲಿ ವಿಡಿಯೊಂದರ ಮೂಲಕ ಹಂಚಿಕೊಂಡಿದ್ದಾರೆ. ವಿಡಿಯೋ ಜೊತೆಗೆ “ಅವತ್ತು ಮೀಡಿಯಾದವ್ರು ಮಾಡಿದಂತಹ ಮನಕಲುಕುವ ವರದಿಯಿಂದ ಇಂದು ಉತ್ತರ ಕನ್ನಡ ಜಿಲ್ಲೆಯ ಕುಗ್ರಾಮವೊಂದರಲ್ಲಿ ಬಡ ವಿದ್ಯಾರ್ಥಿಗಳ ಮುಖದ ಮೇಲೆ ಒಂದು ರೀತಿಯ ನಿಷ್ಕಲoಶವಾದ ಧನ್ಯತಾ ಭಾವ ಮೂಡಿತ್ತು. ಅಂದು 10 ನಿಮಿಷದ ಒಳಗೆ ನಾನು ನನ್ನ ಅನುದಾನ ಬಿಡುಗಡೆ ಮಾಡ್ದೆ,ಈಗ ಬಸರಿ ಹೊಳೆಗೆ ಕಾಲುಸಂಕ ಸಿದ್ಧವಾಗಿದೆ, ಈ ಕಾಲುಸಂಕ ಉದ್ಘಾಟನೆ ಮಾಡಿದ್ದು ಆ ಮಕ್ಕಳ ಮುಖದಲ್ಲಿ ನಗು ನೋಡಿದ್ದು ನನ್ನ ಜೀವನದ ಒಂದು ಸಾರ್ಥಕ ಕ್ಷಣ ಅಂತಲೇ ನಾನು ಭಾವಿಸ್ತೇನೆ.” ಎಂದು ಜಿಸಿ ಚಂದ್ರಶೇಖರ್ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಇಂಥಾ ಗಂಭೀರ ಸಮಸ್ಯೆಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದು ಜಿ.ಸಿ ಚಂದ್ರಶೇಖರ ಈ ಗ್ರಾಮದ ಜನರ ಓಡಾಟಕ್ಕೆ ಸೇತುವೆ ನಿರ್ಮಾಣ ಮಾಡಿಕೊಟ್ಟು ಜನರ ಸಮಸ್ಯೆಗೆ ಪುಲ್ ಸ್ಟಾಪ್ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top