ಮಲ್ಯಾಳಮ್ ಸಿನಿಮಾ ತಂಡಕ್ಕೆ ಸಾವಿನ ಸುದ್ದಿ ಒಂದಾದ ಮೇಲೊಂದರಂತೆ ಅಪ್ಪಳಿಸುತ್ತಿದೆ. ಇತ್ತೀಚಿಗೆ ಮಲ್ಯಾಳಮ್ ಸಿನಿಮಾ ರಂಗದ ಒಬ್ಬರು ವಿಲನ್ ಆತ್ಮಹತ್ಯೆಮಾಡಿಕೊಂಡಿದ್ದರು. ಇದೀಗ ಮಲ್ಯಾಳಮ್ ಸಿನಿಮಾ ರಂಗದ ಯುವ ನಟ ಸಾವನ್ನಪ್ಪಿದ್ದು, ಇದೀಗ ಇವರ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದೆ.
ಮಲ್ಯಾಳಮ್ ಸಿನಿಮಾ ರಂಗದ ಯುವ ನಟ ಶರತ್ ಚಂದ್ರನ್ (37) ಸವಾಗಿ ಪತ್ತೆಯಾಗಿದ್ದರು. ಇವರ ಸಾವಿನ ಸುತ್ತ ಹಲವಾರು ಅನುಮಾನಗಳು ಸೃಷ್ಟಿಯಾದವು.
ಶರತ್ ಚಂದ್ರನ್ ಮೂಲತಃ ಕೊಚ್ಚಿ ಯವರು. ಸಿನಿಮಾ ರಂಗಕ್ಕೆ ಬರುವ ಮೊದಲು ಇವರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ನಂತರ ನಟನೆ ಬಗ್ಗೆ ಆಸಕ್ತಿ ಇದ್ದ ಕಾರಣ ಸಿನಿಮಾ ರಂಗಕ್ಕೆ ಪ್ರವೇಶ ಪಡೆದರು. 2017ರಲ್ಲಿ ರಿಲೀಸ್ ಆಗಿದ್ದ ಕ್ರೈಮ್ ಥ್ರಿಲ್ಲರ್ ‘ಅಂಗಮಾಲಿ ಡೈರೀಸ್’ ಸಿನಿಮಾದಲ್ಲಿ ಶರತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ 2017 ರಲ್ಲಿ ‘ಮೆಕ್ಸಿಕನ್ ಅಪರಾತ’ ‘ಸಿಐಎ: ಕಾಮ್ರೇಡ್ ಇನ್ ಅಮೆರಿಕ’ 2018 ರಲ್ಲಿ ‘ಕೂಡೆ’ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಸಾಯಿ ಎಂದೆನಿಸಿಕೊಂಡಿದ್ದರು.
ಇವರ ಸಾವಿನ ವಿಚಾರವನ್ನು ನಟ ಆ್ಯಂಟನಿ ಅವರು ಅಧಿಕೃತ ತಿಳಿಸಿದರು. ಶರತ್ ಫೋಟೋ ಪೋಸ್ಟ್ ಮಾಡಿ ‘ರಿಪ್ ಬ್ರದರ್’ ಎಂದು ಅವರು ಬರೆದುಕೊಂಡಿದ್ದಾರೆ. ಇವರ ಸಾವಿಗೆ ಅನೇಕ ಅಭಿಮಾನಿಗಳು, ಆಪ್ತರು ಮತ್ತು ಸಿನಿಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
