ಲೇಖಕಿ ಟ್ವಿಂಕಲ್ ಖನ್ನಾ ಅವರು ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗುವುದಾಗಿ ತಂದೆಯ ಜ್ಯೋತಿಷಿ ಹೇಳಿದಾಗ ತಮಗೆ ಅವರ್ಯಾರು ಅಂತ ಗೊತ್ತೇ ಇರಲಿಲ್ಲ ಎಂದು ತಾನು ನೀಡಿದ ಪ್ರತಿಕ್ರಿಯೆಯನ್ನು ನೆನಪಿಸಿಕೊಂಡಿದ್ದಾರೆ. ಟ್ವಿಂಕಲ್ ದಿವಂಗತ ನಟ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಅವರ ಪುತ್ರಿ, ಮತ್ತು ಅವರು ಅಂತಿಮವಾಗಿ ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗಿದ್ದರು.
ಜಾಕಿ ಶ್ರಾಫ್ ಅವರ ಟ್ವೀಕ್ ಇಂಡಿಯಾ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ಸಂದರ್ಶನದಲ್ಲಿ, ಜ್ಯೋತಿಷ್ಯವನ್ನು ಕೆಲವು ಜನರು ಹೇಗೆ ‘ಜೋಕ್’ ಎಂದು ನೋಡುತ್ತಾರೆ ಎಂಬುದನ್ನು ಅವರು ಚರ್ಚಿಸಿದ್ದಾರೆ. ಜಾಕಿಯ ತಂದೆ ಜ್ಯೋತಿಷಿಯಾಗಿದ್ದರು ಮತ್ತು ಹಲವು ಪ್ರಮುಖ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಟ್ವಿಂಕಲ್ ಅವರು ವೈಯಕ್ತಿಕವಾಗಿ ಜ್ಯೋತಿಷ್ಯವನ್ನು ನಂಬುವುದಿಲ್ಲವAತೆ, ಆದರೆ ಅವರ ತಂದೆ ತಂದೆ ಹಿಂದಿನ ದಿನದಲ್ಲಿ ಜ್ಯೋತಿಷಿಯನ್ನು ಸಂಪರ್ಕಿಸುತ್ತಿದ್ದರು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
“ನಾನು ನನ್ನ ಪತಿಯನ್ನು ಭೇಟಿಯಾಗುವ ಮೊದಲು, ಆ ಜ್ಯೋತಿಷಿ ನನ್ನ ತಂದೆಗೆ ನಾನು ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದರಂತೆ. ಹಾಗಾಗಿ ಅವರು ನನಗೆ ‘ನೀವು ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗುತ್ತೀರಿ’ ಎಂದು ಹೇಳಿದ್ದರು. ನಾನಾಗ ಅವರು ಯಾರು? ಎಂದು ಕೇಳಿದ್ದೆ. ಆಗ ಅವರು ಪೂರ್ಣ ಹೆಸರನ್ನು ಹೇಳಿದರು. ನಿನ್ನಿಂದ ಕಲ್ಪಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. ನಾನು “ಯಾರವರು? ನನಗೆ ಅವನ ಪರಿಚಯವೂ ಇಲ್ಲ.” ಎಂದು ಹೇಳಿದ್ದೆ ಎಂದು ಹಾಸ್ಯ ಪ್ರಸಂಗವನ್ನು ನೆನಪಿಸಿಕೊಂಡರು.
ಟ್ವಿಂಕಲ್ ಮುಂದುವರೆದು, “ತದನಂತರ, ನಾನು ಅಕ್ಷಯ್ ಕುಮಾರ್ ಅವರನ್ನು ವಿವಾಹವಾದೆ, ಮತ್ತು ಹಲವು ವರ್ಷಗಳ ನಂತರ, ಆ ಜ್ಯೋತಿಷಿ ಕಾಫಿಗೆ ಸಿಕ್ಕಿದ್ದರು. ಆಗ ನಾನು, ‘ನನ್ನ ವ್ಯವಹಾರದ ಬಗ್ಗೆ ಹೇಗೆ?’ ಎಂದು ಪ್ರಶ್ನೆ ಕೇಳಿದ್ದೆ. ಅವರು ‘ನೀವು ಬರಹಗಾರರಾಗುತ್ತೀರಿ’ ಎಂದರು. ನಾನು ೨೦ ವರ್ಷಗಳಿಂದ ಏನನ್ನೂ ಬರೆಯಲಿಲ್ಲ. ನಾನು, ಇದೇನು ಹೇಳುತ್ತಿದ್ದೀರಿ, ‘ನನ್ನ ಸಜಾವತ್ ಕಾ ವ್ಯವಹಾರದ ಬಗ್ಗೆ ಹೇಳಿ, ನಾನು ಬರಹಗಾರಳಾಗುತ್ತೇನಾ ಎಂದು ಕೇಳಿದ್ದೆ ಎಂದು ತಮ್ಮ ಆ ದಿನಗಳನ್ನು ನೆನಪಿಸಿಕೊಂಡರು.
ಇದರ ಹೊರತಾಗಿಯೂ, ಟ್ವಿಂಕಲ್ ಅವರು ‘ತಿಳಿದುಕೊಳ್ಳುವುದರಲ್ಲಿ’ ಯಾವುದೇ ಅರ್ಥವನ್ನು ಕಾಣುವುದಿಲ್ಲ ಎಂದು ಹೇಳಿದರು. ಮತ್ತು ಜಾಕಿ ಇದನ್ನು ಒಪ್ಪಿಕೊಂಡರು. ಜ್ಯೋತಿಷ್ಯದ ಸಲಹೆಯನ್ನು ಕೇಳಲು ಜಾಕಿ ಎಂದಿಗೂ ತನ್ನ ತಂದೆಯ ಬಳಿಗೆ ಹೋಗಲಿಲ್ಲ, ಆದರೆ ವಿಷಯಗಳನ್ನು ಅವರೇ ಹೇಳಿದ್ದರು. ನಟನಾಗುತ್ತೇನೆ ಎಂದು ಹೇಳಿದ್ದ ತಂದೆಯೇ, ಅಪಘಾತದಲ್ಲಿ ಸಾವಿಗೀಡಾದ ದಿನ ಅಣ್ಣನಿಗೆ ಮನೆ ಬಿಟ್ಟು ಹೋಗದಂತೆ ಎಚ್ಚರಿಕೆಯನ್ನೂ ಸಹ ನೀಡಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
