fbpx
ಸಮಾಚಾರ

ಗೋಶಾಲೆಗೆ ಸಂಪತ್ತು ದಾನ ಮಾಡಿ ಪುತ್ರ, ಪತ್ನಿ ಜೊತೆ ಸನ್ಯಾಸತ್ವ ಸ್ವೀಕರಿಸಿದ ಕೋಟ್ಯಾಧೀಶ್ವರ

ಗುರು ಮಹೇಂದ್ರ ಸಾಗರ್ ಜೀ ಅವರಿಂದ ಸ್ಪೂರ್ತಿ ಪಡೆದು ಬಾಲಘಾಟ್ ನ ಬುಲಿಯನ್ ವ್ಯಾಪಾರಿ ರಾಕೇಶ್ ಸುರಾನಾ ಎಂಬುವವರು ಸುಮಾರು 11 ಕೋಟಿ ಮೌಲ್ಯದ ಆಸ್ತಿಯನ್ನು ಬಿಟ್ಟು, ಅವರ ಪತ್ನಿ ಮತ್ತು ಮಗನೊಂದಿಗೆ ಮೇ 22 ರಂದು ಜೈಪುರದಲ್ಲಿ ವಿಧಿವತ್ತಾಗಿ ದೀಕ್ಷೆ ಪಡೆಯಲು ನಿರ್ಧರಿಸಿದ್ದಾರೆ. ಇವರು ತಮ್ಮ ಆಸ್ತಿಯನ್ನು ಗೋಶಾಲೆ ಮತ್ತು ಇತರ ಧಾರ್ಮಿಕ ಸಂಸ್ಥೆಗಳಿಗೆ ಧಾನ ಮಾಡಿದ್ದಾರೆ.

ರಾಕೇಶ್ ಅವರ ಪತ್ನಿ ಲೀನಾ ಸುರಾನಾ ಚಿಕ್ಕವರಿಂದಲೂ ಸಂಯಮದ ಹಾದಿಯಲ್ಲಿ ಸಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಇನ್ನು ಇವರ ಮಗ ಅಮಯ್ ಸುರಾನಾ ಕೇವಲ 4 ನೆೇ ವಯಸ್ಸಿನಲ್ಲಿ ಸಂಯಮದ ಹಾದಿಯಲ್ಲಿ ಸಾಗುವ ಮನಸ್ಸು ಮಾಡಿದ್ದ. ಆದರೆ ಇನ್ನು ಚಿಕ್ಕ ವಯಸ್ಸಿನವರಾದ ಕಾರಣ 7 ವರ್ಷದ ವರೆಗೂ ಕಾಯಬೇಕಿತ್ತು.

ಒಂದು ಚಿಕ್ಕ ಅಂಗಡಿಯೊಂದಿಗೆ ಚಿನ್ನ ಮತ್ತು ಬೆಳ್ಳಿ ವ್ಯವಹಾರದೊಂದಿಗೆ ಶುರುವಾದ ಇವರ ಬದುಕು ಇಂದು ಬುಲಿಯನ್ ಏರಿಯಾದಲ್ಲಿ ಹೆಸರು ಮತ್ತು ಖ್ಯಾತಿ ಎರಡನ್ನೂ ಗಳಿಸಿದ್ದರು. ಇವರು ಕೋಟಿಗಟ್ಟಲೆ ಆಸ್ತಿಯನ್ನು ಗಳಿಸಿದ್ದಾರೆ. ಆದರೆ ಇಂದು ತಾವು ಗಳಿಸಿದ ಅಷ್ಟು ಆಸ್ತಿಯನ್ನು ದಾನ ಮಾಡಿ ಆಧ್ಯಾತ್ಮಿಕತೆಯತ್ತ ಸಾಗಿದ್ದಾರೆ.

ಇದಲ್ಲದೆ ರತ್ಲಾಮ್‌ನ 10 ವರ್ಷದ ಇಶಾನ್ ಕೊಠಾರಿ ಮತ್ತು ರತ್ಲಾಮ್ ಅವರ ಅವಳಿ ಸಹೋದರಿಯರಾದ ತನಿಷ್ಕಾ ಮತ್ತು ಪಾಲಕ್ ಕೂಡ ಮೇ 26 ರಂದು ದೀಕ್ಷೆ ತೆಗೆದುಕೊಳ್ಳುತ್ತಾರೆ. ಇನ್ನು ಇವರ ಅಕ್ಕ ದೀಪಾಲಿ 5 ವರ್ಷಗಳ ಹಿಂದೆ ದೀಕ್ಷೆಯನ್ನು ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top