fbpx
ಸಮಾಚಾರ

ವಾರ ಭವಿಷ್ಯ: ಫೆಬ್ರವರಿ 06ರಿಂದ ಫೆಬ್ರವರಿ 12ನೇ ತಾರೀಕಿನವರೆಗೆ

ಮೇಷ ರಾಶಿ 

 

ಶ್ರಮವಹಿಸಿ ಕೆಲಸ ಮಾಡಿ, ಆಲಸ್ಯ ಪಡಬೇಡಿ, ಕುಟುಂಬ ಸೌಖ್ಯ, ಸಾಲ ಬಾದೆ, ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ, ನಿಮಗೆ ಈ ವಾರ ಶುಭ ಸಮಯವಾಗಿದೆ, ವಾಣಿಜ್ಯ ಕ್ಷೇತ್ರದವರಿಗೆ ಲಾಭವಾಗಲಿದೆ.
ಪರಿಹಾರ 
ಕುಲದೇವರ ಆರಾಧನೆಯನ್ನು ಮತ್ತು ಪ್ರಾರ್ಥನೆಯನ್ನು ಮಾಡಿ ಕಣ್ಣಿಲ್ಲದೆ ಇರುವ ಅಂಧ ಮಕ್ಕಳಿಗೆ ಅನ್ನ ಆಹಾರವನ್ನು ದಾನ ಮಾಡಿ.

ವೃಷಭ ರಾಶಿ

 

ಈ ವಾರ ಕೀರ್ತಿ, ಯಶಸ್ಸು ಲಭ್ಯವಾಗಲಿದೆ, ಆದರೆ ದುಡುಕಿನ ಸ್ವಭಾವ ಹೆಚ್ಚಾಗಿ ಕಂಡು ಬರಲಿದೆ, ಆದ್ದರಿಂದ ದುಡುಕುತನವನ್ನು ಬಿಟ್ಟುಬಿಡಿ, ವಾಹನ ರಿಪೇರಿಗೋಸ್ಕರ ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ,ಆದ್ದರಿಂದ ಖರ್ಚಿನ ಮೇಲೆ ಹಿಡಿತವನ್ನು ಇಟ್ಟುಕೊಳ್ಳಿ, ಸಾರ್ವಜನಿಕ ಕ್ಷೇತ್ರದಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ ಮಾಡುವ ಶುಭಯೋಗ,ಭೂ ಲಾಭವಾಗಲಿದೆ.
ಪರಿಹಾರ
“ಓಂ ಸೂರ್ಯ ನಾರಾಯಣಾಯ ನಮಃ” ಸೂರ್ಯನಾರಾಯಣ ಈ ಮಂತ್ರವನ್ನು 108 ಬಾರಿ ಜಪಿಸಿ ಹಸು ಮತ್ತು ಕರುವಿಗೆ ಬೆಲ್ಲ ಮತ್ತು ಬಾಳೆಹಣ್ಣನ್ನು ತಿನ್ನಿಸಿ ನಮಸ್ಕಾರವನ್ನು ಮಾಡಿ.

ಮಿಥುನ ರಾಶಿ

 

ಈ ವಾರ ಮಹಿಳೆಯರಿಗೆ ಶುಭ ವಾಗಿರುವ ವಾರವಾಗಲಿದೆ, ಅಧಿಕಾರಿಗಳಿಂದ ಪ್ರಶಂಸೆ, ವಸ್ತ್ರ ಖರೀದಿ ಮಾಡುವ ಶುಭಯೋಗ, ಸುಖ ಭೋಜನ ಪ್ರಾಪ್ತಿಯಾಗಲಿದೆ, ಇತರರ ಮಾತಿನಿಂದ ಕಲಹಗಳು ಉಂಟಾಗುವ ಸಾಧ್ಯತೆಗಳಿವೆ, ಪ್ರಭಾವಿ ವ್ಯಕ್ತಿಗಳ ಭೇಟಿಯನ್ನು ಮಾಡಲಿದ್ದೀರಿ, ನೆಮ್ಮದಿಯ ವಾತಾವರಣ ಮೂಡಲಿದೆ,ನಾನಾ ವಿಚಾರಗಳಲ್ಲಿ ಆಸಕ್ತಿ ನಿಮಗೆ ಹೆಚ್ಚಾಗಲಿದೆ,
ಪರಿಹಾರ
“ ಓಂ ಪಮಾನಾಯ ನಮಃ” ಈ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸಿ, ಮಂಗಳವಾರ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ನಾಟಿ ತುಳಸಿಯನ್ನು ಅರ್ಪಿಸಿ,ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕಟಕ ರಾಶಿ

 

ಪಟ್ಟು ಬಿಡದೆ ಹೇಳಿದ ಕೆಲಸವನ್ನು ಮಾಡಿ, ಹಠ ಸಾಧನೆ ಮಾಡುವಿರಿ, ಕೆಲಸ ಕಾರ್ಯಗಳಲ್ಲಿ ಪರಿಶ್ರಮವನ್ನು ಪಡುವಿರಿ, ಆಲಸ್ಯ ಮನೋಭಾವ ವಾರದ ಮಧ್ಯ ಭಾಗದಲ್ಲಿ ಕಂಡುಬರುತ್ತದೆ. ಶತ್ರು ಬಾಧೆ, ಶತ್ರುಗಳು ಮಾಡುವ ಷಡ್ಯಂತ್ರಕ್ಕೆ ಬಲಿಯಾಗಬೇಕಾಗುತ್ತದೆ, ಸಂಬಂಧಿಗಳಿಂದ ಆದಷ್ಟು ದೂರವಿರಿ, ಉದ್ಯೋಗದಲ್ಲಿ ಅಭಿವೃದ್ಧಿ.
ಪರಿಹಾರ
ಪ್ರತಿ ನಿತ್ಯ ಆದಿತ್ಯ ಹೃದಯ ಪಾರಾಯಣವನ್ನು ಮಾಡಿ, ಬಡರೋಗಿಗಳಿಗೆ ಕೈಲಾದ ಸೇವೆಯನ್ನು ಮಾಡಿ.

ಸಿಂಹ ರಾಶಿ

 

ಸತ್ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ, ನಗದು ವ್ಯವಹಾರಗಳಲ್ಲಿ ಎಚ್ಚರವಹಿಸಿ, ಹಿತ ಶತ್ರುಗಳಿಂದ ತೊಂದರೆ ಉಂಟಾಗಲಿದೆ, ಏನೋ ಒಂದು ರೀತಿಯ ತಳಮಳ ಉಂಟಾಗಲಿದೆ, ಮಾಡುವ ಕೆಲಸಗಳಲ್ಲಿ ಕಾರ್ಯಗಳಲ್ಲಿ ವಿಜ್ಞಗಳು ಉಂಟಾಗಲಿವೆ.
ಪರಿಹಾರ
“ಓಂ ಸುಬ್ರಹ್ಮಣ್ಯಯ ನಮಃ”ಈ ಮಂತ್ರವನ್ನು 21 ಬಾರಿ ಜಪಿಸಿ, ಮಂಗಳವಾರ ಸುಬ್ರಹ್ಮಣ್ಯನ ದೇವಾಲಯಕ್ಕೆ ಭೇಟಿ ಮಾಡಿ, ಕೆಂಪು ಹೂವುಗಳನ್ನು ಅರ್ಪಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕನ್ಯಾ ರಾಶಿ

 

ಎಲ್ಲರ ಮನಸ್ಸನ್ನು ಗೆಲ್ಲುವ ಮನೋಭಾವ, ಬುದ್ಧಿಶಕ್ತಿ ಇವರ ಲಭ್ಯವಾಗಲಿದೆ, ಅದನ್ನು ಸದುಪಯೋಗ ಪಡಿಸಿಕೊಳ್ಳಿ, ಮಾತಿನ ಚಕಮಕಿ, ಮಾತಿನ ಮೇಲೆ ಹಿಡಿತವಿರಲಿ,ವಾರಾಂತ್ಯದಲ್ಲಿ ನೆಮ್ಮದಿಯನ್ನು ಪಡೆಯಲಿದ್ದೀರಿ, ಕೃಷಿಕರಿಗೆ ಉತ್ತಮ ಲಾಭವಾಗಲಿದೆ, ಆಕಸ್ಮಿಕ ಧನಲಾಭ ಲಭಿಸಲಿದೆ.
ಪರಿಹಾರ
ದಕ್ಷಿಣಾಮೂರ್ತಿಯ ದೇವಾಲಯಕ್ಕೆ ಭೇಟಿ ನೀಡಿ ಬುಧವಾರ ಕಡಲೆ ಕಾಳಿನ ಹಾರವನ್ನು ಹಾಕಿ ನಮಸ್ಕಾರ ಮಾಡಿ.

ತುಲಾ ರಾಶಿ 

 

ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿಯಾಗಲಿದೆ, ಚಂಚಲ ಮನಸ್ಸು , ಅಧಿಕ ತಿರುಗಾಟ ಮಾಡುವಿರಿ, ಹೇಳಲಾಗದ ಸಂಕಟ ನಿಮ್ಮ ಮನಸ್ಸಿನಲ್ಲಿ ಇರುತ್ತದೆ , ವಾರಾಂತ್ಯದಲ್ಲಿ ಮಾನಸಿಕ ವ್ಯಥೆ, ಮೇಲೆ ಅನುಭವಿಸುತ್ತಿದ್ದೀರ ವಿದ್ಯಾರ್ಥಿಗಳನ್ನು ಓದಿನಲ್ಲಿ ನಿರಾಸಕ್ತಿ ಉಂಟಾಗಲಿದೆ, ಶತ್ರುಗಳ ಭಾದೆಗೆ ಬಲಿಯಾಗಬೇಕಾಗುತ್ತದೆ, ಶತ್ರುಗಳು ಮಾಡುವ ಷಡ್ಯಂತ್ರಕ್ಕೆ ಬಲಿಯಾಗಬೇಕಾಗುತ್ತದೆ, ಸ್ವಲ್ಪ ಜಾಗ್ರತೆಯನ್ನು ವಹಿಸಿ.
ಪರಿಹಾರ 
“ಓಂ ಕಾರ್ಯಸಿದ್ದಿ ಆಂಜನೇಯಾಯ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ, ಆಂಜನೇಯನ ದೇವಾಲಯಕ್ಕೆ ಅರ್ಪಿಸಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ವೃಶ್ಚಿಕ ರಾಶಿ

 

ಯಂತ್ರೋಪಕರಣಗಳ ಖರೀದಿಯನ್ನು ಮಾಡುವಿರಿ, ಪ್ರವಾಸ ಹೋಗುವ ಸಾಧ್ಯತೆಗಳಿವೆ, ಸ್ಥಿರಾಸ್ತಿ ಸಂಪಾದನೆ ಮಾಡಲಿದ್ದೀರಿ, ಮಿತ್ರರಿಂದ ವಂಚನೆಗೆ ಒಳಗಾಗುವ ಸಂಭವ ಇದೆ ಆದ್ದರಿಂದ ಎಚ್ಚರ ವಹಿಸಿ, ಕೈ ಹಾಕಿದ ಕೆಲಸದಲ್ಲಿ ವಿಘ್ನಗಳು ಉಂಟಾಗಲಿವೆ, ಪುಣ್ಯ ಕ್ಷೇತ್ರ ದರ್ಶನ ಮಾಡುವ ಶುಭಯೋಗ.
ಪರಿಹಾರ
ಪ್ರತಿದಿನ ಅಶ್ವಥ ವೃಕ್ಷ ಪ್ರದಕ್ಷಿಣೆಯನ್ನು ಮಾಡಿ ವಟು ಬ್ರಾಹ್ಮಣರಿಗೆ ಸ್ವಯಂ ಪಾಕವನ್ನು ನೀಡಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ಧನಸ್ಸು ರಾಶಿ 

 

ಈ ವಾರ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಲಿದ್ದೀರಿ, ಆಪ್ತರಿಂದ ಸಹಾಯವನ್ನು ಪಡೆಯುವಿರಿ, ಮಾನಸಿಕ ನೆಮ್ಮದಿ, ಸ್ತ್ರೀಯರಿಗೆ ಲಾಭ, ಎಷ್ಟೇ ಹಣ ಬಂದರೂ ನಿಮ್ಮ ಬಳಿ ಉಳಿಯುವುದಿಲ್ಲ , ಅಮೂಲ್ಯ ವಸ್ತುಗಳನ್ನು ಖರೀದಿ ಮಾಡುವಿರಿ, ಸಾಲ ಮರುಪಾವತಿಯನ್ನು ಮಾಡಲಿದ್ದೀರಿ .
ಪರಿಹಾರ
ಪ್ರತಿದಿನ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ ಬುದುವಾರ ಅಂದ ಮಕ್ಕಳಿಗೆ ಕೈಲಾದ ಸೇವೆಯನ್ನು ಮಾಡಿ.

ಮಕರ ರಾಶಿ

 

ಈ ವಾರ ಸಣ್ಣಪುಟ್ಟ ವಿಚಾರಗಳಿಂದ ಕಲಹ ಉಂಟಾಗಲಿದೆ , ನೂತನ ಕೆಲಸ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ, ವಾರಾಂತ್ಯದಲ್ಲಿ ಮಾನಸಿಕ ನೆಮ್ಮದಿ ಲಭ್ಯವಾಗಲಿದೆ, ಇಲ್ಲಸಲ್ಲದ ಅಪವಾದಗಳು, ನಿಂದನೆಗಳು ನಿಮ್ಮ ಮೇಲೆ ಬರಲಿವೆ, ಋಣಬಾಧೆ, ವಾಹನ ಯೋಗ.
ಪರಿಹಾರ
ಮಹಾಲಕ್ಷ್ಮಿ ಅಷ್ಟೋತ್ತರವನ್ನು ಪ್ರತಿನಿತ್ಯ ಪಾರಾಯಣ ಮಾಡಿ ಶುಕ್ರವಾರ 8 ಜನ ಸುಮಂಗಲಿಯರಿಗೆ ಅರಿಶಿನ ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ.

ಕುಂಭ ರಾಶಿ

 

ಈ ವಾರ ತಾಳ್ಮೆ ಅತ್ಯಗತ್ಯ, ಪರರಿಂದ ತೊಂದರೆ ಉಂಟಾಗಲಿದೆ, ಆರೋಗ್ಯದಲ್ಲಿ ಸಮಸ್ಯೆ ಉಂಟಾಗಲಿದೆ, ಅಪರಿಚಿತರ ವಿಚಾರದಲ್ಲಿ ಎಚ್ಚರವಾಗಿರಿ, ಅಪವಾದದಿಂದ ಮುಕ್ತರಾಗುವಿರಿ, ಶುಭ ಫಲಗಳು ಪ್ರಾಪ್ತಿಯಾಗಲಿವೆ.
ಪರಿಹಾರ
ಪ್ರತಿನಿತ್ಯ ವೃದ್ಧ ದಂಪತಿಗಳಿಗೆ ನಮಸ್ಕಾರ ಮಾಡಿ, ಆಶೀರ್ವಾದವನ್ನು ಪಡೆಯಿರಿ

ಮೀನ ರಾಶಿ

 

ಕೈ ಹಾಕಿದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸಲಿದೆ, ನಿಮ್ಮ ಶ್ರಮಕ್ಕೆ ತಕ್ಕ ಫಲ ನಿಮಗೆ ಲಭಿಸಲಿದೆ, ಎಷ್ಟೇ ಒತ್ತಡವಿದ್ದರೂ ಜೀವನದಲ್ಲಿ ತಾಳ್ಮೆ ಅತ್ಯಗತ್ಯ ,ವ್ಯಾಪಾರದಲ್ಲಿ ಲಾಭ, ಸ್ನೇಹಿತರಿಗೆ ಸಹಾಯ ಮಾಡುವಿರಿ, ವೈರಿಗಳಿಂದ ದೂರವಿರುವುದು ಉತ್ತಮ.
ಪರಿಹಾರ
ಲಲಿತ ಸಹಸ್ರನಾಮವನ್ನು ಪಾರಾಯಣ ಮಾಡಿ, ಶುಕ್ರವಾರ ಅಮ್ಮನವರಿಗೆ ಸಿಹಿ ನೈವೇದ್ಯವನ್ನು ಮಾಡಿ ಅರ್ಪಿಸಿ, ಬಡಮಕ್ಕಳಿಗೆ ಆ ನೈವೇದ್ಯವನ್ನು ವಿನಿಯೋಗಿಸಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top