ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ವಿಕ್ರಮ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಮತ್ತೆ ಪ್ರವೇಶಿಸುತ್ತಿದ್ದಾರೆ. ಇಂದು ವಿಕ್ರಮ್ ಸಿನಿಮಾ ಬಿಡುಗಡೆಯಾಗಲಿದೆ. ಸಿನಿಮಾದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದ ಕಮಲ್ ಹಾಸನ್ ಅವರಿಗೆ ಅಣ್ಣಾವ್ರ ಕುಟುಂಬದ ಮೇಲೆ ಎಷ್ಟು ಪ್ರೀತಿ ಇದೇ ಎಂದು ಹೇಳಿದರು.
ವಿಕ್ರಮ್ ಸಿನಿಮಾದ ಪೋಸ್ಟರ್, ಟ್ರೈಲರ್ ರಿಲೀಸ್ ಆಗಿ ಸಕತ್ ಸೌಂಡ್ ಮಾಡಿತ್ತು. ಇನ್ನು ಈ ಸಿನಿಮಾದ ನೀರಿಕ್ಷೆಯಲ್ಲಿ ಅಭಿಮಾನಿಗಳು ಕಾಯುತ್ತಿದ್ದರು. ಇಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರಮೋಷನ್ ಅಲ್ಲಿ ಬ್ಯುಸಿ ಆಗಿದ್ದ ಕಮಲ್ ಹಾಸನ್ ಬೆಂಗಳೂರಿನಲ್ಲೂ ತಮ್ಮ ಸಿನಿಮಾದ ಪ್ರಮೋಷನ್ ಮಾಡಿದ್ದಾರೆ. ಇವರಿಗೆ ಕನ್ನಡ ಸಿನಿಮಾದ ಮತ್ತು ಚಿತ್ರರಂಗದ ಬಗ್ಗೆ ಅಪಾರವಾದ ಅಭಿಮಾನವಿದೆ. ಇದಲ್ಲದೆ ಇವರು ವರನಟ ಡಾ. ರಾಜ್ ಕುಮಾರ್ ಅವರೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ.
ಕಮಲ್ ಹಾಸನ್ ಕನ್ನಡ ಹಲವಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಾವು 21 ನೇ ವಯಸ್ಸಿನಲ್ಲಿದ್ದಾಗ `ಪುಷ್ಪಕವಿಮಾನ’ ಚಿತ್ರದ ಮೊದಲ ದಿನದ ಶೂಟಿಂಗ್ಗೆ ಡಾ.ರಾಜ್ಕುಮಾರ್ ಅವರು ಬಂದು ಬೆನ್ನು ತಟ್ಟಿ ಪ್ರಶಂಸಿದರು’ ಎಂದು ಹಳೆಯ ನೆನಪಿನ ಬಗ್ಗೆ ಮಾತನಾಡಿದರು.
ಇದಲ್ಲದೆ ನನಗೆ ಕರ್ನಾಟಕ ಸಾಕಷ್ಟು ಗುರುಗಳನ್ನು ಕೊಟ್ಟಿದೆ. ಬೇರೆ ಅವರನ್ನು ನಾವು ಹೇಗೆ ಗೌರವಿಸಬೇಕು ಅಂತಾ ಡಾ.ರಾಜ್ಕುಮಾರ್ ಅವರಿಂದ ಕಲಿತಿದ್ದೆ. ಅವರ ಈ ಗುಣವನ್ನು ಅವರ ಮಕ್ಕಳಿಗೂ ಕಲಿಸಿದ್ದಾರೆ. ನಾನು ಪುನೀತ್ ಮತ್ತು ಅಣ್ಣಾವ್ರು ಇಬ್ಬರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
