ಕಾಂತಾರ ಸಿನಿಮಾ ಪ್ರಪಂಚಾದ್ಯಂತ ಬಹಳಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾ ಇದೀಗ ಬಾಕ್ಸ್ ಆಫೀಸ್ ಅನ್ನು ಸಹ ಧೂಳಿಪಟ ಮಾಡಿ ಮುಂದೆ ಸಾಗುತ್ತಿದೆ. ರಿಷಬ್ ಶೆಟ್ಟಿ ಅವರ ನಟನೆಯನ್ನು ಪ್ರೇಕ್ಷಕರು ಅಭಿನಂದಿಸಿದ್ದಾರೆ. ರಿಷಬ್ ಶೆಟ್ಟಿ ಒಂದು ಬಾರಿ ಹೇಳಿದಂತೆ ಈ ಸಿನಿಮಾ ಡಾ. ಪುನೀತ್ ರಾಜ್ ಕುಮಾರ್ ಅವರು ಮಾಡಬೇಕಿತ್ತು. ಕಾರಣಾಂತರದಿಂದ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅಭಿಮಾನಿಯೊಬ್ಬ ಒಂದು ವೇಳೆ ಅಪ್ಪು ಈ ಸಿನಿಮಾ ಮಾಡಿದರೆ ಅವರ ಗೆಟಪ್ ಹೇಗಿರುತ್ತಿತ್ತು ಎಂಬುದರ ಒಂದು ಚಿತ್ರವನ್ನು ರಚಿಸಿದ್ದಾರೆ.
ಡಿಜಿಟಲ್ ಆರ್ಟಿಸ್ಟ್ ಕುಶಾಲ್ ಹಿರೇಮಠ್ ಅವರು ಒಂದು ಪೋಸ್ಟರ್ ರಚಿಸಿದ್ದಾರೆ. ಇದರಲ್ಲಿ ಅಪ್ಪು ಕಾಂತಾರ ಸಿನಿಮಾದಲ್ಲಿ ನಾಯಕನಾಗಿರುವ ಶಿವನ ಪಾತ್ರದಲ್ಲಿ ಹೇಗೆ ಕಾಣಿಸಿಕೊಳ್ಳಬಹುದು ಎಂದು ಚಿತ್ರಿಸಿದ್ದಾರೆ. ಪುನೀತ್ ಅವರ ಬೇರೆ ಫೋಟೋವನ್ನು ಬಳಸಿಕೊಂಡು ಈ ರೀತಿ ವಿನ್ಯಾಸ ಮಾಡಲಾಗಿದೆ. ಅಪ್ಪು ಅವರನ್ನು ಶಿವನ ಪಾತ್ರದಲ್ಲಿ ಅಭಿಮಾನಿಗಳಿಗೆ ಎಮೋಷನಲಿ ಬಹಳಷ್ಟು ಕನೆಕ್ಟ್ ಆಗಿದೆ. ಹೀಗಾಗಿ ಕುಶಾಲ್ ಹಿರೇಮಠ್ ಅವರ ಕೈಚಳಕವನ್ನು ಅಭಿಮಾನಿಗಳು ಹೊಗಳಿದ್ದಾರೆ.
ಅಪ್ಪು ಅವರಿಗೆ ಹೊಂಬಾಳೆ ಫಿಲಮ್ ಸಂಸ್ಥೆ ಜೊತೆ ಬಹಳಷ್ಟು ಒಡೆನಾಟವಿದೆ. ರಾಜ್ ಕುಮಾರ ಸಿನಿಮಾ ಕೂಡ ಇದೆ ಸಂಸ್ಥೆಯ ಅಡಿಯಲ್ಲಿ ಮೂಡಿಬಂದಿತ್ತು. ಹೀಗಾಗಿ ಹೊಂಬಾಳೆ ಫಿಲಮ್ ಸಂಸ್ಥೆ ಕಾಂತಾರ ಸಿನಿಮಾ ಮಾಡಲು ಮೊದಲು ಅಪ್ಪು ಬಳಿ ಹೋಗಿದ್ದರು. ಆದರೆ ಈ ಪಾತ್ರಕ್ಕೆ ರಿಷಬ್ ಶೆಟ್ಟಿ ಅವರು ಸೂಕ್ತ ಎಂದು ಸ್ವತಃ ಪುನೀತ್ ಸೂಚಿಸಿದ ಬಳಿಕ ಆ ಪಾತ್ರ ರಿಷಬ್ ಪಾಲಾಯಿತು. ಇದೀಗ ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
