“ಬಿಗ್ ಬಾಸ್”, “ಲಕ್ಷ್ಮಿ ಬಾರಮ್ಮ” ಖ್ಯಾತಿಯ ಚಂದನ್ ಅವರ ಮೇಲೆ ತೆಲುಗು ಧಾರಾವಾಹಿ ತಂಡದಿಂದ ಹಲ್ಲೆ ನಡೆದಿದೆ. ತೆಲುಗು ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿ ನಡೆದ ಗಲಾಟೆಯ ವಿಡಿಯೋ ಇದೀಗ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.
ಕನ್ನಡ ಕಿರುತರೆ ದಾರಾವಾಹಿಗಳಲ್ಲದೆ, ಇತರೆ ಭಾಷೆಯ ಧಾರಾವಾಹಿಗಳಲ್ಲಿ ಚಂದನ್ ನಟಿಸಿದ್ದಾರೆ. ಇತ್ತೀಚಿಗೆ ಅವರು ತೆಲುಗಿನ ‘ಸಾವಿತ್ರಮ್ಮ ಗಾರಿ ಅಬ್ಬಾಯಿ’ ಧಾರಾವಾಹಿಯಲ್ಲಿ ಭಾಗಿಯಾಗಿದ್ದರು. ಈ ಧಾರಾವಾಹಿಯ ಶೂಟಿಂಗ್ ನಡೆಯ್ತುತ್ತಿರುವ ವೇಳೆ ಚಂದನ್ ಸೀರಿಯಲ್ ತಂತ್ರಜ್ಞರ ಜೊತೆ ಕಿರಿಕ್ ಮಾಡಿಕೊಂಡಿದ್ದ ಕಾರಣ ಅವರ ಮೇಲೆ ಶೂಟಿಂಗ್ ತಂಡದಿಂದ ಹಲ್ಲೆ ನಡೆದಿದೆ.
ಹಲ್ಲೆ ನಡೆದ ಬಳಿಕ ಮೊದಲ ಬಾರಿಗೆ ಮಾಧ್ಯಮದ ಜೊತೆ ಮಾತನಾಡಿದ ಚಂದನ್ ” ಗಲಾಟೆ ಆಗಿರುವುದು ನಿಜ ಎಂದು ಒಪ್ಪಿಕೊಳ್ಳುವೆ, ಆದರೆ ಅಲ್ಲಿ ಹೊಡೆದಾಟ ನಡೆದಿಲ್ಲ. ಯಾರು ಯಾರ ಮೇಲು ಹಲ್ಲೆ ಮಾಡಿಲ್ಲ. ಈ ಘಟನೆ ನಡೆದ ಸಂಧರ್ಭದಲ್ಲಿ ನನ್ನ ತಾಯಿ ಅನಾರೋಗ್ಯದಲ್ಲಿದ್ದರು. ನಾನು ಟೆನ್ಷನ್ ನಲ್ಲಿದ್ದೆ. ಈ ಸಮಯದಲ್ಲಿ ಕ್ಯಾಮೆರಾಮ್ಯಾನ್ ಸಹಾಯಕ ನನ್ನ ಸಹಾಯಕನಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದ. ನಾನು ಆ ಹುಡುಗನಿಗೆ ಹಾಗೆ ಮಾತನಾಡುವುದು ತಪ್ಪು ಎಂದು ತಳ್ಳಿದ್ದೆ. ಇದರ ಹೊರತಾಗಿ ಅಲ್ಲಿ ಏನೂ ನಡೆದಿಲ್ಲ” ಎಂದು ಹೇಳಿದರು.
ಇವೆಲ್ಲ ವಿವಾದಗಳ ನಡುವೆ ಚಂದನ್ ಮಾಡಿರುವ ಪೋಸ್ಟ್ ಇದೀಗ ಸಕತ್ ವೈರಲ್ ಆಗುತ್ತಿದೆ. ತಮ್ಮ ತಾಯಿ ಆಸ್ಪತ್ರೆಯ ಅಸಿಗೆಯ ಮೇಲೆ ಮಲಗಿದ್ದು, “ಬೇಗ ಚೇತರಿಸಿಕೊಳ್ಳಿ ಅಮ್ಮ, ನಿಮ್ಮನ್ನು ನೋಡಿಕೊಳ್ಳಲು ನಾನು ಅಲ್ಲಿ ಇರಬೇಕಿತ್ತು, ನಿಮ್ಮನ್ನು ನೋಡಲು ನಾನು ಈಗ ಬರುತ್ತಿದ್ದೇನೆ, ಲವ್ ಯು ಅಮ್ಮಾ” ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
