fbpx
ಸಮಾಚಾರ

ಪೊಲೀಸರು, ಮಾಧ್ಯಮದವರ ಮೇಲೆ ಪುತ್ರಿಯ ಗೂಂಡಾಗಿರಿ: ಮಗಳ ದುರ್ವತನೆಗೆ ಕ್ಷಮೆ ಕೇಳಿದ ಶಾಸಕ ಅರವಿಂದ್ ಲಿಂಬಾವಳಿ

ಕಾರು ತಡೆದ ಒಂದೇ ಒಂದು ಕಾರಣಕ್ಕೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ಪೊಲೀಸರೊಂದಿಗೆ ವಾಗ್ವಾದಕ್ಕಿಳದ ಘಟನೆ ನಡೆದಿದೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಶಾಸಕರ ಪುತ್ರಿ ಸೀಟ್ ಬೆಲ್ಟ್ ಹಾಕಿರಲಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ಸಿಗ್ನಲ್ ಜಂಪ್ ಮಾಡಿದ ಹಿನ್ನೆಲೆ ಟ್ರಾಫಿಕ್ ಪೊಲೀಸರು ಲಿಂಬಾವಳಿ ಪುತ್ರಿ ಕಾರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಕಿರಿಕ್ ಮಾಡಿದ್ದು, ಮಾಧ್ಯಮದವರ ಮೇಲೂ ಚೀರಾಡಿ ಗೂಂಡಾಗಿರಿ ನಡೆಸಿದ್ದಾಳೆ. ಈ ವಿಚಾರವಾಗಿ ಪ್ರತಿಕ್ರಿಯೆ ಮಾಡಿರುವ ಅರವಿಂದ ಲಿಂಬಾವಳಿ ಮಾಧ್ಯಮದವರ ಬಳಿ ಕ್ಷಮೆ ಕೇಳಿದ್ದಾರೆ..

ಕ್ಷಮೆ ಕೇಳಿದ ಲಿಂಬಾವಳಿ
ನನ್ನ ಮಗಳು ತನ್ನ ಸ್ನೇಹಿತನ ಜೊತೆ ಹೋಗ್ತಿದ್ದಾಗ ಕ್ಯಾಪಿಟಲ್ ಹೋಟೆಲ್ ಬಳಿ ಪೋಲಿಸರು ತಡೆದಿದ್ದಾರೆ. ಸಭೆ ವಿಚಾರ ಪೋಲಿಸರ ಬಂದೋಬಸ್ತ್ ಇತ್ತು. ಮಾಧ್ಯಮಗಳಿಗೆ ಅವಮಾನ ಮಾಡಿದ್ದಾರೆ ಅಂತ ಆರೋಪ ಮಾಡಿದ್ದಾರೆ. ನನ್ನ ಮಗಳು ಸರ್ ಸರ್ ಅಂತ ಮಾತನಾಡಿದ್ದಾರೆ. ಮಾಧ್ಯಮಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಮ್ಮ ಮನೆತನದ ಇತಿಹಾಸ ಹಾಗೇನು ಇಲ್ಲ ಎಂದಿದ್ದಾರೆ.

ನನ್ನ ಮಗಳ ವರ್ತನೆಯಿಂದ ಮಾಧ್ಯಮದ ಸ್ನೇಹಿತರಿಗೆ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ. ಮಗಳ ಫ್ರೆಂಡ್ ತರುಣ್ ಓವರ್ ಸ್ಪೀಡ್ ಬಂದ ಎಂದು ಈಗಾಗಲೇ ಫೈನ್ ಹಾಕಿದ್ದಾರೆ. ತಪ್ಪಾಗಿದ್ರೆ ಯಾರಿಗೆ ಆದ್ರೂ ಶಿಕ್ಷೆ ಆಗಬೇಕು ಎಂದಿದ್ದಾರೆ.

ಏನಿದು ವಿವಾದ:
ವೇಗವಾಗಿ ಬರುತಿದ್ದ ಬಿಎಂಡಬ್ಯ್ಲೂ ಕಾರನ್ನು ನೋಡಿದ ಕಬ್ಬನ್ ಪಾರ್ಕ್ ಎಸಿಪಿ ಕೈ ಅಡ್ಡಹಿಡಿದಿದ್ದಾರೆ. ಈ ವೇಳೆ ಕಾರ್ ನಿಲ್ಲಿಸದೇ ವೇಗವಾಗಿ ತೆರಳಿದ್ದು, ನಂತರ ಸಿಗ್ನಲ್ ಜಂಪ್ ಕೂಡ ಮಾಡಲಾಗಿದೆ. ಕೂಡಲೇ ಅತಿವೇಗವಾಗಿ ಬರುವ ಕಾರನ್ನು ನಿಲ್ಲಿಸುವಂತೆ ಎಸಿಪಿ ವಾಕಿಗೆ ಸಂದೇಶ ನೀಡಿದ್ದಾರೆ. ಅದರಂತೆ ಪೊಲೀಸರು ಕಾರನ್ನು ತಡೆದಿದ್ದಾರೆ.

ಈ ವೇಳೆ ಪೊಲೀಸರೊದಿಗೆ ಯುವತಿ “ನಾನು ಯಾರು ಗೊತ್ತಾ? ಶಾಸಕ ಅರವಿಂದ್ ಲಿಂಬಾವಳಿ ಗೊತ್ತಾ? ಅರವಿಂದ ಲಿಂಬಾವಳಿ ಮಗಳು ನಾನು” ಎಂದು ಅವಾಜ್ ಹಾಕಿದ್ದಾಳೆ.. ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ಯುವತಿ ನಿಂದಿಸಿದ್ದಾಳೆ. ಆಕೆಯ ರೌಡಿಸಂಗೆ ಬಗ್ಗದ ಪೊಲೀಸರು ರ‍್ಯಾಶ್ ಡ್ರೈವ್ ಫೈನ್ ಸೇರಿ ಹಳೆಯ ಕೇಸುಗಳ ಫೈನ್ ವಸೂಲಿ ಮಾಡಿದ್ದಾರೆ. ಪೊಲೀಸರು ಯುವತಿಯಿಂದ ಒಟ್ಟು 10 ಸಾವಿರ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top