fbpx
ಸಮಾಚಾರ

ಮೇ 23 : ನಾಳೆಯ ಪಂಚಾಂಗ ಮತ್ತು ಭವಿಷ್ಯ

ಮೇ 23, 2022 ಸೋಮವಾರ
ವರ್ಷ : 1944, ಶೋಭಾಕೃತ
ತಿಂಗಳು : ವೈಶಾಖ, ಪಕ್ಷ : ಕೃಷ್ಣಪಕ್ಷ

Panchangam
ತಿಥಿ : ಅಷ್ಟಮೀ : May 22 01:00 pm – May 23 11:34 am; ನವಮೀ : May 23 11:34 am – May 24 10:45 am
ನಕ್ಷತ್ರ : ಶತಭಿಷ: May 22 10:47 pm – May 23 10:22 pm; ಪೂರ್ವಾ ಭಾದ್ರ: May 23 10:22 pm – May 24 10:33 pm
ಯೋಗ : ವೈಧೃತಿ: May 23 02:59 am – May 24 01:05 am; ವಿಷ್ಕಂಭ: May 24 01:05 am – May 24 11:41 pm
ಕರಣ : ಕುಲವ: May 23 12:13 am – May 23 11:34 am; ತೈತುಲ: May 23 11:34 am – May 23 11:05 pm; ಗರಿಜ: May 23 11:05 pm – May 24 10:45 am

Time to be Avoided
ರಾಹುಕಾಲ : 7:31 AM to 9:06 AM
ಯಮಗಂಡ : 10:41 AM to 12:16 PM
ದುರ್ಮುಹುರ್ತ : 12:41 PM to 01:32 PM, 03:13 PM to 04:04 PM
ವಿಷ : 04:49 AM to 06:26 AM
ಗುಳಿಕ : 1:51 PM to 3:26 PM

Good Time to be Used
ಅಮೃತಕಾಲ : 03:17 PM to 04:52 PM
ಅಭಿಜಿತ್ : 11:51 AM to 12:41 PM

Other Data
ಸೂರ್ಯೋದಯ : 5:56 AM
ಸುರ್ಯಾಸ್ತಮಯ : 6:36 PM

 

 

 
 

ಪವಿತ್ರವಾದುದನ್ನು ನೀವು ಬಯಸಿದಷ್ಟು ನಿರಾಶರಾಗುತ್ತೀರಿ. ಹಮ್ಮಿಕೊಂಡ ಕಾರ್ಯಗಳು ಅರ್ಧಕ್ಕೆ ನಿಲ್ಲುವವು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ.

ಮನೆಯಲ್ಲಿ ನೀವೇ ಒಂದು ಉಳಿದವರು ಒಂದು ಎಂಬ ಭಾವನೆ ಬರಬಹುದು. ಆದರೂ ಮುಖದಲ್ಲಿ ನಗುವಿನ ಮುಖವಾಡವನ್ನು ಅನಿವಾರ್ಯವಾಗಿ ಧರಿಸಿಕೊಳ್ಳಬೇಕಾಗುವುದು. ನಗುವ ವ್ಯಕ್ತಿಯನ್ನು ಆದರಿಸುವವರೇ ಹೊರತು ಅಳುವವರನ್ನು ಅಲ್ಲ.

ಯಾವ ಕೆಲಸವೂ ನಿರಾಯಾಸವಾಗಿ ಆಗುವುದಿಲ್ಲ ಎಂಬ ಖಾತ್ರಿಯೂ ನಿಮಗೆ ಗೊತ್ತಾಗುವುದು. ಭಗವಂತನ ಕೃಪೆ ಹೊಂದಿದಲ್ಲಿ ಸೂಕ್ತ ವ್ಯವಸ್ಥೆ ಆಗುವುದು.

ಮನೆಗೆದ್ದು ಮಾರುಗೆಲ್ಲು ಎಂದರು ಅನುಭಾವಿಗಳು. ಆದರೆ ಮನೆಯ ಸದಸ್ಯರುಗಳಿಗೆ ಉತ್ತರಿಸುವಷ್ಟು ಬುದ್ಧಿ ಚಾತುರ್ಯವಿಲ್ಲದಂತೆ ಆಗುವುದು. ಇದು ಕೇವಲ ತಾತ್ಕಾಲಿಕವಾಗಿದ್ದು, ಇದರಿಂದ ಬಿಡುಗಡೆ ಹೊಂದುವಿರಿ.

 

ಮೆದುಳಿನಲ್ಲಿ ಅನೇಕ ವಿಚಾರಗಳು ತಾಕಲಾಟ ನಡೆಸಿವೆ. ಅವುಗಳಲ್ಲಿ ಯಾವುದನ್ನು ಮೊದಲು ಆರಂಭಿಸಬೇಕು ಎಂದು ಗೊಂದಲ ಮೂಡುವುದು. ಮಹತ್ತರ ಕೆಲಸಗಳನ್ನು ಆದ್ಯತೆಯ ಮೇಲೆ ಆರಂಭಿಸಿ ಒಳಿತಾಗುವುದು.

 

ಜೀವನದಲ್ಲಿ ಯಾರೂ ಕೆಲಸಕ್ಕೆ ಬಾರದವರಲ್ಲ. ಭಗವಂತ ಒಬ್ಬೊಬ್ಬರಲ್ಲಿ ಒಂದು ವಿಶಿಷ್ಟ ಶಕ್ತಿ ಕೊಟ್ಟಿರುತ್ತಾನೆ. ಪರರ ವೈಫಲ್ಯವನ್ನು ಎತ್ತಿ ಆಡುವುದು ಅಷ್ಟು ಸಮಂಜಸವಲ್ಲ. ನಿಮ್ಮನ್ನು ನೀವು ಆತ್ಯೈಸಿಕೊಳ್ಳಿ.

 

ನಿರಂತರವಾದ ವಾದವಿವಾದಗಳು ಪ್ರಯೋಜನ ನೀಡಲಾರವು. ಮೌನದಿಂದ ಕೆಲಸ ಸಾಧಿಸಿ ನಿರಾಳತೆಯಿಂದ ಬದುಕಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು. ಕುಲದೇವತಾ ಸ್ಮರಣೆ ಮಾಡಿ.

 

ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದೇನೆ ಎಂಬ ಹಿಂಜರಿಕೆಯನ್ನು ನಿಯಂತ್ರಿಸಿ ಬುದ್ಧಿ ಚಾತುರ‍್ಯದಿಂದಲೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಿರಿ ಮತ್ತು ನಿಮ್ಮ ಹೋರಾಟದಲ್ಲಿ ಜಯ ಸಾಧಿಸುವಿರಿ.

 

ನಿರಾಯಾಸ ಮಾತುಗಳಿಂದ ಹತ್ತು ಹಲವು ಕೆಲಸಗಳನ್ನು ಸಾಧಿಸುವಿರಿ. ಆದರೆ ಅದೇ ಅಹಂ ಆಗದಿರಲಿ. ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರ ಮನುಷ್ಯನ ಅಧಃಪತನಕ್ಕೆ ಕಾರಣವಾಗುವುದು.

ಸರಳತನ ಇರಬೇಕು. ಆದರೆ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುವಷ್ಟು ಇರಬಾರದು. ಕೆಲವು ವಿಷಯಗಳಲ್ಲಿ ನೀವು ಹುಂಬುತನದಿಂದ ವರ್ತಿಸುವುದನ್ನು ಬಿಟ್ಟಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

 

ಎಲ್ಲಾ ವಿಚಾರಗಳಿಗೂ ಗೆಳೆಯರನ್ನು ಆಶ್ರಯಿಸುವುದು ಸೂಕ್ತವಲ್ಲ. ಕೆಲವು ವಿಚಾರಗಳಲ್ಲಿ ಸ್ವತಂತ್ರ ನಿರ್ಧಾರ ತಳೆಯುವುದು ಒಳ್ಳೆಯದು. ಅಂತೆಯೇ ಕುಟುಂಬ ಸದಸ್ಯರ ಸಲಹೆಗಳು ಅಷ್ಟೇ ಮಹತ್ವಪೂರ್ಣವಾಗಿರುತ್ತವೆ.

ಆತ್ಮವಿಶ್ವಾಸ ಬಹಳ ಉತ್ತಮವಾದುದು. ನಿಮ್ಮ ಧೈರ್ಯ ಸ್ಥೈರ್ಯಗಳು ಅಸಾಧ್ಯ ಎನಿಸಿದ್ದನ್ನು ಸಾಧಿಸಿಕೊಡಲಿವೆ. ಮಕ್ಕಳ ವಿವಾಹದ ವಿಚಾರದಲ್ಲಿ ಒಂದು ದೃಢ ನಿರ್ಧಾರ ತಳೆಯುವುದು ಒಳ್ಳೆಯದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top