2021ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಫಲಿತಾಂಶ ಮೇ 30ರಂದು ಹೊರಬಿದ್ದಿತ್ತು. ಈ ಪರೀಕ್ಷೆಯಲ್ಲಿ ದೇಶದ 600ಕ್ಕೂ ಅಧಿಕ ಮಂದಿ ಪಾಸ್ ಆಗಿದ್ದಾರೆ. ಕರ್ನಾಟಕದ 20ಕ್ಕೂ ಅಧಿಕ ಮಂದಿ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶೇಷ ಎಂದರೆ, ಡಾ.ರಾಜ್ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿಯಿಂದ ಈ ಬಾರಿ 8 ಜನರು ಉತ್ತೀರ್ಣರಾಗಿದ್ದಾರೆ. ಈ ಸಂಬಂಧ ರಾಘಣ್ಣ ಅವರು ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದವರಿಗೆ ಅಭಿನಂಧನೆ ಸಲ್ಲಿಸಿದ್ದಾರೆ.
ಡಾ.ರಾಜ್ಕುಮಾರ್ ಅಕಾಡೆಮಿ ಹಲವು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಅಕಾಡೆಮಿ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದು, ಪ್ರತಿ ವರ್ಷ ಈ ಅಕಾಡೆಮಿಯಿಂದ ಹಲವು ಮಂದಿ ಉತ್ತಮ ರ್ಯಾಂಕ್ ಪಡೆದು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಿದ್ದಾರೆ ಅದರಂತೆ, ಈ ಬಾರಿ ಕೂಡ 8 ಮಂದಿ ಇದೇ ಅಕಾಡೆಮಿಯಿಂದ ತೇರ್ಗಡೆಯಾಗಿದ್ದಾರೆ.
ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ದೃಷ್ಟಿ ಸಮಸ್ಯೆ ಅನುಭವಿಸುತ್ತಿರುವ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮೇಘನಾ ಅವರು ಈ ಬಾರಿ 425 ರ್ಯಾಂಕ್ ಪಡೆದಿದ್ದಾರೆ, ಈ ಹಿಂದೆ ಕೂಡ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 465 ನೆ ರ್ಯಾಂಕ್ ಪಡೆದಿದ್ದರು.
ಉಳಿದಂತೆ ಇದೇ ಅಕಾಡೆಮಿಯ ಬೇನಕ ಪ್ರಸಾದ್ (92 ), ನಿಖಿಲ್ ಬಿ. ಪಾಟೀಲ್ (139, ರಾಜೇಶ್ ಪೆÇನ್ನಪ್ಪ (222), ದೀಪಕ್ ಆರ್.ಸೇಟ್(139) , ಪ್ರೀತಿ ಪಂಚಾಲ್ (449), ಪ್ರಶಾಂತ್ಕುಮಾರ್ ಬಿ.ಓ. (641), ರವಿನಂದನ್ ಬಿ.ಎಂ. 455 ನೆ ರ್ಯಾಂಕ್ನಲ್ಲಿ ಉತ್ತೀರ್ಣರಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
