fbpx
ಸಮಾಚಾರ

‘ಇಂಥ ಅಭಿಮಾನಿ ಪಡೆಯಲು ಪುಣ್ಯ ಮಾಡಿರಬೇಕು’ ಕಾಫಿ ನಾಡು ಚಂದು ಬಗ್ಗೆ ಶಿವಣ್ಣನ ಹೇಳಿದ್ದೇನು ಗೊತ್ತಾ?

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವ್ಯಕ್ತಿ ಎಂದರೆ ಅದು ನಮ್ಮ ಕಾಫೀ ನಾಡು ಚಂದು. ತಮ್ಮ ಬರ್ತಡೇ ಸಾಂಗ್ ಮೂಲಕ ಅಪಾರವಾದ ಅಭಿಮಾನಿಯನ್ನು ಇವರು ಗಳಿಸಿದ್ದಾರೆ. ಇದಲ್ಲದೆ ಇವರು ಶಿವಣ್ಣ ಮತ್ತು ಅಪ್ಪು ಅವರ ಅಪ್ಪಟ ಅಭಿಮಾನಿ. ಹೀಗಾಗಿ ಕೆಲವು ವಾರಗಳ ಹಿಂದೆ ವಿಡಿಯೋ ಮಾಡಿ ತಾವು ಶಿವಣ್ಣ ಅವರನ್ನು ಭೇಟಿಮಾಡಬೇಕು ಎಂದು ಕೇಳಿಕೊಂಡಿದ್ದರು. ಇದೀಗ ಇವರ ಅಸೆ ಈಡೇರಿದೆ ಎಂದು ಹೇಳಬಹುದು.

 

 

ಈ ಹಿಂದೆ ರಿಲ್ಸ್ ಮೂಲಕ ಅನುಶ್ರೀ ಅವರ ಬಳಿ ತಾವು ಶಿವಣ್ಣ ಅವರನ್ನು ಭೇಟಿ ಮಾಡಬೇಕು ಎಂದು ತಮ್ಮದೇ ರೀತಿಯಲ್ಲಿ ಕೇಳಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡ್ ಮಾಡಿತ್ತು. ಇದಾದ ನಂತರ ಚಂದು ಶಿವಣ್ಣ ಅವರನ್ನು ಯಾವಾಗ ಭೇಟಿ ಮಾಡುತ್ತಾರೆ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿತ್ತು. ಆದರೆ ಇದೀಗ ಚಂದು ಅಸೆ ಈಡೇರಿದ್ದು, ಅವರು ಶಿವಣ್ಣ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗೆ ‘ಜೀ ಕನ್ನಡ’ ವಾಹಿನಿಯ “ಡಾನ್ಸ್ ಕರ್ನಾಟಕ ಡಾನ್ಸ್” ಕಾರ್ಯಕ್ರಮದಲ್ಲಿ ಚಂದು ಸಡನ್ ಎಂಟ್ರಿ ಕೊಟ್ಟಿದ್ದಾರೆ. ಇವರ ಎಂಟ್ರಿ ಕಂಡು ಒಂದು ಕ್ಷಣ ರಕ್ಷಿತಾ ಶಾಕ್ ಆಗಿದ್ದಾರೆ. ಇದೀಗ ಚಂದು ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿರುವ ಪ್ರೋಮೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಸಕತ್ ವೈರಲ್ ಆಗುತ್ತಿದೆ.

ತನ್ನ ನೆಚ್ಚಿನ ನಟನನ್ನು ನೋಡಿದ ಚಂದು ತಮ್ಮದೇ ರೀತಿಯಲ್ಲಿ ಹಾಡು ಹಾಡಲು ಶೂರಮಾಡುತ್ತಾರೆ. ನೆಚ್ಚಿನ ನಟನನ್ನು ನೋಡಿ ಇವರಿಗೆ ಆದ ಕ್ಸುಹಿಯನ್ನು ಸಹ ಇವರು ವ್ಯಕ್ತಪಡಿಸಿದ್ದಾರೆ. ತನ್ನ ಅಭಿಮಾನಿಯನ್ನು ಕಂಡ ಶಿವಣ್ಣ ಚಂದು ಬಳಿ ಬಂದು ಅವರನ್ನು ತಬ್ಬಿಕೊಂಡು ‘ಇಂಥ ಅಭಿಯಾನಿಯನ್ನು ಪಡೆಯೋಕೆ ಬಹಳ ಪುಣ್ಯ ಮಾಡಿರಬೇಕು’ ಎಂದು ಹೇಳಿ ಚಂದು ಅವರನ್ನು ಹೊಗಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top