fbpx
ಸಮಾಚಾರ

‘ನಿಮಗೊಂದು ಸಲಹೆ ಕೊಡ್ತೀನಿ….’ ಎಂದಿದ್ದ ‘ಕೆಜಿಎಫ್’ ತಾತ ಈಗ ಹೀರೋ! ಹೀರೋ ಆಗಿ ಮಿಂಚಲು ರೆಡಿಯಾದ ‘ಕೆಜಿಎಫ್’ ತಾತ..!

ಕೆ.ಜಿ.ಎಫ್ ಸರಣಿ ಸಿನಿಮಾದಲ್ಲಿ ದೃಷ್ಟಿಹೀನಾ ಮುದುಕನ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್ ಆಗಿದ್ದ ಹಿರಿಯ ನಟ ಕೃಷ್ಣ ಜಿ ರಾವ್ ಈಗ ಸಿನಿಮಾ ಬಂದಮೇಲೆ ಇವರು ‘ಕೆಜಿಎಫ್’ ತಾತ ಅಂತಲೇ ಫೇಮಸ್. ಸದ್ಯದ ಬ್ರೇಕಿಂಗ್ ನ್ಯೂಸ್ ಏನಪ್ಪ ಅಂದ್ರೆ, ಕೃಷ್ಣ ಜಿ. ರಾವ್ ಈಗ ಹೀರೋ ಆಗಿದ್ದಾರೆ. ಅವರು ಹೀರೋ ಆಗಿರುವ ಸಿನಿಮಾಕ್ಕೆ ‘ನ್ಯಾನೋ ನಾರಾಯಣಪ್ಪ’ ಎಂದು ಟೈಟಲ್ ಇಡಲಾಗಿದೆ.

ಹತ್ತು ತಲೆಯ ರಾವಣನ ರೀತಿಯಲ್ಲಿ ಈ ಸಿನಿಮಾದ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ನ್ಯಾನೋ ಕಾರು ಕೂಡ ಗಮನ ಸೆಳೆಯುತ್ತಿದೆ. ಆ ಮೂಲಕ ‘ನ್ಯಾನೋ ನಾರಾಯಣಪ್ಪ’ ಚಿತ್ರದ ಕಥೆ ಏನು ಎಂಬ ಕೌತುಕ ಮೂಡಿದೆ. ‘ಕೆಮಿಸ್ಟ್ರೀ ಆಫ್​ ಕರಿಯಪ್ಪ’, ‘ಕ್ರಿಟಿಕಲ್​ ಕೀರ್ತನೆಗಳು’ ಸಿನಿಮಾ ಮಾಡಿ ಸೈ ಎನಿಸಿಕೊಂಡ ನಿರ್ದೇಶಕ ಕುಮಾರ್​ ಅವರು ‘ನ್ಯಾನೋ ನಾರಾಯಣಪ್ಪ’ ಚಿತ್ರಕ್ಕೆ ಆಕ್ಷನ್​-ಕಟ್​ ಹೇಳಿದ್ದಾರೆ.

ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಆಗಸ್ಟ್ ನಲ್ಲಿ ಸಿನಿಮಾವನ್ನು ತೆರೆಗೆ ಯೋಜನೆ ಹಾಕಿಕೊಂಡಿದೆ. ಕುಮಾರ್ ನಿರ್ಮಾಣದ ನ್ಯಾನೋ‌ ನಾರಾಯಣಪ್ಪ ಸಿನಿಮಾಗೆ ರಾಜಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ಸಿದ್ದು ಸಂಕಲನವಿದೆ. ಸದ್ಯ ಫಸ್ಟ್ ಲುಕ್ ರಿವೀಲ್ ಮಾಡಿರುವ ಚಿತ್ರತಂಡ ಶೀರ್ಘದಲ್ಲಿ ಟೀಸರ್ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top