fbpx
ಸಮಾಚಾರ

ದಕ್ಷಿಣ ಭಾರತದ ಖ್ಯಾತ ಗಾಯಕ ಕೈಲಾಶ್ ಕೇರ್ ಅಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರಂತೆ! ಕಾರಣವೇನು ಗೊತ್ತಾ?

ಪ್ರಪಂಚದ ಖ್ಯಾತ ಗಾಯಕರಲ್ಲಿ ಕೈಲಾಶ್ ಕೇರ್ ಕೂಡ ಒಬ್ಬರು. ಬಹುಭಾಷಾ ಗಾಯಕರಾಗಿರುವ ಇವರು ಕನ್ನಡದಲ್ಲೂ ಸಹ ಹಲವಾರು ಸಿನಿಮಾಗಳಿಗೆ ಧ್ವನಿ ಯಾಗಿದ್ದಾರೆ. ಆದರೆ ಇಷ್ಟೊಂದು ಹೆಸರು ಗಳಿಸಿರುವ ಇವರು ತಮ್ಮ ಜೀವನದಲ್ಲಿ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರಂತೆ.

ಪ್ರತಿಯೊಬ್ಬ ಯಶಸ್ಸಿನ ವ್ಯಕ್ತಿಯ ಹಿಂದೆ ಕೆಲವು ಕಹಿ ಘಟನೆಗಳು ಇರುತ್ತವೆ. ಇಂತಹ ಕಹಿ ಘಟನೆಗಳನ್ನು ಕೆಲವರು ಹೇಳಿಕೊಳ್ಳುತ್ತಾರೆ ಮತ್ತು ಇನ್ನು ಕೆಲವರು ಅದನ್ನು ಹೆಚ್ಚಾಗಿ ಬಹಿರಂಗಪಡಿಸುವುದಿಲ್ಲ. ಇದೀಗ ಕೈಲಾಶ್ ಕೇರ್ ತಮ್ಮ ಜೀವನದ ಕಹಿ ಸತ್ಯವೊಂದನ್ನು ಹೇಳಿದ್ದು, ಅದು ಒಂದು ಕ್ಷಣ ಎಲ್ಲರನ್ನು ಘಾಬರಿಗೊಳಿಸಿತು.

ಕೈಲಾಶ್ ಕೇರ್ ಅವರಿಗೆ ಆಗಿನ್ನೂ 20 ವರ್ಷ ವಯಸ್ಸು. ಎಕ್ಸ್ಪರ್ಟ್ ಬಿಸಿನೆಸ್ ಆರಂಭಿಸಿದ್ದ ಇವರು ಜರ್ಮನಿಗೆ ವಸ್ತುಗಳನ್ನು ರಫ್ತು ಮಾಡುತ್ತಿದ್ದರು. ಆದರೆ ಇದರಿಂದ ಬಹಳಷ್ಟು ನಷ್ಟವನ್ನು ಅನುಭವಿಸಿದ್ದ ಕಾರಣ ರಿಷಿಕೇಶಿಗೆ ಹೋಗಿ ಅರ್ಚಕನಾಗಬೇಕು ಎಂದುಕೊಂಡರಂತೆ. ಕೊನೆಗೂ ಅದು ಕೂಡ ಸಾಧ್ಯವಾಗದೇ ಇದ್ದಾಗ ಜೀವನದಲ್ಲಿ ಬಹಳಷ್ಟು ನೊಂದು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ ಗಂಗಾ ನದಿಗೆ ಹಾರಿದ್ದರಂತೆ. ಆದರೆ ಇವರ ಅದೃಷ್ಟ ಚೆನ್ನಾಗಿ ಇತ್ತು. ಇವರು ನೀರಿಗೆ ಹಾರಿ ಒದ್ದಾಡುತ್ತಿದ್ದನ್ನು ಕಂಡ ವ್ಯಕ್ತಿ ನೀರಿಗೆ ದುಮುಕಿ ಇವರನ್ನು ರಕ್ಷಿಸಿದ್ದನು. ಒಂದು ವೇಳೆ ಆ ವ್ಯಕ್ತಿ ಇಂದು ಕೈಲಾಶ್ ಕೇರ್ ಅವರನ್ನು ರಕ್ಷಿಸದಿದ್ದರೆ ಇಂದು ನಮಗೆ ಅವರ ಹಾಡುಗಳನ್ನು ಕೇಳುವ ಭಾಗ್ಯ ಸಿಗುತ್ತಿರಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top