fbpx
ಸಮಾಚಾರ

ಮಹಾಲಕ್ಷ್ಮಿ ಲೇಔಟ್ ಕಳಪೆ ಡಾಂಬರೀಕರಣ ಕರ್ಮಕಾಂಡ ಬಯಲಿಗೆಳೆದ ಸಂಸದ ಜಿಸಿ ಚಂದ್ರಶೇಖರ್

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ಹಾಗೂ ಟರ್ಮಿನಲ್ 2ರ ಉದ್ಘಾಟನೆ ಸೇರಿ, ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೆನ್ನೆ ಬೆಂಗಳೂರಿಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧೆಡೆ ಆಯಾ ರಸ್ತೆಗಳ ಗುಂಡಿಗಳನ್ನು ರಾತ್ರೋ ರಾತ್ರಿ ಮುಚ್ಚಿಸಲಾಗುತ್ತು.

ಆದರೆ ತರಾತುರಿಯಲ್ಲಿ ಮಾಡಿದ್ದ ರಸ್ತೆಗಳು ಅದ್ವಾನ ಎದ್ದುಹೋಗಿವೆ.. ಕಳಪೆ ಗುಣಮಟ್ಟದ ಡಾಂಬರೀಕರಣದಿಂದ ದುರಸ್ತಿಗೊಂಡಿರುವ ಸಾಕಷ್ಟು ರಸ್ತೆಗಳು ಒಂದೇ ದಿನಕ್ಕೆ ಚಕ್ಕೆ ಏಳುತ್ತಿವೆ. ಬಿಬಿಎಂಪಿಯ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

 

 

ಇನ್ನು ಕಳಪೆ ಗುಣಮಟ್ಟದ ಡಾಂಬರೀಕರಣದ ಕರ್ಮಕಾಂಡವನ್ನು ಸಂಸದ ಜಿಸಿ ಚಂದ್ರಶೇಖರ್ ಅವರು ಬಯಲಿಗೆಳೆದಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಹಾಕಲಾಗಿರುವ ಕಳಪೆ ಗುಣಮಟ್ಟದ ಡಾಂಬರು ಕಿತ್ತು ಬರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವಕನೊಬ್ಬ ಹೇಗೆ ರಸ್ತೆಯ ಡಾಂಬರು ಚಕ್ಕೆ ರೀತಿ ಕಿತ್ತು ಬರುತ್ತಿದೆ ಎಂದು ವಿವರಿಸಿದ್ದಾರೆ. “ನಮಗೆ ಬಂದ ಮಾಹಿತಿ ಪ್ರಕಾರ ಇಡೀ ಬೆಂಗಳೂರಿನಲ್ಲಿ ಈ ರೀತಿ ಕಳಪೆ ಕಾಮಗಾರಿ ನಡೆಯುತ್ತಿದೆ. ಇಂದು ಹಾಕಿರುವ ಡಾಂಬರು ಕೈಯಲ್ಲೇ ಕಿತ್ತಬಹುದಾಗಿದೆ! ” ಎಂದು ಚಂದ್ರಶೇಖರ್ ಅವರು ಬರೆದುಕೊಂಡಿದ್ದಾರೆ

 

 

ಮತ್ತೊಂದು ಭಯಾನಕ ವಿಡಿಯೊಂದನ್ನ ಕೂಡ ಸಂಸದರು ಶೇರ್ ಮಾಡಿದ್ದು ವಿಡಿಯೋದಲ್ಲಿ ಲಾರಿಯೊಂದು ರಸ್ತೆಯಲ್ಲಿ ಕುಸಿದು ಹೋಗಿ ಚಾಲಕ ಪರದಾಡುತ್ತಿದ್ದಾನೆ. ಕಳಪೆ ಕಾಮಗಾರಿಯಿಂದಾಗಿ ಡಾಂಬರು ಕುಸಿದು ಲಾರಿ ಸಿಕ್ಕಿಹಾಕಿಕೊಂಡ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top