fbpx
ಸಮಾಚಾರ

ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ನಡುವೆಯೇ ಬಡ ಮಕ್ಕಳ ನೆರವಿಗೆ ಧಾವಿಸಿದ ಕಿಚ್ಚ!

ನಟ ಕಿಚ್ಚ ಸುದೀಪ್ ಅವರು ಸದ್ಯ ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಯಾಗಿದ್ದಾರೆ. ಇಷ್ಟು ಬ್ಯುಸಿ ಇದ್ದರು ಕೂಡ ತಮ್ಮ ಸಾಮಾಜಿಕ ಕೆಲಸವನ್ನು ಮಾಡುವುದನ್ನು ಮಾತ್ರ ಕಿಚ್ಚ ಮರ್ತಿಲ್ಲ. ಹಲವಾರು ಸಾಮಾಜಿಕ ಕೆಲಸವನ್ನು ಮಾಡುತ್ತಿರುವ ಕಿಚ್ಚ ಇದೀಗ ಕಟ್ಟಲು ಕಷ್ಟ ಪಡುತ್ತಿದ್ದ ಮಕ್ಕಳ ನೆರವಿಗೆ ಧಾವಿಸಿ ಮತ್ತೆ ಅವರು ಶಾಲೆಗೆ ಸೇರಲು ಅನುಕೂಲಮಾಡಿಕೊಟ್ಟಿದ್ದಾರೆ.

ಕಿಚ್ಚ ಇದೀಗ ಬೆಂಗಳೂರಿನ ಚಾಮರಾಜಪೇಟೆ ರಾಮಮಂದಿರ ಶಾಲೆಯ ವಿದ್ಯಾರ್ಥಿಗಳಾದ ತರುಣ್ ಮತ್ತು ಸುದೀಪ್ ಇನ್ನು ಇಬ್ಬರು ಮಕ್ಕಳಿಗೆ ಸಹಾಯ ಹಸ್ತವನ್ನು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಇಬ್ಬರು ಮಕ್ಕಳು ಫೀಸ್ ಕಟ್ಟಲಾಗದೆ ಬಹಳಷ್ಟು ಕಷ್ಟ ಪಡುತ್ತಿದ್ದರು. ಇದನ್ನು ಅರಿತ ಕಿಚ್ಚನ ಟೀಮ್ ಫೀಸ್ ಕಟ್ಟಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಈ ಇಬ್ಬರು ಮಕ್ಕಳು ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕಾಗಿ ಶಾಲೆಗೆ ಹೋಗಿರಲಿಲ್ಲ. ಇದೇ ಕಾರಣಕ್ಕಾಗಿ ಈ ಮಕ್ಕಳಿಗೆ ಶಾಲೆಯಲ್ಲಿ ಅಡ್ಮಿಶನ್ ಕೂಡ ಮಾಡಿಸಿಕೊಂಡಿರಲಿಲ್ಲ. ಈ ವಿಷಯ ಸುದೀಪ್ ಚಾರಿಟೇಬಲ್ ಸೊಸೈಟಿ ಗಮನಕ್ಕೆ, ತಕ್ಷಣ ಸಹಾಯಕ್ಕೆ ಧಾವಿಸಿ ಇಬ್ಬರು ಮಕ್ಕಳ ಫೀಸ್ ಅನ್ನು ಕಟ್ಟಿಸಿ ಮತ್ತೆ ಅವರು ಶಾಲೆಯ ಕಡೆ ಮುಖ ಮಾಡುವಂತೆ ಮಾಡಿದ್ದಾರೆ.

ಇದೀಗ ಕಿಚ್ಚನ ಈ ಮಾನವೀಯತೆಯ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕಿಚ್ಚನ ಟ್ರಸ್ಟ್ ನಿಂದ ಈ ಹಿಂದ ಹತ್ತು ಹಲವಾರು ಸಮಾಜಮುಖಿ ಕೆಲಸಗಳು ನಡೆಯುತ್ತಾ ಬಂದಿದೆ. ಹಲವಾರು ವಿದ್ಯಾರ್ಥಿಗಳಿಗೂ ಕೂಡ ಈ ಟ್ರಸ್ಟ್ ನಿಂದ ಬಹಳಷ್ಟು ಉಪಯೋಗವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top