“ಚಾಲೆಂಜಿಂಗ್ ಸ್ಟಾರ್” “ಡಿಬಾಸ್” ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಅತಿಯಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು ಹೆಚ್ಚಾಗಿ ಮಾಸ್ ಸಿನಿಮಾಗಳಿಗೆ ಸಕತ್ ಫೇಮಸ್. ಇದೀಗ ದರ್ಶನ್ ಪಾನ್ ಇಂಡಿಯಾ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂದು ಗಾಂಧಿನಗರದಲ್ಲಿ ಸುದ್ದಿ ಹರಿದಾಡುತ್ತಿದೆ.
ಸದ್ಯಕ್ಕೆ ದರ್ಶನ್ ‘ಕ್ರಾಂತಿ’ ಸಿನಿಮಾದ ಶೂಟಿಂಗ್ ಅಲ್ಲಿ ಬ್ಯುಸಿ ಆಗಿದ್ದಾರೆ. ಕ್ರಾಂತಿ ಕೂಡ ಪಾನ್ ಇಂಡಿಯಾ ಸಿನಿಮಾವಾಗಿದ್ದು ಇದರ ಜೊತೆ ಮತ್ತೊಂದು ಪಾನ್ ಇಂಡಿಯಾ ಸಿನಿಮಾ ಮಾಡುವ ಬಗ್ಗೆ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ ಮತ್ತು ಈ ಚಿತ್ರವನ್ನು ಸೂರಿ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೇಳಿಕೇಳಿ ದರ್ಶನ್ ಮಾಸ್ ಹೀರೋ. ಇನ್ನು ಸೂರಿ ಮಾಸ್ ಚಿತ್ರದ ನಿರ್ದೇಶನದಲ್ಲಿ ಎತ್ತಿದ ಕೈ. ಇವರಿಬ್ಬರು ಒಂದಾದರೆ ಸಿನಿರಸಿಕರಿಗೆ ಮಾಸ್ ಎಂಟರ್ ಟೈನ್ಮೆಂಟ್ ಸಿಗೋದು ಪಕ್ಕ. ಇದಕ್ಕಿಂತ ಮೊದಲು ನಟ ದರ್ಶನ್ ಮತ್ತು ದುನಿಯಾ ಸೂರಿ ಜೊತೆಯಾಗಿ ಸಿನಿಮಾ ಮಾಡುತ್ತಾರೆ ಎನ್ನುವ ಬಗ್ಗೆ ಹಲವು ಬಾರಿ ಸುದ್ದಿ ಆಗಿತ್ತು. ಆದರೆ ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ.
ಆದರೆ ಇದೀಗ ಕಾಲ ಮತ್ತೆ ಕೂಡಿ ಬಂದಿದ್ದು ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ. ಇನ್ನು ಈ ಸಿನಿಮಾಕ್ಕೆ ಈಗಾಗಲೇ ಟೈಟಲ್ ಫಿಕ್ಸ್ ಆಗಿದ್ದು ಇದಕ್ಕೆ “ಕದನ ವಿರಾಮ” ಎಂಬ ಹೆಸರನ್ನು ಇಡಲಾಗಿದೆ ಎಂದು ಸುದ್ದಿ ಆಗುತ್ತಿದೆ. ಇದು ಕೂಡ ಪಾನ್ ಇಂಡಿಯಾ ಸಿನಿಮಾ ವಾಗಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇವರಿಬ್ಬರ ಕಾಂಬಿನೇಶನ್ ಅಲ್ಲಿ ಚಿತ್ರ ಮೂಡಿಬಂದರೆ ಅಭಿಮಾನಿಗಳಿಗೆ ಮಾಸ್ ಎಂಟರ್ ಟೈನ್ಮೆಂಟ್ ಸಿಗೋದು ಪಕ್ಕಾ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
