ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲೂ IT BT ಕಂಪನಿಗಳು ಹೆಚ್ಚಾಗಿರುವ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಮಾತುಗಳೇ ಇಲ್ಲ. ಜನರು ದಿನದ ಅರ್ಧಭಾಗದಷ್ಟು ಸಮಯ ಬೆಂಗಳೂರಿನ ಟ್ರಾಫಿಕ್ ಗಳಲ್ಲಿಯೇ ಕಳೆಯುತ್ತಾರೆ. ಇಂತಹ ಸಂದರ್ಭದಲ್ಲಿ ಜನರನ್ನು ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಗೊಳಿಸಬೇಕೆಂದು ತೀರ್ಮಾನಿಸಿ ಹೈದರಾಬಾದ್ ಮಾದರಿಯ ಹೈಟೆಕ್ ಟೆಕ್ನಾಲಾಜಿಯನ್ನು ಅಳವಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಮಸ್ಯೆಯನ್ನು ಮುಕ್ತಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪೊಲೀಸ್ ಇಲಾಖೆಗೆ ಡೆಡ್ ಲೈನ್ ನೀಡಿದ್ದರು. ಹೀಗಾಗಿ ನಗರ ಪೊಲೀಸರು ಸಿಟಿ ಟ್ರಾಫಿಕ್ ಕಂಟ್ರೋಲ್ಗೆ ಅತ್ಯಾಧುನಿಕ ಟೆಕ್ನಾಲಜಿಯನ್ನು ಅಳವಡಿಸುತ್ತಿದ್ದಾರೆ. ಹೈದರಾಬಾದ್ನಲ್ಲಿ ಅಳವಡಿಸಿರುವ ಅಡಪ್ಟೀವ್ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಮಾದರಿಯಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಪೊಲೀಸರು ಚಿಂತನೆ ಮಾಡುತ್ತಿದ್ದಾರೆ. ಕೇವಲ 6 ತಿಂಗಳುಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮೋದಿ ಪೊಲೀಸರಿಗೆ ಸೂಚಿಸಿರುವ ಕಾರಣ ನಗರ ಪೊಲೀಸರು ಇದೀಗ ಈ ವಿಶೇಷ ತಂತ್ರಜ್ಞಾನವನ್ನು ಬಳಸಲು ತೀರ್ಮಾನಿಸಿದ್ದಾರೆ.
ಅಡಪ್ಟೀವ್ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಎಂದರೇನು ಮತ್ತು ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ?
ಇದು ರಸ್ತೆಯ ಮೇಲೆ ನಿಂತಿರುವ ವಾಹನದ ಪ್ರಮಾಣದ ಮೇಲೆ ಟ್ರಾಫಿಕ್ ನಿಯಂತ್ರಣ ಮಾಡುತ್ತದೆ. ಟ್ರಾಫಿಕ್ ಸಿಗ್ನಲ್ಗಳಲ್ಲಿ ಮ್ಯಾಗ್ನೆಟಿಕ್ ಸೆನ್ಸಾರ್ಗಳನ್ನು ಅಳವಡಿಸಿ ವಾಹನ ದಟ್ಟಣೆ ಅನುಗುಣವಾಗಿ ಸಿಗ್ನಲ್ ನಿರ್ವಹಣೆ ಮಾಡಲಾಗುತ್ತದೆ. ನಗರದಲ್ಲಿರುವ 214 ಸಿಗ್ನಲ್ ಗಳಲ್ಲಿಯೂ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ. ಈಗಾಗಲೇ ಕೆಲವು ಸಿಗ್ನಲ್ ಗಳಲ್ಲಿ ಇದನ್ನು ಅಳವಡಿಸುವ ಕಾರ್ಯ ಶುರುವಾಗಿದೆ.
ಇದು ಹೇಗೆ ಕೆಲಸ ಮಾಡುತ್ತದೆ ಎಂದರೆ ಒಂದು ಬದಿಯಲ್ಲಿ ವಾಹನದ ಸಂಖ್ಯೆ ಹೆಚ್ಚಿದ್ದರೆ ತನ್ನಷ್ಟಕ್ಕೆ ತಾನೇ ತನ್ನ ಸಮಯವನ್ನು ಹೆಚ್ಚಿಸಿಕೊಳ್ಳುತ್ತದೆ, ಹಾಗೆ ಇನ್ನೊಂದು ಬದಿಯಲ್ಲಿ ವಾಹನದ ಸಂಖ್ಯೆ ಕಡಿಮೆ ಇದ್ದರೆ ತನ್ನಷ್ಟಕ್ಕೆ ತಾನೇ ಇದರ ಸಮಯವನ್ನು ಕಡಿಮೆಗೊಳಿಸುತ್ತದೆ. ಹೀಗಾಗಿ ಈ ವಿಶೇಷ ತಂತ್ರಜ್ಞಾನದ ಸಹಾಯದಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆಗೊಳಿಸಲು ಸಾದ್ಯವಾಗುತ್ತಾ ಎಂದು ಕಾದು ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
