ನಟ ಧನುಷ್ ಅವರಿಗೆ ಸಂಕಷ್ಟಗಳು ಒಂದರಮೇಲೊಂದು ಒಂದರಂತೆ ಬರುತ್ತಿದೆ. ಇದೀಗ ಸ್ವತಃ ಇವರ ಅಭಿಮಾನಿಗಳೇ ಇವರ ಮೇಲೆ ಕೋಪ ಮಾಡಿಕೊಂಡಿದ್ದು, ಇವರ ವಿರುದ್ಧ ಸಾಮಾಜಿಕ ಕಾರ್ಯಕರ್ತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ನಟ ಧನುಷ್ ಅವರ ಮುಂದಿನ ಸಿನಿಮಾ `ತಿರುಚಿತ್ರಂಬಲಂ’. ಈ ಸಿನಿಮಾದ `ಥಾಯ್ ಕೆಲ್ವೈ’ ಸಾಂಗ್ ಬಿಡುಗಡೆಯಾಗಿದ್ದು, ಇದಕ್ಕೆ ಸ್ವತಃ ಧನುಷ್ ಅವರೇ ಸಾಹಿತ್ಯ ಬರೆದು ಹಾಡಿದ್ದಾರೆ. ಇದೀಗ ಇವರು ಬರೆದ ಸಾಹಿತ್ಯ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಗರಂ ಆಗಿದ್ದು ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
ತಿರುಚಿತ್ರಂಬಲಂ ಸಿನಿಮಾದ ಥಾಯ್ ಕೆಲ್ವೈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಹಾಡಿನ ಸಾಹಿತ್ಯವನ್ನು ಬದಲಿಸಿ ಎಂದು ಚಿತ್ರತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಾಡಿನ ಸಾಹಿತ್ಯದಲ್ಲಿ ಹಿರಿಯರಿಗೆ ಅಗೌರವ ತರುವಂತಹ ಪದಗಳನ್ನು ಬಳಿಸಲಾಗಿದ್ದು, ಹೀಗಾಗಿ ಈ ಹಾಡಿನ ಸಾಹಿತ್ಯವನ್ನು ಬದಲಿಸಬೇಕೆಂದು ಚಿತ್ರತಂಡದ ವಿರುದ್ಧ ದೂರನ್ನು ಧಾಖಲಿಸಿದ್ದಾರೆ.
ಈ ಚಿತ್ರದಲ್ಲಿ ನಿತ್ಯ ಮೆನನ್ ನಾಯಕಿಯಾಗಿ ನಟಿಸಿದ್ದು, ಅನಿರುದ್ಧ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಆಗಸ್ಟ್ 18 ರಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಅಷ್ಟರೊಳಗೆ ಈ ವಿವಾದವನ್ನು ಬಗೆಹರಿಸ್ಕೊಳ್ಳುತ್ತಾ ಎಂದು ಕಾದು ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
