ಇತ್ತೀಚಿನ ದಿನಗಳಲ್ಲಿ ಹಲವಾರು ಕೂಗು ಬ್ಯಾಂಕಿನ ವಿರುದ್ಧ ಕೇಳಿಬರುತ್ತಿತ್ತು. ಅದೇನೆಂದರೆ ಬ್ಯಾಂಕಿನಲ್ಲಿಕನ್ನಡಿಗರಿಗೆ ಅನ್ಯಾಯ ವಾಗುತ್ತಿದೆ. ಬ್ಯಾಂಕಿನ ಸಿಬ್ಬಂದಿ ಗ್ರಾಹಕರೊಂದಿಗೆ ಕನ್ನಡದಲ್ಲಿ ಸಂಭಾಷಣೆ ನಡೆಸುತ್ತಿಲ್ಲ, ಹೀಗೆ ಹಲವಾರು ಆರೋಪಗಳನ್ನು ಕೇಳಿದ್ದೇವೆ. ಆದರೆ ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದ್ದು, ಭಾರತದ ಪ್ರತಿಷ್ಠಿತ ಬ್ಯಾಂಕ್ ಒಂದು ಚೆಕ್ ಕನ್ನಡಲ್ಲಿದ್ದ ಕಾರಣಕ್ಕೆ ತಿರಸ್ಕರಿಸಿದ್ದಾರೆ ಎಂದು.
ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಷ್ಠಿತ ಎಸ್ಬಿಐ ಬ್ಯಾಂಕ್ ಬ್ರಾಂಚ್ ನಲ್ಲಿ. ಧಾರವಾಡದ ವಾದಿರಾಜಾಚಾರ್ಯ ಇನಾಮದಾರ್ ಎಂಬುವವರು ತಮ್ಮ ವಿದ್ಯುತ್ ಬಿಲ್ ಪಾವತಿಸಲು 6000 ರೂಪಾಯಿ ಚೆಕ್ ಅನ್ನು ಎಸ್ಬಿಐ ಬ್ಯಾಂಕ್ ನಲ್ಲಿ ಕೊಟ್ಟಿದ್ದಾರೆ. ಚೆಕ್ ನಲ್ಲಿ ಪ್ರತಿಯೊಂದು ಅಕ್ಷರವನ್ನು ಸಹ ಇವರು ಕನ್ನಡದಲ್ಲೇ ಬರೆದಿದ್ದಾರೆ. ಆದರೆ ಬ್ಯಾಂಕಿನವರು ಕನ್ನಡದ ಅಂಕಿಗಳು ತಿಳಿಯದ ಕಾರಣ ಚೆಕ್ ಅಮಾನ್ಯ ಮಾಡಿದ್ದಾರೆ. ಇದರಿಂದ ಇವರ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು, ಧಾರವಾಡದ ಕಲ್ಯಾಣ ನಗರ 2ನೇ ಕ್ರಾಸ್ನಲ್ಲಿನ ಮನೆಯ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಇದರಿಂದ ನೊಂದ ವಾದಿರಾಜಾಚಾರ್ಯ ಇನಾಮದಾರ್ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ.
ವಾದಿರಾಜಾಚಾರ್ಯ ಇನಾಮದಾರ್ ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರು. ಆದರೆ ಇವರಿಗೆ ಕನ್ನಡದ ಮೇಲೆ ಎಷ್ಟರಮಟ್ಟಿಗೆ ಅಭಿಮಾನ ಇದೆ ಎಂದರೆ ಇವರು ತಮ್ಮ ಪ್ರತಿಯೊಂದು ವ್ಯವಹಾರವನ್ನು ಕನ್ನಡದಲ್ಲೇ ಮಾಡುತ್ತಾರೆ. ಹೀಗಾಗಿ ಇವರು ತಮಗೆ ಆಗಿರುವ ಅನ್ಯಾಯ ಕನ್ನಡಕ್ಕಾದ ಅವಮಾನ ಎಂದು ಕಾನೂನು ಹೋರಾಟ ಮಾಡಿ ಸುಮಾರು 8 ತಿಂಗಳುಗಳ ಬಳಿಕ ಗೆಲುವನ್ನು ದಾಖಲಿಸಿದ್ದಾರೆ. ಇದರ ಪರಿಣಾಮವಾಗಿ ಧಾರವಾಡದ ಗ್ರಾಹಕರ ವ್ಯಾಜ್ಯಗಳ ಆಯೋಗ ಬ್ಯಾಂಕ್ಗೆ 85,177ರೂ ದಂಡ ವಿಧಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
