fbpx
ಸಮಾಚಾರ

“ಸೀರೆ ಬಿಚ್ಚಿ ಹೊಡಿತಿನೀ…” ‘ಅಪ್ಪು-ಪಪ್ಪು’ ಖ್ಯಾತಿಯ ‘ನಟ ಸ್ನೇಹಿತ್’ ನಿಂದ ಮಹಿಳೆ ಮೇಲೆ ಕಿರಿಕ್: ಕೇಸ್ ದಾಖಲು

ಅಪ್ಪು ಪಪ್ಪು ಸಿನಿಮಾವನ್ನು ನಾವು ಹಲವಾರು ಬಾರಿ ನೋಡಿದ್ದೇವೆ. ಈ ಸಿನಿಮಾದಲ್ಲಿ ನಟಿಸಿದ್ದ ಸ್ನೇಹಿತ್ ಯಾರಿಗೆ ತಾನೇ ನೆನಪಿಲ್ಲ ಹೇಳಿ. ತನ್ನ ಅಭಿನಯದ ಮೂಲಕ ಜನರನ್ನು ನಗಿಸಿದರು. ಆದರೆ ಇದೀಗ ಈತನ ವಿರುದ್ಧ ಹಲವಾರು ಆರೋಪಗಳು ಕೇಳಿ ಬರುತ್ತಿದೆ. ಅದರಲ್ಲೂ ಇತ್ತೀಚಿಗೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

ಕನ್ನಡ ಸಿನಿಮಾರಂಗದ ಹೆಸರಾಂತ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಪುತ್ರ ಈ ಸ್ನೇಹಿತ್. ಈ ಹಿಂದೆ ಈತ ಎದುರುಮನೆಯ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪವನ್ನು ಎದುರಿಸಿದರು. ಇದೀಗ ಇದರ ಮೇಲೆ ಮತ್ತೊಂದು ಆರೋಪ ಇವರ ಹೆಸರಲ್ಲಿ ಕೇಳಿ ಬರುತ್ತಿದೆ.

ಸೆಪ್ಟೆಂಬರ್ 24 ರಂದು ಸ್ನೇಹಿತ್ ನ ಎದುರು ಮನೆಯ ನಿವಾಸಿಯಾದ ಅನ್ನಪೂರ್ಣ ಅವರು ತಮ್ಮ ಪತಿಯ ಜೊತೆ ಕಾರಿನಲ್ಲಿ ಪ್ರಯಾಣಿಸಿಸುತ್ತಿದ್ದರು. ಈ ವೇಳೆ ಸ್ನೇಹಿತ್ ತನ್ನ ಸ್ನೇಹಿತರೊಂದಿಗೆ ಜಾಗ್ವರ್ ಕಾರಿನಲ್ಲಿ ಬಂದು ಅನ್ನಪೂರ್ಣ ಅವರ ಕಾರಿಗೆ ಡಿಕ್ಕಿ ಹೊಡೆಯಲು ಬಂದರು. ಇದರಿಂದ ಅನ್ನಪೂರ್ಣ ಮತ್ತು ಅವರ ಪತಿ ಗಾಬರಿಯಾಗಿದ್ದರು. ಹೀಗಾಗಿ ಇದನ್ನು ಅವರು ಪ್ರಶ್ನಿಸಿದರು.

ಇದರಿಂದ ಕೋಪಗೊಂಡ ಸ್ನೇಹಿತ್ ಕೆಟ್ಟ ಶಬ್ದಗಳಿಂದ ಬೈಯಲು ಶುರುಮಾಡುತ್ತಾರೆ. ಇದಲ್ಲದೆ ಅನ್ನಪೂರ್ಣ ಅವರಿಗೆ ಅನ್ನಪೂರ್ಣ ಗೆ ಸೀರೆ ಬಿಚ್ಚಿ ಹೊಡಿತಿನಿ, ಇಲ್ಲಿಂದ ಹೋಗ್ತಾ ಇರು ಅಂತಾ ಅಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಅನ್ನಪೂರ್ಣ ಅವರ ಪತಿಗೂ ಕೂಡ ಕಾರಿನಲ್ಲೇ ಹಲ್ಲೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದೀಗ ಈ ಸಂಬಂಧ ಅನ್ನಪೂರ್ಣ ಮತ್ತು ಅವರ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೀಗಾಗಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ನೇಹಿತ್ ವಿರುದ್ಧ ಪೊಲೀಸರು ಎಫ್.ಐ. ಆರ್ ಕೂಡ ದಾಖಲಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top