ನಯನತಾರ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ವಿವಾಹ ಗುರುವಾರ ಅದ್ದೂರಿಯಾಗಿ ನಡೆಯಿತು. ಮದುವೆಯ ನಂತರ ಈ ಜೋಡಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹೋಗಿದ್ದಾರೆ. ಇದೆ ವೇಳೆ ನಯನತಾರ ಒಂದು ಎಡವಟ್ಟು ಮಾಡಿದ್ದೂ ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ನಾವು ಪ್ರತಿ ಬಾರಿ ದೇವಸ್ಥಾನವನ್ನು ಪ್ರವೇಶಿಸಬೇಕಾದರೆ ನಮ್ಮ ಚಪ್ಪಲಿಯನ್ನು ದೇವಸ್ಥಾನದ ಹೊರಗಡೆ ಬಿಟ್ಟು ಹೋಗುತ್ತೇವೆ. ಆದರೆ ನಯನತಾರ ಇದನ್ನು ಪಾಲಿಸದೆ ದೇವಸ್ಥಾನದ ಒಳಗೆ ತಮ್ಮ ಚಪ್ಪಲಿಯನ್ನು ಹಾಕಿಕೊಂಡು ಹೋಗಿದ್ದಾರೆ. ನಯನತಾರ ಅವರ ಈ ನಡೆತೆಗೆ ಇದೀಗ ವ್ಯಾಪಕ ಟೀಕೆ ಆಗುತ್ತಿದ್ದು ಜನರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ನಯನತಾರ ಅವರ ಪತಿ ಪಾದರಕ್ಷೆ ಇಲ್ಲದೆ ದೇವಸ್ಥಾನ ಪ್ರವೇಶಿಸಿದರು. ಆದರೆ ನಯನತಾರ ಅವರಿಗೆ ಮಾತ್ರ ಪಾದರಕ್ಷೆ ತೊಟ್ಟು ಒಳಗೆ ಪ್ರವೇಶಿಸಲು ಅನುಮತಿ ಹೇಗೆ ಸಿಕ್ಕಿತು. ಯಾವಾಗ ಈ ವಿಚಾರ ವಿಕೋಪಕ್ಕೆ ಏರಿತೋ ದೇವಸ್ಥಾನದ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿ ಸಮಜಾಯಿಸಿ ನೀಡಲು ಮುಂದಾದರು. ಆದರೆ ನಯನತಾರ ನಡೆದುಕೊಂಡ ರೀತಿ ಮಾತ್ರ ಒಂಚೂರು ಸರಿ ಇಲ್ಲ ಎಂದು ಜನರು ಇವರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
