2022 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆ ಹಂತಕ್ಕೆ ತಲುಪಿದ್ದು ಇನ್ನೇನು ಮೂರ್ನಾಲ್ಕು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಲೀಗ್ ಪಂದ್ಯಗಳೆಲ್ಲಾ ಮುಗಿದು ಪ್ಲೇ ಆಫ್ ಪಂದ್ಯಗಳನ್ನು ಇನ್ನಷ್ಟೇ ಆರಂಭಿಸಬೇಕಿದ್ದು ಈ ಭಾರಿಯ ಪ್ರಶಸ್ತಿ ಯಾವ ತಂಡದ ಪಾಲಾಗಲಿದೆ ಎಂಬ ಕುತೂಹಲ ಗರಿಗೆದರಿದೆ.
ಆರ್ ಸಿ ಬಿ ಅಭಿಮಾನಿಗಳನ್ನ ಹುರುದುಂಬಿಸಿದ ಕಿಲ್ಲೇರಮಠದ ಸ್ವಾಮೀಜಿ ಕಾರ್ಯಕ್ರಮವೊಂದರಲ್ಲಿ, ಆರ್ ಸಿ ಬಿ ಸೋತಾಗ ಮತ್ತು ಗೆದ್ದಾಗಲೂ ಪ್ರೋತ್ಸಾಹಿಸಿದ್ದಿರಿ ಈ ಸಲ ಕಪ್ ನಮ್ದೇ ಅಂತಾ ಜೈಕಾರ ಹಾಕಿದ್ದೀರಿ ಇದೀಗ ಈ ವಿಡಿಯೋ ವೈರಲ್ ಆಗಿದೆ pic.twitter.com/Lzll8XYuOr
— GBKM (@officialGBKM) May 23, 2022
ಈ ಬಾರಿ ಪ್ಲೇ ಆಫ್ ಹಂತಕ್ಕೆ ಕ್ವಾಲಿಫೈ ಆಗಿರುವ ತಂಡಗಳಲ್ಲಿ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಇರುವುದರಿಂದ ಕನ್ನಡಿಗರಲ್ಲಿ ಮತ್ತಷ್ಟು ಉತ್ಸಾಹ ಮೂಡಿದೆ.. ಈ ಬಾರಿಯಾದರೂ ನಮ್ಮ RCB ಟ್ರೋಫಿ ಗೆಲ್ಲುವಂತಾಗಲಿ ಎಂದು RCB ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.. ಎಷ್ಟೇ ಸಲ ಸೋತರು ಕೈಬಿಡದೆ ಸದಾ RCB ಬೆಂಬಲವಾಗಿ ನಿಲ್ಲುವ RCB ಅಭಿಮಾನಿಗಳು ಇದೀಗ ಖಿಲ್ಲೇಮಠದ ಸ್ವಾಮೀಜಿಗಳು ಹುರಿದುಂಬಿಸಿದ್ದಾರೆ.
ರಾಯಚೂರಿನ ಕಿಲ್ಲೇಮಠದ ಶ್ರೀ ಶ್ರೀ ಶಾಂತಮಲ್ಲ ಶಿವಾಚಾರ್ಯ RCB ಕ್ವಾರ್ಟರ್ ಫೈನಲ್ ಪ್ರವೇಶದ ಬಗ್ಗೆ ಮಾತನಾಡಿ, RCB ಸೋತಾಗ ಮತ್ತು ಗೆದ್ದಾಗಲೂ ‘ಈ ಸಲ ಕಪ್ ನಮ್ದೇ’ ಎಂದು ಜೈಕಾರ ಹಾಕಿದ್ದೀರಿ. ನಿಮ್ಮ ಹಾರೈಕೆಯಿಂದ ಇವತ್ತು RCB ಕ್ವಾರ್ಟರ್ ಫೈನಲ್ಗೆ ಹೋಗಿದೆ ಎಂದರು. ಹಾಗೆ ಈ ಸಲ RCB ಕಪ್ ಗೆಲ್ಲುತ್ತೆ ಎಂದು ಹೇಳಿ ಅಭಿಮಾನಿಗಳಿಗೆ ಖುಷಿ ನೀಡಿದರು. ಸ್ವಾಮೀಜಿಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
