ವಿಧಿ ಎಷ್ಟು ಕ್ರೂರಿ ಎಂದು ಎಲ್ಲರು ಹೇಳುತ್ತಾರೆ. ಇದಕ್ಕೆ ಹಲವಾರು ಉದಾಹರಣೆಗಳು ಸಹ ನಾವು ನೋಡಿರುತ್ತೇವೆ. ಇದೀಗ ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ನಮ್ಮ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಘಟನೆ. ಮಗ ಹೃದಯಾಘಾತದಿಂದ ಸಾವನಪ್ಪಿದ ಎಂದು ವಿಷಯ ತಿಳಿಯುತ್ತಿದ್ದಂತೆ ತಾಯಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದರು.
ನವೀನ್ ಎಂಬ ಯುವ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಹೀಗಾಗಿ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ರಾತ್ರಿ ಆಸ್ಪತ್ರೆಯಲ್ಲಿಯೇ ಹೃದಯಾಘಾತದಿಂದ ನವೀನ್ ಕೊನೆಯುಸಿರೆಳೆದಿದ್ದಾರೆ. ಮಗನ ಸಾವಿನ ವಿಷಯ ತಿಳಿಯುತ್ತಿದ್ದಂತೆ ತಾಯಿಗೆ ಬಹಳಷ್ಟು ನೋವಾಗಿದೆ. ಹೀಗಾಗಿ ನೋವು ತಾಳಲಾರದೆ ಮರುದಿನ ಬೆಳೆಗೆ ತಾಯಿಗೂ ಸಹ ಹೃದಯಾಘಾತವಾಗಿದ್ದು, ಅವರು ಸಹ ಮೃತಪಟ್ಟಿದ್ದಾರೆ.
ತಾಯಿ ಮತ್ತು ಮಗ ಇಬ್ಬರು ಸಹ ಹೃದಯಾಘಾತದಿಂದ ಮೃತಪಟ್ಟಿದ್ದು, ಸಾವಿನಲ್ಲೂ ಸಹ ಅಮ್ಮ ಮಗ ಒಂದಾಗಿದ್ದರು. ಆದರೆ ಒಂದೇ ಸತಿ ಇಬ್ಬರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದ್ದು, ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
