fbpx
ಸಮಾಚಾರ

“ತಂದೆನೇ ನನ್ನ ಬೆಡ್‌ರೂಮ್‌ ವಿಡಿಯೋ ಲೀಕ್‌ ಮಾಡಿದ್ರು” ಮಲತಂದೆ ಮಾಡಿದ ಕೀಳು ಕೆಲಸದ ಬಗ್ಗೆ ಕಣ್ಣೀರು ಹಾಕುತ್ತಾ ಬಾಯ್ಬಿಟ್ಟ ಸಾನ್ಯ ಅಯ್ಯರ್

ಬಿಗ್ ಬಾಸ್ OTT ಶುರುವಾಗಿದೆ. ಸೆಲೆಬ್ರಿಟಿಗಳು ಮನೆ ಒಳಗೆ ಪ್ರವೇಶಿಸಿದ್ದಾರೆ. ಅಭಿಮಾನಿಗಳಲ್ಲಿ ಕುತೂಹಲ ಕೂಡ ಹೆಚ್ಚಾಗಿದೆ. ಈ ಬಾರಿ ಬಿಗ್ ಬಾಸ್ ಯಾವೆಲ್ಲ ರೀತಿ ನಡೆಯುತ್ತಿದೆ ಎಂದು. ಇವೆಲ್ಲದರ ನಡುವೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಮೊದಲ ಟಾಸ್ಕ್ ನೀಡಿದ್ದು ಇದರಲ್ಲಿ ಪುಟ್ಟ ಗೌರಿ ಮದುವೆ ಖ್ಯಾತಿಯ ಸಾನ್ಯ ಅಯ್ಯರ್ ತಮ್ಮ ಜೀವನದ ಕರಾಳ ದಿನವನ್ನು ತೆರೆದಿಟ್ಟಿದ್ದಾರೆ.

ಬಿಗ್ ಬಾಸ್ ಮೊದಲ ದಿನ ಸ್ಪರ್ಧಿಗಳಿಗೆ ತಮ್ಮ ಜೀವನವನ್ನು ಪರಿಚಯಿಸಲು ಒಂದು ಟಾಸ್ಕ್ ನೀಡಿದ್ದರು. ಅದೇನೆಂದರೆ ನಾನು ಯಾರು? ಎಂಬ ಟಾಸ್ಕ್. ಇದರಲ್ಲಿ ಪ್ರತಿಯೊಬ್ಬ ಸ್ಪರ್ಧಿಯು ತನ್ನ ಜೀವನದ ಕಥೆಯನ್ನು ಹೇಳಿದರು. ಸಾನ್ಯ ಅಯ್ಯರ್ ಕೂಡ ತಮ್ಮ ಜೀವನದ ಕರಾಳ ದಿನದ ಕುರಿತು ಮಾತನಾಡಿದ್ದು, ಏನು ಹೇಳಿದ್ದಾರೆ ಕೇಳೋಣ ಬನ್ನಿ.

ಮಾತನ್ನು ಶುರು ಮಾಡಿದ ಸಾನ್ಯ ‘’ಅಮ್ಮ, ಚಿಕ್ಕಮ್ಮ.. ನನ್ನನ್ನ ಕ್ಷಮಿಸಿ.. ನಿಮ್ಮದು ಒಂದು ಬ್ಯಾಡ ಸ್ಟೋರಿ ಹೇಳಲೇಬೇಕಾಗುತ್ತದೆ. ನನ್ನ ಚಿಕ್ಕಮ್ಮ ಅವರದ್ದು ಅಬ್ಯೂಸಿವ್ ಮ್ಯಾರೇಜ್. ನನ್ನ ಕಣ್ಣ ಮುಂದೆಯೇ ಚಿಕ್ಕಮ್ಮ ಏಟು ತಿನ್ನುತ್ತಿದ್ದರು. ನಾನು ಇನ್ನು ಚಿಕ್ಕವಳಾಗಿದ್ದೆ. ಇದು ನನಗೆ ಮಾನಸಿಕವಾಗಿ ಪರಿಣಾಮ ಬೀರಿತ್ತು. ರಿಲೇಶನ್‌ಶಿಪ್ ಅಂದ್ರೆ ಹೀಗೇ ಅಂತ ನಾನು ಅಂದುಕೊಂಡಿದ್ದೆ. ನಾನೂ ಕೂಡ ಒಂದು ರಿಲೇಶನ್‌ಶಿಪ್‌ನಲ್ಲಿದ್ದೆ. ಅದೂ ಕೂಡ ಅಬ್ಯೂಸಿವ್ ಆಗಿತ್ತು. ಅಂದರೆ ನಂಗೆ ಅವನು ಕಾಲಲ್ಲಿ ಒದ್ದಿದ್ದು, ಕಟ್ಟು ಕೂಡ ಇಸುಕಿದ್ದಾನೆ. ನಾನು ಅವನಿಗಾಗಿ ವೃತ್ತಿ ಜೀವನ ಬಿಡಲು ರೆಡಿಯಾಗಿದ್ದೆ. ರಿಲೇಶನ್‌ಶಿಪ್ ಉಳಿಯಬೇಕು ಎಂಬ ಕಾರಣಕ್ಕೆ ಎಲ್ಲಾ ತ್ಯಾಗಕ್ಕೂ ರೆಡಿಯಾಗಿದ್ದೆ. ಆದರೂ ಅದು ವರ್ಕ್ ಆಗಲಿಲ್ಲ.’’

‘’ಮಲತಂದೆ ನನ್ನ ತಾಯಿ ಜೊತೆ ರಿಲೇಶನ್‌ಶಿಪ್‌ನಲ್ಲಿ ಇರಬೇಕು ಎಂಬ ಕಾರಣಕ್ಕೆ ನನ್ನ ಹೆಸರನ್ನ ಹಾಳು ಮಾಡಲು ಮುಂದಾಗ್ತಾರೆ. ಹೇಗೆ ಅಂದ್ರೆ, ನನ್ನ ಬಾಯ್‌ಫ್ರೆಂಡ್ ಜೊತೆ ನಾನಿದ್ದ ವಿಡಿಯೋವನ್ನು ರೆಕಾರ್ಡ್ ಮಾಡ್ತಾರೆ. ಅದು ಹೇಗೆ ಅಂದರೆ ಪಕ್ಕದ ಮನೆಯಲ್ಲಿ ಇರುವ ಕಿಟಕಿಯ ಹತ್ತಿರ ಹೋಗಿ. ನಂತರ ಆ ವಿಡಿಯೋವನ್ನು ನಮ್ಮ ಅಜ್ಜಿ ಮತ್ತು ಚಿಕ್ಕಮ್ಮರಿಗೆ ತೋರಿಸುತ್ತಾರೆ. ಆದರೆ ಇಲ್ಲಿಯವರೆಗೂ ಮಾತ್ರ ನಮ್ಮ ಅಮ್ಮ ಆ ವಿಡಿಯೋ ನೋಡಿಲ್ಲ. ಇವತ್ತಿಗೂ ಸಹ ನಮ್ಮ ಅಮ್ಮ ಅದರಲ್ಲಿ ಏನಿದೆ ಅಂತ ಕೇಳುತ್ತಾರೆ. ಆದರೆ ನಾನು ಈಗಲೂ ಹೇಳುವುದು ಒಂದು ನನ್ನನ್ನು ನಂಬು ಅಮ್ಮ ಅದರಲ್ಲಿ ಏನು ಇರಲಿಲ್ಲ ಎಂಬುದು ಮಾತ್ರ.

ನಾನು ಅವರನ್ನ ಅಪ್ಪ ಅಂತ ಬಾಯ್ತುಂಬ ಕರೆದಿದ್ದೀನಿ. ಅವರ ಕೈತುತ್ತು ತಿಂದಿದ್ದೀನಿ. ಆದರೆ, ಅವರು ನನ್ನಮ್ಮ ತಲೆತಗ್ಗಿಸುವ ಹಾಗೆ ಮಾಡಿಬಿಟ್ಟರು. ನನಗೆ ತಂದೆ ಪ್ರೀತಿ ಸಿಕ್ಕಿರಲಿಲ್ಲ. ಆ ಪ್ರೀತಿಯನ್ನ ಇನ್ನೊಬ್ಬರಿಂದ ನಾನು ನಿರೀಕ್ಷೆ ಮಾಡುತ್ತಿದ್ದೆ. ಈಗ ಹಾಗೆ ಮಾಡಲ್ಲ. ನಾನು ಸ್ವಾವಲಂಬಿ ಆಗಿರುತ್ತೇನೆ. ಇದೆಲ್ಲಾ ಆಗಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ’’ ಎಂದು ಕಣ್ಣೀರಿಟ್ಟರು ನಟಿ ಸಾನ್ಯ ಅಯ್ಯರ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top