fbpx
ಸಮಾಚಾರ

ಕಾಫೀ ವಿತ್ ಕರಣ್ ಕಾರ್ಯಕ್ರಮದಲ್ಲಿ ನಾಗಚೈತನ್ಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸಮಂತಾ! ಏನದು ಗೊತ್ತಾ?

ಬಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರಾದ ಕರಣ್ ಜೋಹರ್ ನಡೆಸಿಕೊಡುತ್ತಿರುವ ಕಾಫೀ ವಿತ್ ಕರಣ್ ಕಾರ್ಯಕ್ರಮದಲ್ಲಿ ನಟಿ ಸಮಂತಾ ಮತ್ತು ನಟ ಅಕ್ಷಯ್ ಕುಮಾರ್ ಭಾಗವಹಿಸಿದರು. ಇಂತಹ ಸಂಧರ್ಭದಲ್ಲಿ ಕರಣ್ ಜೋಹರ್ ಸಮಂತಾ ಅವರಿಗೆ ತಮ್ಮ ವಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಕೇಳಿದಾಗ ಸಮಂತಾ ಮುಕ್ತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಸಮಂತಾ ಅವರ ಪತಿ ನಾಗಚೈತನ್ಯ ಬಗ್ಗೆ ಪ್ರಶ್ನೆ ಕೇಳಿದರು. ಈ ಕೂಡಲೇ ಸಮಂತಾ ಮಾಜಿ ಪತಿ ಎಂದು ಹೇಳಲು ಹೇಳಿದರು. ನಂತರ ಪ್ರಶ್ನೆಯನ್ನು ಮುಂದುವರಿಸಿದ ಕರಣ್ ಜೋಹರ್ ನೀವು ಮತ್ತು ನಾಗಚೈತನ್ಯ ಸೌಹಾರ್ಧಯುತವಾಗಿದ್ದೀರಾ ಎಂದು ಪ್ರಶ್ನಿಸಿದರು? ಇದಕ್ಕೆ ಉತ್ತರಿಸಿದ ಸಮಂತಾ ನೀವು ನಮ್ಮಿಬ್ಬರನ್ನು ಒಂದು ಕೋಣೆಯಲ್ಲಿ ಇರಿಸಿದರೆ, ಚೂಪಾದ ವಸ್ತುವನ್ನು ಮರೆಮಾಡಬೇಕು ಎಂಬುದು ನಿಮ್ಮ ಮಾತಿನ ಅರ್ಥವೇ? ಸದ್ಯದ ಪರಿಸ್ಥಿಯಲ್ಲಿ ಇದು ಹೌದು. ಆದರೆ ಭವಿಷ್ಯದಲ್ಲಿ ಇರಬಹುದು ಎಂದರು.

ಇನ್ನು ಇವರ ಡೈವೋರ್ಸ್ ವಿಚಾರವಾಗಿ ಪ್ರಶ್ನಿಸಿದ ಕರಣ್ ಜೋಹರ್ ಸಾಮಾಜಿಕ ಜಾಲತಾಣದಲ್ಲಿ ನಡೆಯುತಿದ್ದ ಟ್ರೊಲ್ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಮಂತಾ ಇದರ ಬಗ್ಗೆ ದೂರು ನೀಡಲು ನನಗೆ ಇಷ್ಟವಿಲ್ಲ. ನಾನು ಪಾರದರ್ಶಕವಾಗಿರಲು ಬಯಸುತ್ತೇನೆ. ಡೈವೋರ್ಸ್ ಆದಾಗ ನಾನು ಟ್ರೊಲ್ ಬಗ್ಗೆ ಹೆಚ್ಚು ಬೇಸರ ಮಾಡಿಕೊಂಡಿರಲಿಲ್ಲ ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top