fbpx
ಸಮಾಚಾರ

ವನಿಂದು ಹಸರಂಗ ಕ್ಯಾಚ್ ವಿವಾದ – ಐಸಿಸಿ ನಿಯಮ ಏನು ಹೇಳುತ್ತೆ ಗೊತ್ತಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆದ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿ ಬಿ ಉತ್ತಮ ಪ್ರದರ್ಶನ ನೀಡಿ ಕ್ವಾಲಿಫೈರ್ ಹಂತ ತಲುಪಿದೆ. ಈ ಪಂದ್ಯದಲ್ಲಿ ಪಟಿದಾರ್ ಅವರ ಬ್ಯಾಟಿಂಗ್ ಒಂದು ಕಡೆ ಎಲ್ಲರ ಗಮನವನ್ನು ಗ್ರಹಿಸಿದರೆ ಮತ್ತೊಂದೆಡೆ ವನಿಂದು ಹಸರಂಗ ಅವರು ಹಿಡಿದು ಬಿಟ್ಟು ಆ ಒಂದು ಕ್ಯಾಚ್ ಎಲ್ಲರನ್ನು ಆಕರ್ಷಿಸಿತು. ಆದರೆ ಇದರ ಕುರಿತು ಹಲವಾರು ಚರ್ಚೆಗಳಾಗುತ್ತಿವೆ.

ಆರ್ ಸಿ ಬಿ ನೀಡಿದ 208 ರನ್ ಗಳ ಬೃಹತ್ ಮೊತ್ತವನ್ನು ಎದುರಿಸಿದ ರಾಹುಲ್ ಪಡೆ ಒಂದು ಹಂತದಲ್ಲಿ ಗೆದ್ದು ಬಿಡುತ್ತಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಏಕೆಂದರೆ ರಾಹುಲ್ ಮತ್ತು ದೀಪಕ್ ಹೂಡಾ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದರು. ಈ ಸಂಧರ್ಭದಲ್ಲಿ 10 ನೇ ಓವರ್ ನ 3 ನೇ ಎಸೆತದಲ್ಲಿ ದೀಪಕ್ ಹೂಡಾ ಮಹತ್ವದ ಶಾಟ್ ಒಂದನ್ನು ಒಡೆದರು. ಬೌಂಡರಿ ಲೈನ್ ನಲ್ಲಿದ್ದ ಹಸರಂಗ ತಮ್ಮೆಲ್ಲ ಪ್ರಯತ್ನವನ್ನು ಹಾಕಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದರು. ಆದರೆ ನಿಯಂತ್ರಣ ಕಳೆದುಕೊಂಡ ಕಾರಣ ಕ್ಯಾಚ್ ಸಂಪೂರ್ಣವಾಗಿ ಹಿಡಿದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಕೆಲವು ಸೆಕೆಂಡ್ ಗಳ ಕಾಲ ಬೌಲ್ ತಮ್ಮ ಕೈಯಲ್ಲೇ ಇತ್ತು. ಆದರೆ ಇದರ ಬಗ್ಗೆ ಅಂಪೈರ್ ಆಗಲಿ ಸಹ ಆಟಗಾರರಾಗಲಿ ತಲೆ ಕೆಡಿಸಿಕೊಂಡಿರಲಿಲ್ಲ. ಈಗಾಗಿ ಇದನ್ನು ಕ್ಯಾಚ್ ಎಂದು ಯಾಕೆ ಪರಿಗಣಿಸಿರಲಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳ ಮನಸಲ್ಲಿ ಅನುಮಾನ ವ್ಯಕ್ತವಾಗಿತ್ತು.

 

 

ಐಸಿಸಿ ನಿಯಮವೇನು?
ಐಸಿಸಿ ನಿಯಮ 33.3 ಪ್ರಕಾರ ಆಟಗಾರನ ಕೈಗೆ ಬಾಲ್ ತಾಗಿದಾಗ ಕ್ಯಾಚ್ ಪ್ರಕ್ರಿಯೆ ಅವಾಗ ಶುರುವಾಗುತ್ತದೆ. ಬಾಲ್ ಮತ್ತು ಫೀಲ್ಡರ್ ಸ್ವಂತ ಚಲನೆ ಮತ್ತು ಬಾಲ್ ಎರಡರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಪಡೆದಾಗ ಕೊನೆಗೊಳ್ಳುತ್ತದೆ. ಒಂದು ವೇಳೆ ಫೀಲ್ಡರ್ ತನ್ನ ನಿಯಂತ್ರವನ್ನು ಕಳೆದುಕೊಂಡರೆ ಅದು ಕ್ಯಾಚ್ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹಸರಂಗ ಅವರ ಸ್ಥಿತಿಯಲ್ಲಿ ಇದೆ ಆಗಿದೆ.

ಹಸರಂಗ ಕ್ಯಾಚ್ ಇಡಿದರು ಹೆಚ್ಚು ಕಾಲ ಬಾಲ್ ತಮ್ಮ ಕೈಯಲ್ಲಿ ಇರಲಿಲ್ಲ. ಹೀಗಾಗಿ ಇದನ್ನು ಕ್ಯಾಚ್ ಎಂದು ಪರಿಗಣಿಸಿರಲಿಲ್ಲ. ಆದರೂ ಉತ್ತಮ ಕ್ಷೇತ್ರ ರಕ್ಷಣಾ ಮಾಡುವ ಮೂಲಕ ತಂಡಕ್ಕೆ 5 ರನ್ ಸೇವ್ ಮಾಡಿ ಗೆಲುವು ತಂದುಕೊಟ್ಟರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top