ಭಾರತ ತಂಡದಲ್ಲಿ ಇತ್ತೀಚಿಗೆ ನಾಯಕರ ಬದಲಾವಣೆ ಹೆಚ್ಚಾಗಿ ಆಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಒಂದು ಕಡೆ ಕಳಪೆ ಪ್ರದರ್ಶನದಿಂದ ನಾಯಕರ ಬದಲಾವಣೆ ಆದರೆ ಇನ್ನೊಂದು ಕಡೆ ಗಾಯದ ಸಮಸ್ಯೆಯಿಂದ ನಾಯಕರ ಬದಲಾವಣೆ ಆಗುತ್ತಿದೆ. ಇಂತಹ ಸಂಧರ್ಭದಲ್ಲಿ ಭಾರತ ತಂಡದ ಮುಂದಿನ ನಾಯಕನಾಗುವ ಎಲ್ಲಾ ಅರ್ಹತೆ ಇರುವ ಆಟಗಾರನ ಹೆಸರನ್ನು ಹರ್ಭಜನ್ ಸಿಂಗ್ ತಿಳಿಸಿದ್ದಾರೆ.
ಇತ್ತೀಚಿಗೆ ಸುದ್ದಿ ಮಾಧ್ಯಮದ ಜೊತೆ ಮಾತನಾಡಿದ ಭಜ್ಜಿ ಭಾರತ ತಂಡದ ಮುಂದಿನ ನಾಯಕನಾಗುವ ಎಲ್ಲಾ ಅರ್ಹತೆ ಹಾರ್ದಿಕ್ ಪಾಂಡ್ಯ ಅವರಿಗೆ ಇದೆ ಎಂದು ಹೇಳಿದ್ದಾರೆ. ಇತ್ತೀಚಿಗೆ ಅವರು ಉತ್ತಮ ಫಾರ್ಮ್ ನಲ್ಲಿದ್ದು ಅದನ್ನು ಐಪಿಎಲ್ ಟೂರ್ನಿಯಲ್ಲೂ ಸಹ ಸಾಬೀತುಪಡಿಸಿದ್ದಾರೆ. ಹೀಗಾಗಿ ಭಾರತ ತಂಡದ ಮುಂದಿನ ನಾಯಕನಾಗುವ ಎಲ್ಲಾ ಅರ್ಹತೆ ಇವರಿಗೆ ಇದೆ ಎಂದು ಭಜ್ಜಿ ತಿಳಿಸಿದ್ದಾರೆ.
ಇತ್ತೀಚಿಗೆ ನಡೆದ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ತಂಡದ ನಾಯಕನಾಗಿ ತಂಡವನ್ನು ಮುನ್ನೆಡೆಸಿ ತಂಡವನ್ನು ಚೊಚ್ಚಲ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದಾರೆ. ಇದರ ಕುರಿತು ಟ್ವೀಟ್ ಮಾಡಿರುವ ಭಜ್ಜಿ “ಈ ವರ್ಷದ ಐಪಿಎಲ್ ನಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟನ್ಸ್ ನಾಯಕರಾಗಿ ಪ್ರಶಸ್ತಿ ಗೆದ್ದಿರೊ ರೀತಿ ಶ್ಲ್ಯಾಘನೀಯ. ಅವರ ಸ್ಪೂರ್ತಿ ಮತ್ತು ಸಕಾರಾತ್ಮಕ ನಾಯಕತ್ವದಿಂದ ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾ ವನ್ನು ಮುನ್ನಡೆಸಬಹುದು” ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
