fbpx
ಸಮಾಚಾರ

‘ಅಪ್ಪು’ ಇಲ್ಲದ ‘ದೊಡ್ಮನೆ’ ತೊರೆದು ಹೊರಬಂದ್ರು ಪುನೀತ್ ಬಾಡಿಗಾರ್ಡ್ ‘ಚಲಪತಿ’: ಕಾರಣ ಕೇಳಿದ್ರೆ ಕಣ್ಣಂಚಲ್ಲಿ ನೀರು ಬರುತ್ತೆ?

ಕರ್ನಾಟಕರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಸುಮಾರು ಆರೇಳು ತಿಂಗಳು ಕಳೆದಿವೆ. ಪುನೀತ್ ಅಗಲಿಕೆಯ ನೋವನ್ನು ಭರಿಸಲು ಕನ್ನಡಿಗರಿಗೆ ಈಗಲೂ ಸಾಧ್ಯವಾಗುತ್ತಿಲ್ಲ. ಅದೇಷ್ಟೋ ಹೃದಯಗಳು ಇಂದಿಗೂ ಮಿಡಿಯುತ್ತದೆ. ಅಂತ ಹೃದಯ ಗಳಲ್ಲಿ ಚಲಪತಿ ಕೂಡ ಒಬ್ರು‌. ಅಪ್ಪು ಅವರಿಗೆ ಬಾಡಿಗಾರ್ಡ್ ಆಗಿದ್ದ ಚಲಪತಿ ಸದ್ಯ ಪುನೀತ್ ಇಲ್ಲದ ಮನೆಯನ್ನು ತೊರೆದು ಹೊರಬಂದಿದ್ದಾರೆ.

ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಅವರಿಗೆ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ನೋವಿನಿಂದಲೇ ಊರು ಸೇರಿದ್ದಾರೆ. ಅವರ ನೆನಪಿನಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. ಚಲಪತಿ ಸದ್ಯ ಕೋಲಾರದ ಬಂಗಾರಪೇಟೆ ಸೇರಿದ್ದು ಊರಿನಲ್ಲಿ ಅಪ್ಪು ನೆನಪಿನಲ್ಲಿ ಕಾಲ ಕಳೆಯುತ್ತಿದ್ದಾರೆ‌.

ಅಪ್ಪು ನಿಧನದ ನಂತ್ರ ಅಲ್ಲಿ ಚಲಪತಿ ಅವರಿಗೆ ಕೆಲಸ ಇರಲಿಲ್ಲ , ಪ್ರತಿ ದಿನ ಕೂತು ಎದ್ದು ಬರಬೇಕಿತ್ತು, ಹೀಗಾಗಿ ಚಲಪತಿ ಅವರು ಕೆಲಸ ಬಿಟ್ಟಿದ್ದಾರಂತೆ. ” ಇನ್ಮೇಲೆ ಯಾವುದೇ ಹೀರೋಗಳ ಜೊತೆಯಾಗಲ್ಲಿ ಚಿತ್ರರಂಗದವರ ಕೆಲಸ ಮಾಡುವುದಿಲ್ಲ. ಬೇರೆ ಸ್ಟಾರ್ಸ್ ಜೊತೆ ಮಾಡಿದ್ರೆ ಅಪ್ಪು ಅವರ ನೆನಪು ಮರೆತು ಹೋಗುವ ಅಥವಾ ಬೇರೆ ಏನಾದ್ರೂ ಸನ್ನಿವೇಶ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಯಾರ ಜೊತೆಯಲ್ಲೂ ಕೆಲಸ ಮಾಡಲ್ಲ,” ಎಂದೂ ಮಾಹಿತಿ ನೀಡಿದ್ದಾರೆ.

ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದೇನೆ‌‌‌‌. ಯಾರಾದ್ರು ಬ್ಯುಸಿನೆಸ್ ಮ್ಯಾನ್ ಗಳ ಬಳಿ ಕೆಲಸ ಮಾಡೋಣ ಅಂದಕೊಂಡಿದ್ದೇನೆ. ಕೆಲಸ ಸಿಗದಿದ್ದರೂ ಕೂಡ ಅಪ್ಪು ಸರ್ ಆಶೀರ್ವಾದ ನನ್ನ ಮೇಲೆ ಇದ್ರೆ ನಾನೆ ಯಾವ್ದಾದ್ರು ಬ್ಯುಸಿನೆಸ್ ಮಾಡ್ತಿನಿ…ಸದ್ಯ ಒಂದು ತಿಂಗಳಿನಿಂದ ನಾನು ಎಲ್ಲೂ ಕೆಲಸ ಮಾಡ್ತಿಲ್ಲ ಊರಿನಲ್ಲಿ ಇದ್ದೀನಿ‌‌.ಮುಂದಿನ ತಿಂಗಳು ಕೆಲಸದ ಬಗ್ಗೆ ಡಿಸೈಡ್ ಮಾಡ್ತಿನಿ ಅಂತ ಚಲಪತಿ ನೋವಿನಿಂದಲೇ ಹೇಳಿದ್ದಾರೆ‌.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top