fbpx
ಸಮಾಚಾರ

ಶ್ರೀ ಕೃಷ್ಣ ಪ್ರಾಣ ತ್ಯಾಗ ಮಾಡಿದ ಸ್ಥಳ ಇದೇ ಅಂತೇ; ಅದು ಎಲ್ಲಿದೆ, ಏನು ಈ ಸ್ಥಳದ ಮಹಿಮೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಇಂದು ದೇಶದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈ ವೇಳೆ ಶ್ರೀ ಕೃಷ್ಣನ ಕುರಿತು ಕೆಲವು ಕುತೂಹಲಕಾರಿ ಮಾಹಿತಿಯನ್ನು ನಾವು ನಿಮ್ಮ ಬಳಿ ಹಂಚಿಕೊಳ್ಳಲು ಇಷ್ಟಪಡುತ್ತೇವೆ. ಅದೇನೆಂದರೆ ಸೌರಾಷ್ಟ್ರದಲ್ಲಿ ಕೃಷ್ಣನು ತನ್ನ ಪ್ರಾಣವನ್ನು ತ್ಯಜಿಸಿದ ಸ್ಥಳವೊಂದಿದೆ.

ಮಹಾಭಾರತ ಯುದ್ಧದ ನಂತರ ದೃತರಾಷ್ಟ್ರನ ರಾಜವಂಶ ಕೊನೆಗೊಳ್ಳುತ್ತದೆ. ಇದಲ್ಲದೆ ಅವನ 100 ಮಕ್ಕಳು ಕೂಡ ಮೃತಪಟ್ಟಿರುತ್ತಾರೆ. ಈ ವೇಳೆ ಶ್ರೀ ಕೃಷ್ಣ ಗಾಂಧಾರಿಯನ್ನು ಭೇಟಿಮಾಡಲು ಹೋಗುತ್ತಾನೆ. ಮೊದಲೇ ತನ್ನ ಮಕ್ಕಳನ್ನು ಕಳೆದುಕೊಂಡು ನೋವಿನಲ್ಲಿದ್ದ ಗಾಂಧಾರಿಗೆ ಕೋಪ ಮತ್ತಷ್ಟು ಹೆಚ್ಚಾಗುತ್ತದೆ. ಈ ವೇಳೆ ಗಾಂಧಾರಿ ಕೃಷ್ಣನ ಯದುವಂಶವೂ ಇದೇ ರೀತಿ ನಾಶವಾಗಲಿ ಎಂದು ಶಾಪ ನೀಡುತ್ತಾಳೆ.

ಶ್ರೀ ಕೃಷ್ಣ ದ್ವಾರಕಕ್ಕೆ ಆಗಮಿನಿಸಿದ ಬಳಿಕ ಗಾಂಧಾರಿಯ ಶಾಪ ಗೋಚರಿಸುತ್ತದೆ. ಏಕೆಂದರೆ ಯದುವಂಶಿಯರು ತಮ್ಮ ತಮ್ಮಲ್ಲೇ ಜಗಳವಾಡಿ ಕೊಲ್ಲಲು ಪ್ರಾರಂಭಿಸುತ್ತಾರೆ. ಇದನ್ನು ಕಂಡ ಶ್ರೀ ಕೃಷ್ಣ ಯುದ್ಧವಾಗಿ 36 ವರ್ಷಗಳ ಬಳಿಕ ದ್ವಾರಕೆಯಿಂದ ದೂರವಿರುವ ಕಾಡಿಗೆ ಹೋಗಿ ಅಲ್ಲಿ ವಿಶ್ರಾಂತಿ ಪಡೆಯುತ್ತಿರುತ್ತಾನೆ. ಗಾಂಧಾರಿಯ ಶಾಪ ಆವಾಗಲೇ ಕೃಷ್ಣನಿಗೆ ತಟ್ಟಿತು ಎಂದು ಹೇಳಬಹುದು. ಏಕೆಂದರೆ ವಿಶ್ರಾಂತಿ ಪಡೆಯುತ್ತಿದ್ದ ಶ್ರೀ ಕೃಷ್ಣನನ್ನು ಬೇಟೆಗಾರನೊಬ್ಬ ಜಿಂಕೆ ಎಂದು ತಪ್ಪಾಗಿ ಪರಿಗಣಿಸಿ ಬಾಣವನ್ನು ಹೊಡೆಯುತ್ತಾನೆ. ಅದು ಕೃಷ್ಣನ ಎಡಗಾಲಿಗೆ ತಗಲುತ್ತದೆ.

ಏನಾಯಿತು ಎಂದು ನೋಡಲು ಬಂದ ಬೇಟೆಗಾರ ಕೃಷ್ಣನನ್ನು ಬಾಣದಿಂದ ಹೊಡೆದದ್ದನ್ನು ನೋಡಿ ಪಶ್ಚಾತ್ತಾಪ ಪಡಲು ಪ್ರಾರಂಭಿಸುತ್ತಾನೆ. ಇದಕ್ಕೆ ಶ್ರೀ ಕೃಷ್ಣ ಇದರಲ್ಲಿ ನಿನ್ನದು ಏನು ತಪ್ಪಿಲ್ಲ. ತ್ರೇತಾಯುಗದಲ್ಲಿ ನಾನು ರಾಮ ಮತ್ತು ನೀನು ಬಲಿ. ಆಗ ನೀನು ನನ್ನಿಂದಾಗಿ ಸತ್ತೆ. ಅದಕ್ಕೇ ನೀನು ನನ್ನನ್ನು ಬಾಣದಿಂದ ಹೊಡೆದೆ ಎಂದು ಹೇಳುತ್ತಾ ಕೃಷ್ಣ ಪ್ರಾಣ ಬಿಟ್ಟ. ಅಂದು ಕಾಡಾಗಿದ್ದ ಈ ಜಾಗ ಇಂದು ಕೃಷ್ಣನು ತನ್ನ ಪ್ರಾಣವನ್ನು ತ್ಯಜಿಸಿದ ಸ್ಥಳವೆಂದು ಗುರುತಿಸಲಾಗಿದೆ.

ಈ ಸ್ಥಳದ ಹೆಸರು ಭಾಲ್ಕ ತೀರ್ಥ. ಇದು ಗುಜರಾತಿನ ಸೌರಾಷ್ಟ್ರದ ವೆರಾವಲ್‌ನಲ್ಲಿದೆ. ಕೃಷ್ಣನು ತನ್ನ ಪ್ರಾಣವನ್ನು ತೊರೆದ ಸ್ಥಳದಲ್ಲಿ ಭಾಲ್ಕ ತೀರ್ಥ ಎಂಬ ದೇವಾಲಯವನ್ನು ನಿರ್ಮಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top