ಈ ಬಾರಿಯ ಬಿಗ್ ಬಾಸ್ ಹಲವಾರು ಕುತೂಹಲದಿಂದ ಕೂಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಪ್ರತಿಯೊಬ್ಬ ಸ್ಪರ್ದಿಯು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಅದರಲ್ಲೂ ಮಾರಿಮುತ್ತು ಖ್ಯಾತಿಯ ಪೋಷಕ ನಟಿ ಸರೋಜಮ್ಮ ಅವರ ಮೊಮ್ಮಗಳು ತಮ್ಮ ಬದುಕಿನ ಗುಟ್ಟೊಂದನ್ನು ಬಿಟ್ಟುಕೊಟ್ಟಿದ್ದಾರೆ.
ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸಿರುವ ಸ್ಪರ್ಧಿಗಳು ತಮ್ಮ ಜೀವನದ ಕೆಲವೊಂದು ಸೀಕ್ರೆಟ್ಸ್ ರಿವೀಲ್ ಮಾಡುತ್ತಿದ್ದಾರೆ. ಅದರಲ್ಲೂ ಜಯಶ್ರೀ ಆರಾಧ್ಯ ಅವರು ಹೇಳಿರುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
ಜಯಶ್ರೀ ಬಿಚ್ಚಿಟ್ಟಿರುವ ಸತ್ಯವೇನೆಂದರೆ ಮದುವೆಯಾದ ವ್ಯಕ್ತಿಯ ಜೊತೆ ಸಂಬಂಧದಲ್ಲಿ ಇದ್ದೆ ಎಂದು ತಿಳಿಸಿದ್ದಾರೆ. ಬಳಿಕ ಮುಂದುವರಿಸಿದ ಜಯಶ್ರೀ ಸುಮಾರು ಎರಡು ವರ್ಷಗಳ ಕಾಲ ನಾನು ಆತನ ಜೊತೆ ಸಂಬಂಧದಲ್ಲಿದ್ದೆ, ಅದು ಹಣಕ್ಕಾಗಿ ಅಲ್ಲ, ಬದಲಿಗೆ ನಂಗೆ ಅವರ ಸಪೋರ್ಟ್ ಬೇಕಿತ್ತು. ಆದ್ದರಿಂದ ಅವರ ಜೊತೆ ಇದ್ದೆ ಎಂದು ತಿಳಿಸಿದರು.
ಇದರ ಜೊತೆ ಮದುವೆಯಾದ ವ್ಯಕ್ತಿಯ ಜೊತೆ ಸಂಬಂಧದಲ್ಲಿದ್ದಾಗಲೇ ನಾನು ಜೂಜು ಆಡುವುದನ್ನು ಕಲಿತಿದ್ದೆ. ಒಂದೂವರೆ ವರ್ಷ ಜೂಜು ಆಡಿ ನಂತರ ಅದನ್ನು ಬಿಟ್ಟಿದ್ದೇನೆ. ಬಳಿಕ ಆ ವ್ಯಕ್ತಿಗೆ ಕ್ಯಾನ್ಸರ್ ಬಂದರು ಸಹ ನಾನು ಅವರನ್ನು ಬಿಡಲಿಲ್ಲ. ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಿದ್ದರಿಂದ ನಾನು ಅವರನ್ನು ಬಿಡಲಿಲ್ಲ ಎಂದು ಜಯಶ್ರೀ ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
