ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ 7 ವಾರಗಳು ಕಳೆದಿದೆ. ದಿನದಿಂದ ದಿನಕ್ಕೆ ಮನೆಯ ಕಾವು ಹೆಚ್ಚಾಗುತ್ತಿದೆ. ಮನೆಯಲ್ಲೂ ಸಹ ಹಲವಾರು ಜಗಳಗಳು ನಡೆಯುತ್ತಿದೆ. ಈ ವೇಳೆ ಬಿಗ್ ಬಾಸ್ ಟಾಸ್ಕ್ ಒಂದರಲ್ಲಿ ಆದ ಗಲಾಟೆಯಿಂದ ಬೇಸರಗೊಂಡಿದ್ದ ರೂಪೇಶ್ ರಾಜಣ್ಣ ಸುದೀಪ್ ಅವರ ನ್ಯಾಯವಾದ ಹೇಳಿಕೆಯಿಂದ ಕಿಚ್ಚನ ಮುಂದೆ ಮಂಡಿವೂರಿ ಕ್ಷಮೆ ಕೇಳಿದ್ದಾರೆ.
ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಟಾಸ್ಕ್ ನೀಡಿದ್ದರು. ಅದೇನೆಂದರೆ ಬಿಗ್ ಬಾಸ್ ನೀಡಿದ್ದ ಬಝರ್ ಅನ್ನು ಯಾರು ಮೊದಲು ಹೊಡೆಯುತ್ತಾರೋ ಅವರಿಗೆ ವಿಶೇಷವಾದ ಅಧಿಕಾರ ಸಿಗುತ್ತದೆ ಮತ್ತು ಅವರು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆಯಾಗುತ್ತಾರೆ ಎಂದು. ಹೀಗಾಗಿ ಈ ಆಟ ನಡೆಯುತ್ತಿದ್ದ ವೇಳೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಭರ್ಗಿ ಒಟ್ಟಿಗೆ ಬಝರ್ ಒತ್ತಿದ್ದರು. ಆದರೆ ನಾನು ಮೊದಲು ಬಝರ್ ಒತ್ತಿದೆ ಎಂದು ರಾಜಣ್ಣ ಪ್ರಶಾಂತ್ ಸಂಭರ್ಗಿ ಮತ್ತು ಕ್ಯಾಪ್ಟನ್ ಅನುಪಮಾ ಅವರ ಜೊತೆ ಜಗಳ ಆಡಿದ್ದರು.
ಕ್ಯಾಪ್ಟನ್ ಆದ ಅನುಪಮಾ ಮೊದಲು ಪ್ರಶಾಂತ್ ಅವರು ಬಝರ್ ಒತ್ತಿದರು ಎಂದು ಹೇಳಿದರು. ಇದಕ್ಕೆ ಒಪ್ಪದ ರಾಜಣ್ಣ ಬಿಗ್ ಬಾಸ್ ಬಳಿ ಒಮ್ಮೆ ಅಪೀಲ್ ಹೋಗಿ ಎಂದು ಅನುಪಮಾ ಅವರನ್ನು ಕೇಳಿದ್ದರು. ಅನುಪಮಾ ಹೋಗದಿದ್ದಕ್ಕೆ, ಬೇಸರ ಮಾಡಿಕೊಂಡು, ಸೂಟ್ ಕೇಸ್ಗಳನ್ನು ಹಿಡಿದು ಹೊರಗೆ ಹೋಗುತ್ತೇನೆ ಎಂದು ಹಠ ಹಿಡಿದಿದ್ದರು. ಇದಾದ ನಂತರ ಮನೆಯ ಸದಸ್ಯರು ವಾರದ ಕಥೆಯಲ್ಲಿ ಕಿಚ್ಚ ಇದಕ್ಕೆ ಉತ್ತರಿಸುತ್ತಾರೆ ಎಂದು ಹೇಳಿದ್ದರು.
ಹೀಗಾಗಿ ರಾಜಣ್ಣ ಒಂದು ವೇಳೆ ನಾನು ಬಝರ್ ಮುಟ್ಟಿಲ್ಲ ಎಂದು ಕಿಚ್ಚ ಹೇಳಿದರೆ ಅವರ ಕಾಲಿಗೆ ಬೀಳ್ತೀನಿ ಎಂದು ಹೇಳಿದರು. ಹೀಗಾಗಿ ಸುದೀಪ್ ವಾರದ ಕಥೆಯಲ್ಲಿ ಮೊದಲು ಬಝರ್ ಮುಟ್ಟಿದ್ದು ಪ್ರಶಾಂತ್ ಸಂಭರ್ಗಿ ಎಂದು ತಿಳಿಸಿದರು. ಸುದೀಪ್ ಅವರು ಹೇಳಿದ್ದೇ ತಡ, ರೂಪೇಶ್ ರಾಜಣ್ಣ, ಅನುಪಮಾ, ಪ್ರಶಾಂತ್ ಸಂಬರ್ಗಿ ಬಳಿ ಕ್ಷಮೆ ಕೇಳಿದ್ರು. ಮತ್ತು ಮಂಡಿಯೂರಿ ಕರ್ನಾಟಕದ ಜನತೆಗೂ ಕ್ಷಮೆ ಕೇಳಿದ್ರು.
ಇದಾದ ನಂತರ ಮಾತನಾಡಿ ಟಾಸ್ಕ್ ವಿಚಾರದಲ್ಲಿ ನನ್ನಿಂದ ತಪ್ಪಾಗಿದೆ. ಕ್ಷಮಿಸಿ ಎಂದು ತಾವು ಕೊಟ್ಟ ಮಾತನ್ನು ಉಳಿಸಿಕೊಂಡರು. ನಂತರ ಕಿಚ್ಚ ಮೆಚ್ಚುಗೆ ವ್ಯಕ್ತಪಡಿಸಿ ನೀವು ಹೇಳಿದ ರೀತಿ ಮಾಡಲು ಹಿಂಜರಿಯಲಿಲ್ಲ. ಖುಷಿ ಆಯ್ತು ಎಂದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
