ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತೆರೆ ಮಾತ್ರ ಅಲ್ಲ ನಿಜ ಜೀವನದಲ್ಲೂ ಸಿಂಪಲ್ ಅಂತ ಅವರನ್ನ ನೋಡಿದ್ದರೇನೇ ಗೊತ್ತಾಗುತ್ತೆ.. ಯಾವುದೇ ಅದ್ದೂರಿ ಆಡಂಬರವಿಲ್ಲದೆ ಸೀದಾಸಾದಾ ಪೋಷಾಕಿನಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ರಕ್ಷಿತ್ ಎಲ್ಲರಿಗೂ ಇಷ್ಟವಾಗುತ್ತಾರೆ..
ನೆನ್ನೆಯಷ್ಟೇ ಬರ್ತಡೇ ಆಚರಿಸಿಕೊಂಡಿರುವ ರಕ್ಷಿತ್ ಶೆಟ್ಟಿ ಸದ್ಯ ಇದೆ ವಾರ ತೆರೆಗೆ ಬರುತ್ತಿರುವ ತಮ್ಮ ಮುಂದಿನ ಸಿನಿಮಾ ಚಾರ್ಲಿ ಚಿತ್ರದ ಪ್ರೊಮೋಷನ್ ನಲ್ಲಿ ಸಕತ್ ಬ್ಯುಸಿಯಾಗಿದ್ದಾರೆ..ಈ ಮದ್ಯೆ ಇತ್ತೀಚಿಗೆ ರಕ್ಷಿತ್ ಶೆಟ್ಟಿ ಅವರು ಕೊರಳಿಗೆ ಮತ್ತು ಮಾಣಿಕಟ್ಟಿಗೆ ರುದ್ರಾಕ್ಷಿಯನ್ನು ಧರಿಸಿರುವ ಫೋಟೋಗಳನ್ನ ಗಮನಿಸಿರಬಹುದು. ಈ ಬಗ್ಗೆ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಮಾತನಾಡಿದ್ದಾರೆ.
ಚಿತ್ರ ಬಿಡುಗಡೆಯ ಪ್ರಯುಕ್ತ ಆದಷ್ಟು ವಾಹಿನಿಗಳಿಗೆ ರಕ್ಷಿತ್ ಸಂದರ್ಶನ ನೀಡುತ್ತಿದ್ದಾರೆ ಈ ವೇಳೆ ತಾವು ರುದ್ರಾಕ್ಷಿ ಧರಿಸಲು ಕಾರಣವೇನು ಎಂಬ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ರಕ್ಷಿತ್ ಕೈಯಲ್ಲಿ ಹಾಗೂ ಕತ್ತಿನಲ್ಲಿ ರುದ್ರಾಕ್ಷಿ ಇದೆ. ಇದನ್ನು ಹಾಕಿಕೊಳ್ಳುವುದು ಏಕೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ಶಿವ ನನ್ನ ಫೇವರಿಟ್. ಈ ರುದ್ರಾಕ್ಷಿ ಶಿವನ ಕಣ್ಣೀರು ಎಂಬ ಪ್ರತೀತಿ ಇದೆ. ಅದಕ್ಕೆ ನಾನು ಇದನ್ನು ಹಾಕಿಕೊಳ್ಳುತ್ತೇನೆ’ ಎಂದಿದ್ದಾರೆ ಅವರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
