ಮೈಸೂರಿನ ಪ್ರಸಿದ್ಧ ಸ್ಥಳ ಎಂದರೆ ಅದು ಚಾಮುಂಡಿ ಬೆಟ್ಟ. ಇಲ್ಲಿಗೆ ಪ್ರತಿದಿನ ತುಂಬಾ ದೂರದ ಊರುಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ದೇವರ ದರ್ಶನ ಪಡೆಯಲು ಬರುತ್ತಾರೆ. ಆದರೆ ಕೆಲವು ತಿಂಗಳ ಹಿಂದೆ ಚಾಮುಂಡಿ ಬೆಟ್ಟಕ್ಕೆ ಹೋಗುವ ನಂದಿ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿತ್ತು. ಆದರೆ ಇಲ್ಲಿಯವರೆಗೂ ಇದರ ದುರಸ್ತಿ ಕಾಮಗಾರಿ ಶುರುವಾಗಿಲ್ಲಾ. ಸರ್ಕಾರದ ನಿರ್ಲಕ್ಷೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ನಾವು ಇಲ್ಲಿ ಕಾಣಬಹುದು.
ಕಳೆದ ಕೆಲವು ತಿಂಗಳುಗಳ ಹಿಂದೆ ಸುರಿತ ಮಳೆಯಿಂದಾಗಿ ನಂದಿ ಬೆಟ್ಟದ ನಂದಿ ಮಾರ್ಗದಲ್ಲಿ ಭೂಕುಸಿತ ಉಂಟಾಗಿತ್ತು. ಈಗಾಗಿ ಈ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಇದರ ದುರಸ್ತಿ ಕಾರ್ಯವನ್ನು ಸರ್ಕಾರ ಕೈಗೊಳ್ಳಬೇಕಾಗಿತ್ತು. ಆದರೆ ಈ ಘಟನೆ ನಡೆದು ಹಲವಾರು ತಿಂಗಳುಗಳು ಕಳೆದರು ಸಹ ಸರ್ಕಾರ ಮಾತ್ರ ಇದರ ಬಗ್ಗೆ ತಲೆಕೆಡಿಸ್ಕೊಂಡಿಲ್ಲ ಎಂದು ಅನಿಸುತ್ತದೆ. ಹೀಗಾಗಿ ಈ ಭಾಗದಲ್ಲಿ ರಸ್ತೆಗಳು ಮತ್ತಷ್ಟು ಬಿರುಕು ಬಿಟ್ಟಿದ್ದು, ಮುಂಗಾರಿನ ಎಫೆಕ್ಟ್ ನಿಂದ ಮತ್ತಷ್ಟು ಬಿರುಕು ಬೀಳುವ ಸಾಧ್ಯತೆಗಳು ಹೆಚ್ಚಿದೆ.
ಮೂರೂ ವರ್ಷಗಳಿಂದ ಇದು ಎರಡನೆಯ ಬಾರಿಗೆ ಈ ರೀತಿಯಾಗಿ ಬೆಟ್ಟ ಕುಸಿತ ಕಂಡಿರೋದು. ಹೀಗಾಗಿ ನಂದಿ ದರ್ಶನಕ್ಕೆ ಪ್ರವಾಸಿಗರು ಹೋಗಲು ಸಾಧ್ಯವಾಗುತ್ತಿಲ್ಲಾ. ಇದರ ದುರಸ್ತಿ ಕೆಲಸವನ್ನು ಮಳೆಗಾಲ ನಿಂತ ಮೇಲೆ ಮಾಡುತ್ತೇನೆ ಎಂದು ಹೇಳಿದ ಸರ್ಕಾರ ಮಳೆ ಗಾಲ ನಿಂತು ಬಿಸಿಲು ಗಾಲ ಬಂದು ಮತ್ತೆ ಮಳೆ ಗಾಲ ಶುರುವಾದರೂ ಸಹ ಇನ್ನು ಇದರ ದುರಸ್ತಿ ಕಾರ್ಯ ಮಾತ್ರ ಶುರುಮಾಡಿಲ್ಲ.
ಇನ್ನು ಭೂ ಕುಸಿತ ಜಗದಲ್ಲಿ ಹೆಚ್ಚು ಮಳೆಯಾದರೆ ಭೂಮಿಯ ತೇವಾಂಶ ಮತ್ತೆ ಹೆಚ್ಚಾಗುತ್ತದೆ. ಅವಾಗ ಜೆಸಿಬಿ ಅಥವಾ ಯಾವುದೇ ಉಪಕರಣಗಳಿಂದ ಕಾರ್ಯ ಆರಂಭಿಸಲು ಸಾಧ್ಯವಾಗುವುದಿಲ್ಲ. ತೇವಾಂಶ ಓದಾ ನಂತರವೇ ಇದನ್ನು ಮತ್ತೆ ಪ್ರಾರಂಭಿಸಬೇಕು. ಅಂದರೆ ಬೇಸಿಗೆ ಗಾಲದಲ್ಲಿ ಮಾತ್ರ ಇದನ್ನು ಮಾಡಲು ಸಾಧ್ಯ. ಆದರೆ ಇದೀಗ ಬೇಸಿಗೆ ಗಾಲ ಮುಗಿದು ಮಳೆ ಗಾಲ ಆರಂಭವಾಗುವ ಮುನ್ಸೂಚನೆ ಸಿಕ್ಕಿದ್ದು, ಈ ಬಾರಿಯೂ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಯಾವುದೇ ನಂಬಿಕೆ ಇಲ್ಲಾ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
