fbpx
ಸಮಾಚಾರ

ಮತ್ತೊಂದು ವಿವಾದದಲ್ಲಿ ‘ಚಕ್ರತೀರ್ಥ’: ಅಂಬೇಡ್ಕರ್‌ ಬಗ್ಗೆ ಮಾಡಿದ್ದ ವ್ಯಂಗ್ಯ ‘ಕಾಮೆಂಟ್‌’ ವೈರಲ್‌

ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಕೇವಲ ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಪರ- ವಿರೋಧಗಳ ಚರ್ಚೆ ನಡುವೆ ಪ್ರತಿಭಟನೆ ನಡೆಯುತ್ತಿದೆ.

 

 

ಈ ಮದ್ಯೆ ರೋಹಿತ್‌ ಚಕ್ರತೀರ್ಥ ಮಾಡಿದ್ದ ಹಳೆಯ ಟ್ರೋಲ್‌ಗಳು, ಅಸಂಬಂಧ ಪೋಸ್ಟ್‌ಗಳು, ಕಮೆಂಟ್‌ಗಳು ಈಗ ಒಂದಾದಾಗಿ ಚರ್ಚೆಯ ಮುನ್ನೆಲೆಗೆ ಬರುತ್ತಿವೆ. ಕುವೆಂಪು, ದಲಿತ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಅನೇಕ ಮಹನೀಯರ ಬಗ್ಗೆ ಕೀಳು ಮಟ್ಟದಲ್ಲಿ ಮಾಡಲಾಗಿದ್ದ ಪೋಸ್ಟ್ಗಳು ವೈರಲ್ ಆಗತೊಡಗಿವೆ. ಇದೀಗ ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಭೆಯನ್ನು ಅಣಕಿಸಿ ಚಕ್ರತೀರ್ಥ ಮಾಡಿದ್ದ ಕಮೆಂಟ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಹಳೆಯ ಕಮೆಂಟ್ ಈಗ ವಿವಾದಕ್ಕೆ ಕಾರಣವಾಗಿದೆ.

“ಸಿ.ಎಸ್.ದ್ವಾರಕಾನಾಥ್ ಅವರು ಬರೆದ ‘ಸರ್ ಎಂ.ವಿ.ಸುತ್ತ ಹೆಣೆದ ಕತೆಗಳು ಮತ್ತು ಸತ್ಯ’ ಎಂಬ ಲೇಖನಕ್ಕೆ ಚಕ್ರತೀರ್ಥ ಮಾಡಿದ ಕಮೆಂಟ್‌ನಲ್ಲಿ ಅಂಬೇಡ್ಕರ್ ಕುರಿತ ಕೆಟ್ಟ ವ್ಯಂಗ್ಯ” ಎಂದು ಶಶಿಧರ್‌ ಹೆಮ್ಮಾಡಿಯವರು 2016ರಲ್ಲಿ ಹಂಚಿಕೊಂಡಿದ್ದ ಹಳೆ ಪೋಸ್ಟ್‌ ಈಗ ಲಭ್ಯವಾಗಿದೆ.

“ಅಂಬೇಡ್ಕರ್‌ ಜಗತ್ತಿನ ಅತಿದೊಡ್ಡ ಜಲತಂತ್ರಜ್ಞರು, ವಾಯುತಂತ್ರಜ್ಞರು, ವೈದ್ಯರು, ಕಂಪ್ಯೂಟರ್‌ ತಜ್ಞರು, ಪ್ರಾಧ್ಯಾಪಕರು, ವಕೀಲರು, ರಾಕೆಟ್ ತಂತ್ರಜ್ಞರು ಆಗಿದ್ದರು. ಪ್ರಪಂಚದಲ್ಲಿ ಚಕ್ರ ಮತ್ತು ಬೆಂಕಿಯ ಉಪಯೋಗವನ್ನು ಕಂಡುಹಿಡಿದವರು ಇವರೇ- ಜೈ ಭೀಮ್‌” ಎಂದು ಕೀಳು ಮಟ್ಟದಲ್ಲಿ ರೋಹಿತ್ ಚಕ್ರತೀರ್ಥ ಹೀಯಾಳಿಸಿರುವುದು ಇಲ್ಲಿ ಕಾಣಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top