fbpx
ಸಮಾಚಾರ

ಕರ್ನಾಟಕ ರತ್ನ ಅಪ್ಪು ಬಗ್ಗೆ ಗಂಭೀರ ಆರೋಪ ಮಾಡಿದ ಆರ್.ಎಸ್.ಎಸ್. ಕಾರ್ಯಕರ್ತೆ ಜ್ಯೋತಿ ಸುಪರ್ಣ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷ ಕಳೆದಿದೆ. ಇಂದಿಗೂ ಸಹ ಅಪ್ಪು ಅಭಿಮಾನಿಗಳ ಮನಸಲ್ಲಿ ಜೀವಂತವಾಗಿ ಇದ್ದಾರೆ. ಪ್ರತಿನಿತ್ಯ ಅಪ್ಪು ಹೆಸರಲ್ಲಿ ಹಲವಾರು ಕಾರ್ಯಕ್ರಮಗಳು ಸಹ ನಡೆಯುತ್ತಿದೆ. ಇಂದಿಗೂ ಸಹ ಅಭಿಮಾನಿಗಳು ಅಪ್ಪು ಅವರನ್ನು ದೇವರ ರೂಪದಲ್ಲಿ ನೋಡುತ್ತಾರೆ. ಆದರೆ ಇದೀಗ ಅಪ್ಪು ಮತ್ತು ಡಾ. ರಾಜ್ ಕುಮಾರ್ ಅವರ ಬಗ್ಗೆ ಆರ್.ಎಸ್.ಎಸ್. ಕಾರ್ಯಕರ್ತೆ ಜ್ಯೋತಿ ಸುಪರ್ಣ ಚಿಂಚೋಳಿ ಗಂಭೀರ ಆರೋಪ ಮಾಡಿದ್ದಾರೆ.

ಕಾಂತಾರ ಸಿನಿಮಾವನ್ನು ಹೊಗಳುವ ಭರದಲ್ಲಿ ಇವರು ಅಪ್ಪು ಅವರಿಗೆ ಅವಮಾನ ಮಾಡಿದ್ದಾರೆ. ಇಷ್ಟೇಅಲ್ಲದೆ ಇವರು ಡಾ. ರಾಜ್ ಕುಮಾರ್ ಮತ್ತು ಅವರ ಕುಟುಂಬದವರ ಬಗ್ಗೆ ಕೂಡ ಆರೋಪ ಮಾಡಿದ್ದಾರೆ. ಇದೀಗ ಇವರ ಟ್ವೀಟ್ ಎಲ್ಲಾ ಕಡೆ ಸಕತ್ ವೈರಲ್ ಆಗಿದ್ದು, ಅಪ್ಪು ಅಭಿಮಾನಿಗಳು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ಆರ್.ಎಸ್.ಎಸ್. ಕಾರ್ಯಕರ್ತೆ ಜ್ಯೋತಿ ಸುಪರ್ಣ ಚಿಂಚೋಳಿ ಮಾಡಿರುವ ಟ್ವೀಟ್ ಏನೆಂದರೆ ” ಬಾಲಿವುಡ್​ನಲ್ಲಿ ಕರಣ್​ ಜೋಹರ್​ ಇರುವ ರೀತಿ, ಕರ್ನಾಟಕದಲ್ಲಿ ಡಾ. ರಾಜ್​ಕುಮಾರ್​ ಅವರ ನೆಪೋಕಿಡ್ಸ್​ ದೇವರಿದ್ದಂತೆ.

ಯಾರಾದರೂ ಸ್ಯಾಂಡಲ್​ವುಡ್​ನಲ್ಲಿ ಉಳಿಯಬೇಕಾದರೆ ಇವರಿಗೆ ಸಲಾಂ ಹೊಡೆಯಬೇಕು. ರಿಷಬ್​ ಶೆಟ್ಟಿ ಕೂಡ ಪುನೀತ್​ ರಾಜ್​ಕುಮಾರ್​ ಅವರಿಗೆ ಈ ಪಾತ್ರವನ್ನು ನೀಡಿದ್ದೆ ಅಂತ ಹೇಳಬೇಕಾಯಿತು. ಪುನೀತ್​ ನಿಧನದಿಂದ ನನಗೆ ಬೇಸರ ಆಗಿದೆ. ಆದರೆ ವಾಸ್ತವ ಏನೆಂದರೆ, ಪ್ರತಿಭಾವಂತ ನಟ/ನಿರ್ದೇಶಕ/ಬರಹಗಾರ ರಿಷಬ್​ ಶೆಟ್ಟಿ ಅವರು ಸ್ಯಾಂಡಲ್​ವುಡ್​ನಲ್ಲಿ ದಶಕಗಳ ಕಾಲ ಕಷ್ಟಪಡಬೇಕಾಯಿತು. ದಶಕದ ಹಿಂದೆಯೇ ಅವರು ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡುತ್ತಿದ್ದರು..” ಎಂದು ಹೇಳಿದ್ದಾರೆ. ಈ ಟ್ವೀಟ್ ಅನ್ನು ಅವರು ರಿಷಬ್ ಶೆಟ್ಟಿ ಅವರಿಗೂ ಸಹ ಟ್ಯಾಗ್ ಮಾಡಿದ್ದಾರೆ. ಹೀಗಾಗಿ ಇದಕ್ಕೆ ರಿಷಬ್ ಶೆಟ್ಟಿ ಏನೆಂದು ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top